ಬಳ್ಳಾರಿ: ಕರ್ನಾಟಕ-ಆಂಧ್ರಪ್ರದೇಶದ ಗಡಿಪ್ರದೇಶದಲ್ಲಿ ಗಡಿಗುರುತು ಕಾರ್ಯ ಶುರು

First Published Oct 17, 2020, 2:00 PM IST

ಬಳ್ಳಾರಿ(ಅ.17): ಸುಪ್ರೀಂಕೋರ್ಟ್‌ ನಿರ್ದೇಶನದ ಹಿನ್ನೆಲೆಯಲ್ಲಿ ಕರ್ನಾಟಕ ಹಾಗೂ ಆಂಧ್ರಪ್ರದೇಶದ ನಡುವಿನ ಗಡಿ ಗುರುತಿನ ಸಮೀಕ್ಷಾ ಕಾರ್ಯ ಶುಕ್ರವಾರ ಆರಂಭಗೊಂಡಿದ್ದು, ಸರ್ವೆ ಆಫ್‌ ಇಂಡಿಯಾ ಅಧಿಕಾರಿಗಳ ತಂಡ ಶುಕ್ರವಾರ ಆಂಧ್ರಪ್ರದೇಶದ ಓಬಳಾಪುರಂ ಹಾಗೂ ಜಿಲ್ಲೆಯ ಹಲಕುಂದಿ ನಡುವಿನ ರಾಜ್ಯಗಡಿ ಪ್ರದೇಶದಲ್ಲಿ ಗಡಿಗುರುತಿನ ಸಮೀಕ್ಷೆ ನಡೆಸಿದ್ದಾರೆ. 
 

ಸರ್ವೆ ಆಫ್‌ ಇಂಡಿಯಾದ ಅಧೀಕ್ಷಕ ಅಧಿಕಾರಿ ದೇವಸಿಂಗ್‌ ಮೆಹರ್‌ ಹಾಗೂ ಸರ್ವೆ ಅಧಿಕಾರಿ ಪಿ. ಪ್ರೇಮಕುಮಾರ್‌ ನೇತೃತ್ವದಲ್ಲಿ ನಡೆದ ಸಮೀಕ್ಷೆಯಲ್ಲಿ ಅಂತರ ರಾಜ್ಯದ ಗಡಿಗುರುತನ್ನು ಪತ್ತೆ ಹಚ್ಚಿದರು.
undefined
ಸುಗ್ಗಲಮ್ಮ ದೇವಸ್ಥಾನ, ಒಎಂಸಿ ಗಣಿಗಾರಿಕೆ ಪ್ರದೇಶದಲ್ಲಿ ಓಡಾಡಿ ಗಡಿಗುರುತು ಕಾರ್ಯ ನಡೆಸಿದ ಅಧಿಕಾರಿಗಳ ತಂಡ, ಈ ಹಿಂದಿನ ಗಡಿಗುರುತುಗಳನ್ನು ಸಹ ಪರಿಶೀಲನೆ ನಡೆಸಿತು.
undefined
ಆಂಧ್ರಪ್ರದೇಶ ಹಾಗೂ ಸಂಡೂರು ತಾಲೂಕು ಗಡಿಯಿಂದ ವಿವಾದಿತ 4 ಕಿ.ಮೀ. ವ್ಯಾಪ್ತಿಯಲ್ಲಿ ಪ್ರತಿ 12 ಅಡಿಗೆ ಒಂದರಂತೆ ಗಡಿಗುರುತು ಅಳವಡಿಸುವ ಹಾಗೂ ಹದ್ದುಬಸ್ತು ಹಾಕುವ ಕಾರ್ಯ ನಡೆಯಿತು.
undefined
ಸರ್ವೆ ಆಫ್‌ ಇಂಡಿಯಾ, ಭೂಮಾಪನಾ ಇಲಾಖೆ, ಅರಣ್ಯ, ಕಂದಾಯ ಸೇರಿದಂತೆ ಎರಡು ರಾಜ್ಯಗಳ 45ಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ಸಿಬ್ಬಂದಿ ಗಡಿಗುರುತು ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
undefined
ಜಿಂದಾಲ್‌ ಗೆಸ್ಟ್‌ ಹೌಸ್‌ನಲ್ಲಿ ಉಳಿದುಕೊಂಡಿರುವ ಅಧಿಕಾರಿಗಳ ತಂಡ ಶುಕ್ರವಾರ ಮಧ್ಯಾಹ್ನದ ವರೆಗೆ ಸಭೆ ನಡೆಸಿ, ಬಳಿಕ ನಿಗದಿತ ಸ್ಥಳಕ್ಕೆ ತೆರಳಿತು.
undefined
ಭೂಮಾಪನಾ ಇಲಾಖೆಯ ಉಪ ನಿರ್ದೇಶಕಿ ಸುಮಾ ನಾಯಕ್‌, ಸಹಾಯಕ ನಿರ್ದೇಶಕ ಉದಯಶಂಕರ್‌ ಸೇರಿದಂತೆ ಕಂದಾಯ, ಸರ್ವೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸರ್ವೆ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.
undefined
ಒಟ್ಟು 45 ದಿನಗಳ ಕಾಲ ಸರ್ವೆ ಕಾರ್ಯ ನಡೆಯಲಿದೆ ಎಂದು ತಿಳಿದು ಬಂದಿದೆ.
undefined
click me!