ಫೇಸ್‌ಬುಕ್ ನೋಡಿ 14 ಸಾವಿರ ಕೆಜಿ ಕುಂಬಳ ಖರೀದಿಗೆ ಮುಂದಾದ ಸರ್ಕಾರ

First Published Apr 17, 2020, 1:11 PM IST

ಲಾಕ್‌ಡೌನ್‌ನಿಂದಾಗಿ ರಾಜ್ಯದಲ್ಲಿ ರೈತರು ಬೆಳೆ ಮಾರಲಾಗದೆ ಕಷ್ಟಪಡುತ್ತಿದ್ದರೆ, ಕೇರಳದಲ್ಲಿ ಫೇಸ್‌ಬುಕ್ ಪೋಸ್ಟ್ ನೋಡಿ ಸರ್ಕಾರವೇ ಬೆಳೆ ಖರೀದಿಸಲು ಮುಂದೆ ಬಂದಿದೆ. ಹಲವು ಕಡೆ ರೈತರು ಬೆಳೆ ಮಾರಲಾಗದೆ ಟ್ರ್ಯಾಕ್ಟರ್ ಓಡಿಸಿ ನಾಶ ಮಾಡುತ್ತಿದ್ದಾರೆ. ಲಾಕ್‌ಡೌನ್‌ನಿಂದ ಬೆಳೆ ಮಾರಲಾಗದೆ ರೈತರು ಕಷ್ಟಪಡುತ್ತಿದ್ದರೆ ಸ್ವತಃ ಮುಂದೆ ಬಂದು ಬೆಳೆ ಖರೀದಿಗೆ ಮುಂದಾಗುವ ಮೂಲಕ ಕೇರಳ ಸರ್ಕಾರ ಮಾದರಿಯಾಗಿದೆ. ಇಲ್ಲಿವೆ ಫೋಟೋಸ್

ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಲಾಕ್‌ಡೌನ್‌ನಿಂದಾಗಿ ಬೀದಿಪಾಲಾಗಲಿದ್ದ 14 ಸಾವಿರ ಕೆ.ಜಿ. ಕುಂಬಳ ಕಾಯಿಯ ಫೋಟೋವನ್ನು ಜಾಲತಾಣದಲ್ಲಿ ಹಾಕಿದ ಪರಿಣಾಮ ಕುಂಬಳ ಕಾಯಿ ಖರೀದಿಗೆ ಸ್ವತಃ ಸರ್ಕಾರವೇ ಮುಂದಾದ ವಿದ್ಯಮಾನ ಕೇರಳದ ಕಾಸ​ರ​ಗೋಡು ಜಿಲ್ಲೆಯ ಬದಿಯಡ್ಕದಲ್ಲಿ ನಡೆದಿದೆ.
undefined
ಕಾಸರಗೋಡಿನ ಬದಿಯಡ್ಕದ ಪ್ರಗತಿಪರ ಕೃಷಿಕ ಬೈಕುಂಜ ಶಂಕರನಾರಾಯಣ ಭಟ್‌ ಅವರು ತರಕಾರಿ ಕೃಷಿ ಮಾಡಿದ್ದರು. ಈ ಬಾರಿ ಅವರಿಗೆ ಕುಂಬಳ ಕಾಯಿಯಲ್ಲಿ ಉತ್ತಮ ಬೆಳೆ ಬಂದಿತ್ತು. ಆದರೆ ಅದನ್ನು ಮಾರಾಟ ಮಾಡಲು ಅನಿರೀಕ್ಷಿತ ಲಾಕ್‌ಡೌನ್‌ ಅಡ್ಡಿಯಾಗಿತ್ತು. ಇದರಿಂದ ದೃತಿಗೆಟ್ಟಶಂಕರನಾರಾಯಣ ಭಟ್ಟರು ತಮ್ಮ ಆಪ್ತರಲ್ಲಿ ಇದನ್ನು ತಿಳಿಸಿದ್ದರು.
undefined
ಲಾಕ್‌ಡೌನ್‌ನಿಂದಾಗಿ ಮಾರಲಾಗದೆ ಉಳಿದಿದ್ದ ಬೂದು ಕುಂಬಳ ಬೆಳೆ
undefined
ಕೂಡಲೇ ಕಾರ್ಯಪ್ರವೃತ್ತರಾದ ಅವರ ಆಪ್ತ, ಅಂತರ್ಜಲ ತಜ್ಞ ಡಾ.ಶ್ರೀಪಡ್ರೆ ಅವರು ಕಟಾವು ಮಾಡಿ ದಾಸ್ತಾನು ಇರಿಸಿದ್ದ ಕುಂಬಳಕಾಯಿಯ ಫೋಟೋ ತೆಗೆದು ಜಾಲತಾಣದಲ್ಲಿ ಬುಧವಾರ ಪೋಸ್ಟ್‌ ಮಾಡಿದ್ದರು.
undefined
ಕೂಡಲೇ ಇದನ್ನು ಗಮನಿಸಿದ ಕೇರಳ ಕೃಷಿ ಸಚಿವ ಅನಿಲ್‌ ಕುಮಾರ್‌ ಅವರು ಹಾರ್ಟಿ-ಕಾಪ್‌ರ್‍ ಮೂಲಕ ಖರೀದಿಸಲು ನಿರ್ಧರಿಸಿದ್ದರು.
undefined
ಮರುದಿನ ಶಂಕರನಾರಾಯಣ ಭಟ್‌ಗೆ ನೇರವಾಗಿ ಕರೆ ಮಾಡಿ ಬೆಳೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಗುರುವಾರ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಶಂಕರನಾರಾಯಣ ಭಟ್ಟರ ಮನೆಗೆ ಕಳುಹಿಸಿ ಕುಂಬಳಕಾಯಿ ಖರೀದಿಗೆ ವ್ಯವಸ್ಥೆ ಮಾಡುವ ಮೂಲಕ ಸಚಿವರು ಲಾಕ್‌ಡೌನ್‌ ವೇಳೆಯಲ್ಲೂ ಸರ್ಕಾರ ಬೆಳೆಗಾರರ ಪರವಾಗಿ ಇರುವ ಬಗ್ಗೆ ಧೈರ್ಯ ತುಂಬಿದರು.
undefined
ಕನಾರ್ಟಟಕ ಹಲವು ಭಾಗಗಳಲ್ಲಿ ರೈತರು ಬೆಳೆ ಮಾರಲಾಗದೆ ಟ್ರ್ಯಾಕ್ಟರ್ ಓಡಿಸಿ ಬೆಳೆ ನಾಶ ಮಾಡುತ್ತಿರುವುದು
undefined
click me!