ಆ್ಯನಿವರ್ಸರಿಗೆ ಫಾರಿನ್ ಹೋಗಿ ಸಿಕ್ಕಾಕ್ಕೊಂಡ ದಂಪತಿ..!

First Published Mar 21, 2020, 3:17 PM IST

ಕೊರೋನಾ ಭೀತಿ ಹೆಚ್ಚಾಗುತ್ತಿರುವಾಗಲೇ ವಿದೇಶಕ್ಕೆ ಹನಿಮೂನ್‌ಗೆ ಹೋಗಿದ್ದ ಚಂದನ್‌ ಶೆಟ್ಟಿ ನಿವೇದಿತಾ ಗೌಡ ಸೇಫ್ ಆಗಿ ಮರಳಿದ್ದಾರೆ. ಇದೀಗ ಬೆಂಗಳೂರಿನ ಜೋಡಿಯೊಂದು ತಮ್ಮ 5 ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಲು ಸ್ಪೇನ್‌ಗೆ ಹೋಗಿ ಅಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ.

ಬೆಂಗಳೂರಿನ ಜೋಡಿಯೊಂದು ತಮ್ಮ 5 ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಲು ಸ್ಪೇನ್‌ಗೆ ಹೋಗಿ ಅಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ.
undefined
ನನ್ನ ಮಗ ಸೊಸೆ ಮಾರ್ಚ್ 9 ರಂದು ಸ್ಪೇನ್ ಗೆ ಹೋಗಿದ್ದರು ಎಂದು ಪ್ರತಾಪ್ ತಂದೆ ನಂದಕುಮಾರ್ ಹೇಳಿದ್ದಾರೆ.
undefined
ಐದನೇ ವರ್ಷದ ವೆಡ್ಡಿಂಗ್ ಆ್ಯನಿವರ್ಸರಿ ಹಿನ್ನಲೆ ಪ್ರತಾಪ್ ಪತ್ನಿ ಜೊತೆ ಸ್ಪೇನ್‌ಗೆ ಹೋಗಿದ್ದರು.
undefined
ಇಬ್ಬರೂ ಇವತ್ತು ಬೆಂಗಳೂರಿಗೆ ಬರಬೆರಕಿತ್ತು. ಆದರೆ ಫ್ಲೈಟ್ ಕ್ಯಾನ್ಸಲ್ ಆಗಿರುವುದರಿಂದ ಇಬ್ಬರೂ ಸಿಕ್ಕಿ ಹಾಕಿಕೊಂಡಿದ್ದಾರೆ.
undefined
ತಾವು ಧರಿಸಿರುವ ಬಟ್ಟೆ ಒರತು ಪಡಿಸಿ ತಮ್ಮ ಬಳಿ ಬಟ್ಟೆಯಾಗಲೀ, ಹಣವಾಗಲೀ ಇಲ್ಲವೆಂದು ಅವರು ವಿಡಿಯೋ ಮೂಲಕ ಹೇಳಿದ್ದಾರೆ.
undefined
ಆದಷ್ಟು ಬೇಗ ನನ್ನ ಮಗ, ಸೊಸೆಯನ್ನ ರಾಜ್ಯಕ್ಕೆ ಕರೆತನ್ನಿ ಎಂದು ಪ್ರತಾಪ್ ತಂದೆ ಹಾಗೂ ತಾಯಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
undefined
ದಯಮಾಡಿ ಸರ್ಕಾರ ಗಮನ ಹರಿಸಿ ಇಬ್ಬರೂ ಭಾರತಕ್ಕೆ ಬರಲು ವ್ಯವಸ್ಥೆ ಮಾಡಬೇಕು ಎಂದು‌ ಮನವಿ ಮಾಡಿಕೊಂಡಿದ್ದಾರೆ.
undefined
ಕೊರೋನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಹಲವು ವಿಮಾನಗಳನ್ನು ರದ್ದು ಮಾಡಲಾಗಿದೆ.
undefined
ಹಲವು ಅರಬ್ ರಾಷ್ಟ್ರಗಳಿಗಿರುವ ವಿಮಾನಗಳು ಈ ಹಿಂದೆಯೇ ರದ್ದಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಹೆಚ್ಚಿನ ನಿಗಾ ವಹಿಸಿದೆ.
undefined
ವಿದೇಶದಿಂದ ಬಂದವರಿಂದಲೇ ಭಾರತದಲ್ಲಿ ಸೋಂಕು ಹರಡುತ್ತಿದ್ದು, ಈ ನಿಟ್ಟಿನಲ್ಲಿ ವಿಮಾನಗಳು, ರೈಲುಗಳು, ಬಸ್‌ ಸೇವೆಯನ್ನೂ ರದ್ದು ಮಾಡಲಾಗಿದೆ.
undefined
ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದ ಜೋಡಿ ಈಗ ಆತಂಕಕ್ಕೊಳಗಾಗಿದ್ದಾರೆ.
undefined
ಬೆಂಗಳೂರಿನಲ್ಲಿ ಈಗಾಗಲೇ 18 ಜನರಿಗೆ ಕೊರೋನಾ ವೈರಸ್ ತಗುಲಿದೆ.
undefined
ಕೊರೋನಾ ಭೀತಿ ಹೆಚ್ಚಾಗಿದ್ದು, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ನಾಳೆ ದೇಶಾದ್ಯಂತ ಜನತಾ ಕರ್ಫ್ಯೂ ಘೋಷಿಸಲಾಗಿದೆ.
undefined
click me!