ಗಂಗಾವತಿ: ವಿರೂಪಾಪುರಗಡ್ಡೆಯಲ್ಲಿ​ನ ಅಕ್ರಮ ರೆಸಾರ್ಟ್‌ ತೆರವು

First Published Oct 2, 2020, 12:07 PM IST

ಗಂಗಾವತಿ(ಅ.02): ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿರೂಪಾಪುರಗಡ್ಡೆಯಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದ ರೆಸಾರ್ಟ್‌ ಅನ್ನು ಗುರುವಾರ ಹಂಪಿ ಅಭಿವೃದ್ಧಿ ಪ್ರಾಧಿಕಾರ ಮತ್ತು ತಾಲೂಕು ಆಡಳಿತ ತೆರವು ಗೊಳಿಸಿದೆ.

ವರ್ಷದ ಹಿಂದೆ ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದ 21 ರೆಸಾರ್ಟ್‌ಗಳನ್ನು ತೆರವುಗೊಳಿಸಲಾಗಿತ್ತು. ಈಗ ಉಳಿದಿದ್ದ ಲಕ್ಷ್ಮೀ ಗೋಲ್ಡನ್‌ ಬೀಚ್‌ ರೆಸಾರ್ಟ್‌ ತೆರವುಗೊಳಿಸಲಾಯಿತು.
undefined
ಈ ರೆಸಾರ್ಟ್‌ ಮಾಲೀಕರು ಸುಪ್ರೀಂಕೋರ್ಟ್‌ ಆದೇಶ ಪ್ರಶ್ನಿಸಿ ತಡೆಯಾಜ್ಞೆ ತಂದಿದ್ದರು. ಈಗ ನ್ಯಾಯಾಲಯ ತಡೆಯಾಜ್ಞೆ ತೆರ​ವು​ಗೊ​ಳಿ​ಸಿದ ಹಿನ್ನೆಲೆಯಲ್ಲಿ ಹಂಪಿ ಪ್ರಾಧಿಕಾರ, ತಾಲೂಕು ಆಡಳಿತ ನೇತೃತ್ವದಲ್ಲಿ ತೆರವುಗೊಳಿಸಲಾ​ಗಿದೆ.
undefined
ಕಳೆದ ವರ್ಷ ಅನಧಿಕೃತವಾಗಿ ನಿರ್ಮಿಸಿದ್ದ 21 ರೆಸಾರ್ಟ್‌ಗಳನ್ನು ತೆರವುಗೊಳಿಸುವಂತೆ ಸುಪ್ರೀಂಕೋ​ರ್ಟ್‌ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಹಂಪಿ ಪ್ರಾಧಿಕಾರ ಮತ್ತು ಜಿಲ್ಲಾಡಳಿತ 21 ರೆಸಾ​ರ್ಟ್‌ಗಳನ್ನು ತೆರುವುಗೊಳಿಸಿತು.
undefined
ಹೈಕೋರ್ಟ್‌ಗೆ ಮನವಿ ಸಲ್ಲಿಸಿ ತೆರವು ಕಾರ್ಯಚರಣೆಗೆ ತಡೆಯಾಜ್ಞೆ ತಂದಿದ್ದ ಲಕ್ಷ್ಮೀ ಗೋಲ್ಡನ್‌ ಬೀಚ್‌ ರೆಸಾರ್ಟ್‌ ಮಾಲೀಕರು
undefined
ನಂತರ ಸೆ. 15ರಂದು ಹೈಕೋರ್ಟ್‌ ತಡೆಯಾಜ್ಞೆ ರದ್ದುಗೊಳಿಸಿ ತೆರವು ಕಾರ್ಯಚರಣೆಗೆ ಆದೇಶ ನೀಡಿತು. ಆದರೆ, ರೆಸಾರ್ಟ್‌ ಮಾಲೀಕರು ತಮಗೆ 15 ದಿನ ಕಾಲಾವಕಾಶ ನೀಡಬೇಕು ಎಂದು ಕೋರಿದ್ದರು. ಇದಕ್ಕೆ ಸಮಯ ನೀಡಿದ್ದರೂ ಸ್ವಯಂ ಪ್ರೇರಿತರಾಗಿ ತೆರವುಗೊಳಿಸದ ಕಾರಣ ಗುರುವಾರ ತೆರವುಗೊಳಿಸಲಾ​ಯಿ​ತು.
undefined
ಸುಮಾರು 3 ಕೋಟಿ ವೆಚ್ಚದಲ್ಲಿ ನಿರ್ಮಿಸಿ ಕೊಂಡಿದ್ದ 70 ಕೊಠಡಿಗಳು ಸೇರಿದಂತೆ ವಿವಿಧ ಆಸ್ತಿಯ ಕಟ್ಟಡ ತೆರುವುಗೊಳಿಸಿತು.
undefined
ನ್ಯಾಯಾ​ಲಯ ತಡೆ​ಯಾಜ್ಞೆ ತೆರ​ವು​ಗೊ​ಳಿ​ಸಿದ ಹಿನ್ನೆ​ಲೆ​ಯಲ್ಲಿ ನೆಲಸಮ
undefined
ಈ ಸಂದರ್ಭದಲ್ಲಿ ಹಂಪಿ ಪ್ರಾಧಿಕಾರದ ಯಮನ ನಾಯಕ, ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ, ಸಿಪಿಐ ಉದಯ ರವಿ, ಪಿಎಸ್‌ಐ ದೊಡ್ಡಪ್ಪ, ಕಂದಾಯ ಅಧಿಕಾರಿ ಮಂಜುನಾಥ ಸ್ವಾಮಿ ಇದ್ದರು.
undefined
click me!