ಸರ್ ಇದು ಒನ್ ವೇ ಅಂತ ಎಚ್ಚರಿಸಿದ ಪೇದೆ ಮಾತಿಗೆ ಬೆಲೆ ಕೊಟ್ಟ ಸಚಿವ

Published : Feb 13, 2019, 04:15 PM ISTUpdated : Feb 13, 2019, 04:20 PM IST
ಸರ್ ಇದು ಒನ್ ವೇ ಅಂತ ಎಚ್ಚರಿಸಿದ  ಪೇದೆ ಮಾತಿಗೆ ಬೆಲೆ ಕೊಟ್ಟ ಸಚಿವ

ಸಾರಾಂಶ

ಸಚಿವರಿಗೆ ಒನ್ ವೇ ನಲ್ಲಿ ಹೋಗ್ಬೇಡಿ ಎಂದು ಎಚ್ಚರಿಸಿದ ಟ್ರಾಫಿಕ್ ಪೇದೆ! ಪೇದೆ ಮಾತಿಗೆ ಬೆಲೆ ಕೊಟ್ಟ ಸಚಿವ! ಕಾರು ಇಳಿದು ನಡೆದುಕೊಂಡೇ ಹೋದ ಸಚಿವ!

ಬೆಂಗಳೂರು, (ಫೆ.13): ಅಧಿಕಾರದ ದರ್ಪ, ಅಪ್ಪನ ಹಣ, ಏನು ಮಾಡಿದರೂ ಜಯಿಸಿಕೊಳ್ಳಬಹುದೆಂಬ ಹುಂಬತನ ಕೆಲ ರಾಜಕಾರಣಿಗಳ ಮನಸ್ಥಿತಿಯಾಗಿರುತ್ತೆ. ಆದ್ರೆ ಈ ಸಚಿವರೊಬ್ಬರು ಪೇದೆ ಮಾತಿಗೆ ಬೆಲೆಕೊಟ್ಟು ನಿಯಮ ಪಾಲಿಸಿದ್ದಾರೆ.

ಹೈ ಗ್ರೌಂಡ್ ಟ್ರಾಫಿಕ್ ಪೇದೆ ನೀಡಿದ ಎಚ್ಚರಿಕೆಗೆ ಪ್ರವಾಸೋದ್ಯಮ ಸಚಿವ ಸಾ ರಾ ಮಹೇಶ್  ಎಚ್ಚೆತ್ತುಕೊಂಡಿರುವ ಅಪರೂಪ ಘಟನೆ ನಡೆದಿದೆ.

ಡಿಸಿಎಂ ಪುತ್ರಿ ರ್‍ಯಾಷ್ ಡ್ರೈವಿಂಗ್ ಮಾಡಿದ್ರೂ ಪೊಲೀಸರು ಕೇಳೋದೇ ಇಲ್ಲ!

ಸಚಿವ ಸಾ. ರಾ. ಮಹೇಶ್  ಅವರ ಕಾರು ತಾಜ್ ಹೋಟೆಲ್ ನಿಂದ  ತಮ್ಮ‌ ಸರ್ಕಾರಿ ಬಂಗೆಲೆಗೆ ಒನ್ ವೇ ನಲ್ಲಿ ಹೊರಟಿತ್ತು. ಇದನ್ನ ನೋಡಿದ ಹೈ ಗ್ರೌಂಡ್ ಟ್ರಾಫಿಕ್ ಪೇದೆ ಸಂತೋಷ್ ಕುಮಾರ್, ಕಾರು ತಡೆದು ಸರ್ ಇದು ಒನ್ ವೇ. ಹೋಗ್ಬೇಡಿ  ಅಂತ ಎಚ್ಚರಿಸಿದರು. 

ಪೇದೆಯ ಮಾತಿಗೆ ಬೆಲೆ ಕೊಟ್ಟ ಸಚಿವ ಸಾ. ರಾ. ಮಹೇಶ್, ತಾಜ್ ಹೊಟೇಲ್ ಗೇಟ್ ನಲ್ಲಿ ತಾವು ಇದ್ದ ಕಾರಿನಿಂದ ಇಳಿದುಕೊಂಡು, ಯೂರ್ಟನ್ ಮಾಡಿಕೊಂಡು ಬಾ ಎಂದು ಡ್ರೈವರ್‌ಗೆ ಹೇಳಿ ನಡೆದುಕೊಂಡು ತಮ್ಮ ಸರ್ಕಾರಿ ನಿವಾಸದತ್ತ ಹೆಜ್ಜೆ ಹಾಕಿದರು.

ಪೇದೆಯ ಎಚ್ಚರಿಕೆಗೆ ಬೆಲೆ ಕೊಟ್ಟಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಈ ಹಿಂದೆ ಕೆಲ ರಾಜಕಾರಣಿಗಳಿಗೆ ಹಾಗೂ ಅವರ ಮಕ್ಕಳಿಗೆ ಹೀಗೆ ಹೇಳಿದಕ್ಕೆ ರಂಪಾಟ ಮಾಡಿರುವ ಉದಾಹರಣೆಗಳು ಸಾಕಷ್ಟು ಇವೆ.

PREV
click me!

Recommended Stories

Karnataka Covid-19 Cases: ಕರ್ನಾಟಕದಲ್ಲಿ Covid-19 ಮತ್ತೆ ಏರಿಕೆ; 5 ಹೊಸ ಕೇಸ್ ದಾಖಲು, ಬೆಂಗಳೂರಿನಲ್ಲಿ ಒಂದು ಸಾವು!
Marathahalli Incident: ದೇವರ ಹೆಸರಲ್ಲಿ ಹಣಕ್ಕೆ ಡಿಮ್ಯಾಂಡ್; ಕೊಡದಿದ್ದಕ್ಕೆ ಯುವಕನ ಮೇಲೆ ಹಲ್ಲೆ!