ಬಿಬಿಎಂಪಿ ನಿರ್ಲಕ್ಷ್ಯಕ್ಕೆ ವ್ಯಕ್ತಿಯ ಕಾಲು ಮುರಿತ, ತಲೆಗೆ ಗಂಭೀರ ಗಾಯ, ನೆರವಿಗೆ ಕುಟುಂಬಸ್ಥರ ಮನವಿ!

By Suvarna NewsFirst Published May 24, 2023, 5:45 PM IST
Highlights

ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಈಗಾಗಲೇ ಹಲವು ಜೀವಗಳು ಬಲಿಯಾಗಿದೆ.  ಇದೀಗ ಬಿಬಿಎಂಪಿಯ ಕಳಪೆ ಮರಗಳ ನಿರ್ವಹಣೆಯಿಂದ ವ್ಯಕ್ತಿಯೊಬ್ಬರ ಕಾಲು ಮುರಿತಗೊಂಡಿದೆ. ಜೊತೆಗೆ ತಲೆಗೆ ಗಂಭೀರ ಗಾಯವಾಗಿ ಕುಟುಂಬಕ್ಕೆ ಊರುಗೋಲಾಗಿದ್ದ ವ್ಯಕ್ತಿ ಆಸ್ಪತ್ರೆ ಸೇರಿದ್ದಾರೆ.
 

ಬೆಂಗಳೂರು(ಮೇ.24): ಬೆಂಗಳೂರಲ್ಲಿ ಸುರಿದ ಒಂದು ಮಳೆಗೆ ನಗರದಲ್ಲಿನ ಅವಾಂತರಗಳು ಹೊರಬಂದಿದೆ. ಅವೈಜ್ಞಾನಿಕ ಕಾಮಗಾರಿಗಳು, ನೀರು ಹರಿಯಲು ಜಾಗವಿಲ್ಲದೆ ಕೆರೆಯಂತಾಗುವ ರಸ್ತೆಗಳು ಸೇರಿದಂತೆ ಸಮಸ್ಯೆಗಳ ತುಂಬಿ ಹೋಗಿದೆ. ಇದು (Bengaluru Rain) ಮಳೆ ಹಾಗೂ ಮಳೆನೀರಿನ ವಿಚಾರವಾದರೆ, ಇತ್ತ ಬಿಬಿಎಂಪಿಯ(BBMP) ಮರಳಗಳ ಕಳಪೆ ನಿರ್ವಹಣೆಯಿಂದ ಈಗಾಗಲೇ ಹಲವು ದುರಂತಗಳು ಸಂಭವಿಸಿದೆ. ಇದೀಗ ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಜೆಪಿ ನಗರ ನಿವಾಸಿ ಶ್ರೀಧರ್(36) ಕಾಲು ಮುರಿತ ಹಾಗೂ  ತಲೆಗೆ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಸ್ಕೂಟರ್ ಮೂಲಕ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಮರದ ಕೊಂಬೆಯೊಂದು ಮುರಿದು ಬಿದ್ದಿದೆ. ಇದರಿಂದ ವ್ಯಕ್ತಿಯ ಕಾಲಿನ ಮೂಳೆಗಳು ಮುರಿತಕ್ಕೊಳಗಾಗಿದೆ. ತಲೆಗೆ ಗಂಭೀರ ಗಾಯವಾಗಿದೆ. 

ನಗರದಲ್ಲಿನ ಮರಗಳು ಹಾಗೂ ಕೊಂಬೆಗಳ ನಿರ್ವಹಣೆಗೆ ಕೋಟಿ ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತದೆ. ಆದರೆ ಅವಾಂತರಗಳು ನಡೆಯುತ್ತಲೇ ಇದೆ. ಕೆಲ ಪ್ರಕರಣಗಳು ಬೆಳಕಿಗೆ ಬಂದರೆ, ಹಲವು ಪ್ರಕರಣಗಳಲ್ಲಿ ಸಾರ್ವಜನಿಕರ ನೋವು ಅನುಭವಿಸಿದ್ದೇ ಬಂತು. ಇಂದು(ಮೇ.24)ರಂದು ಸ್ಕೂಟರ್ ಮೂಲಕ ವ್ಯಕ್ತಿಯೊಬ್ಬರು ಜೆಪಿ ನಗರದ ಮೂಲಕ ಸಾಗುತ್ತಿದ್ದ ವೇಳೆ ಇದಕ್ಕಿದ್ದಂತೆ ಮರದ ಕೊಂಬೆಯೊಂದು ಮುರಿದು ಬಿದ್ದಿದೆ.

Bengaluru Rain: ಅಕಾಲಿಕ ಆಲಿಕಲ್ಲು ಮಳೆಗೆ ತತ್ತರಿಸಿದ ಜನ, ಧರೆಗುರುಳಿದ ಮರಗಳು

ಟೈಲ್ಸ್ ಶೋ ರೂಂನಲ್ಲಿ ಅಕೌಟೆಂಟ್ ಆಗಿರುವ ಶ್ರೀಧರ್, ಬೆಳಗ್ಗೆ 10 ಗಂಟೆಗೆ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಮುರಿದ ಕೊಂಬೆ ನೇರವಾಗಿ ಸ್ಕೂಟರ್‌ನಲ್ಲಿ ಸಾಗುತ್ತಿದ್ದ ವ್ಯಕ್ತಿಯ ಮೇಲೆ ಬಿದ್ದಿದೆ. ತಕ್ಷಣವೇ ಶ್ರೀಧರ್ ಅವರನ್ನು ಜೆಪಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇತ್ತ ಬಿಬಿಎಂಪಿ ಈ ಘಟನೆ ಕುರಿತು ಮೌನ ವಹಿಸಿದೆ. ಶ್ರೀಧರ್ ಕಾಲು ಸಂಪೂರ್ಣ ಮುರಿದು, ಗಂಭೀರವಾಗಿ ಗಾಯಗೊಂಡಿರುವ ಕಾರಣ ಸುದೀರ್ಘ ಕಾಲದ ವಿಶ್ರಾಂತಿ ಅಗತ್ಯವಿದೆ. ಇತ್ತ ಕುಟುಂಬಕ್ಕೆ ಆಧಾರವಾಗಿದ್ದ ಶ್ರೀಧರ್ ಆಸ್ಪತ್ರೆ, ವೆಚ್ಚ ಕುಟುಂಬದ ನಿರ್ವಹಣೆಗೆ ದಿಕ್ಕೆ ತೋಚದಾಗಿದೆ. 

 

This is on behalf of my cousin who is been victimised for the poor management of trees in Bangalore from BBMP. Today morning a tree branch fell down on him while going to office around 10am near JP nagar. The fracture is worst. Request for help pic.twitter.com/NAGGIDkF7j

— swaroop (@swaroop_sh)

 

ಬಿಬಿಎಂಪಿ ಬೇಜವಾಬ್ದಾರಿಗೆ ನಡೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪ್ರತಿ ವರ್ಷ ಕೋಟಿ ಕೋಟಿ ರೂಪಾಯಿ ವೆಚ್ಚದಲ್ಲಿ ಮರಗಳ ನಿರ್ವಹಣೆ ಮಾಡಲಾಗುತ್ತದೆ. ಆದರೆ ನಗರದ ಒಂದೇ ಒಂದು ಮರಗಳನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ.  ಬಿಬಿಎಂಪಿ ಮರಗಳನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಈ ದುರಂತ ಸಂಭವಿಸಿದೆ. ಸಂಕಷ್ಟದಲ್ಲಿರುವ ಕುಟುಂಬ ಇದೀಗ ನೆರವಿಗೆ ಧಾವಿಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತಿದೆ.   

Bengaluru Rain:ಮಹಾಮಳೆಗೆ ಸಿಲುಕಿ ಯುವತಿ ಸಾವು: ಪ್ರವಾಸಕ್ಕೆ ಬಂದವಳು ದುರಂತ ಅಂತ್ಯ

ಬೆಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಒಂದು ಮಳೆಗೆ ನಗರದ ಅಸಲಿ ಚಿತ್ರಣ ಬಯಲಾಗಿದೆ. ಅಸಮರ್ಪಕ  ಹಾಗೂ ಅವೈಜ್ಞಾನಿಕ ಕಾಮಕಾರಿ, ಕಳಪೆ ನಿರ್ವಹಣೆಯಿಂದ ಮೊದಲ ಭಾರಿಗೆ ಮಳೆ ಕೆಲ ಜೀವಗಳು ಬಲಿಯಾಗಿದೆ. ಆದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಹಲವು ಭಾಗದಲ್ಲಿ ಅಪಾಯದ ಪರಿಸ್ಥಿತಿ ಇದ್ದರೂ ಕಣ್ಣೆತ್ತಿ ನೋಡುವ ಪ್ರಯತ್ನವನ್ನೂ ಮಾಡಿಲ್ಲ. ಇದರ ಪರಿಣಾಮ ಇತಂಹ ದುರಂತಗಳು ಮರುಕಳಿಸುತ್ತಲೇ ಇದೆ.

click me!