ಬೆಂಗಳೂರು ಜನಗಳೇ, ಅಲರ್ಟ್‌.. ಇವತ್ತು ಈ ಏರಿಯಾಗಳಲ್ಲಿ ಕರೆಂಟ್ ಇರೋದಿಲ್ಲ..!

Published : Jul 20, 2026, 08:23 AM IST
power cut in begaluru

ಸಾರಾಂಶ

ಕೆಪಿಟಿಸಿಎಲ್‌ನ ತುರ್ತು ನಿರ್ವಹಣಾ ಕಾಮಗಾರಿಯಿಂದಾಗಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಜಾಲಹಳ್ಳಿ, ಸಹಕಾರನಗರ, ಜಕ್ಕೂರು ಸೇರಿದಂತೆ ವಸತಿ ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ನಿಗದಿತ ಸಮಯದಲ್ಲಿ ವಿದ್ಯುತ್ ಸ್ಥಗಿತಗೊಳ್ಳಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಭಾಗಗಳಲ್ಲಿ ಇಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಕರ್ನಾಟಕ ಪ್ರಸರಣ ನಿಗಮ ನಿಯಮಿತ (KPTCL) ವತಿಯಿಂದ ಹಮ್ಮಿಕೊಳ್ಳಲಾಗಿರುವ ತುರ್ತು ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ನಗರದ ಪ್ರಮುಖ ಪ್ರದೇಶಗಳಲ್ಲಿ ವಿದ್ಯುತ್ ಸ್ಥಗಿತಗೊಳ್ಳಲಿದೆ ಎಂದು ಬೆಸ್ಕಾಂ (BESCOM) ತಿಳಿಸಿದೆ.

ಯಾವ ಸಮಯದಲ್ಲಿ ಎಲ್ಲೆಲ್ಲಿ ಪವರ್ ಕಟ್?

ಕೆಪಿಟಿಸಿಎಲ್ ನಿರ್ವಹಣಾ ಕಾಮಗಾರಿಯ ಹಿನ್ನೆಲೆಯಲ್ಲಿ ವಿವಿಧ ಉಪಕೇಂದ್ರಗಳ ವ್ಯಾಪ್ತಿಯಲ್ಲಿ ಈ ಕೆಳಗಿನಂತೆ ಸಮಯ ನಿಗದಿಪಡಿಸಲಾಗಿದೆ.

ವೆಲ್‌ಕಾಸ್ಟ್ ಉಪಕೇಂದ್ರ ವ್ಯಾಪ್ತಿ: ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ

ಬ್ಯಾಟರಾಯನಪುರ ಉಪಕೇಂದ್ರ ವ್ಯಾಪ್ತಿ: ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಎಲ್ಲೆಲ್ಲಿ ತೊಂದರೆ..?

  • ರವೀಂದ್ರನಗರ
  • ಜಾಲಹಳ್ಳಿ ವೆಸ್ಟ್
  • ತ್ರಿವೇಣಿ ನಗರ
  • ಅಮೃತಹಳ್ಳಿ
  • ಸಹಕಾರನಗರ
  • ಜಕ್ಕೂರು
  • ತಿಂದ್ಲು ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಕೈಗಾರಿಕಾ ಪ್ರದೇಶಗಳಿಗೂ ಬಿಸಿ

ಕೇವಲ ವಸತಿ ಪ್ರದೇಶಗಳಷ್ಟೇ ಅಲ್ಲದೆ, ಕೈಗಾರಿಕಾ ವಲಯಗಳಿಗೂ ವಿದ್ಯುತ್ ಕಡಿತದ ಬಿಸಿ ತಟ್ಟಲಿದೆ. ಪ್ರಮುಖವಾಗಿ ವೋಲ್ವೋ (Volvo), ಐಟಿಸಿ (ITC), ವಿಪ್ರೋ ವೆಲ್‌ಕಾಸ್ಟ್ (Wipro Wellcast) ಸೇರಿದಂತೆ ಹಲವು ಕೈಗಾರಿಕಾ ಘಟಕಗಳಲ್ಲಿ ಉತ್ಪಾದನೆಗೆ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.

ಬೆಸ್ಕಾಂ ಮನವಿ

ನಿರ್ವಹಣಾ ಕಾಮಗಾರಿಗಳು ಪೂರ್ಣಗೊಂಡ ತಕ್ಷಣವೇ ವಿದ್ಯುತ್ ಪೂರೈಕೆಯನ್ನು ಪುನಾರಂಭಿಸಲಾಗುವುದು. ಅಲ್ಲಿಯವರೆಗೆ ಸಾರ್ವಜನಿಕರು ಮತ್ತು ಉದ್ದಿಮೆದಾರರು ಸಹಕರಿಸಬೇಕು ಹಾಗೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದು ಬೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.

PREV
Read more Articles on
click me!

Recommended Stories

ಅಜ್ಜಿ ಚೆನ್ನಮ್ಮ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಪ್ರಜ್ವಲ್, ಪರೋಲ್‌ಗೆ ಅರ್ಜಿ ಸಲ್ಲಿಸದ ಮಾಜಿ ಸಂಸದ
ತವರೂರು ಅಂದರೆ ಚೆನ್ನಮ್ಮಗೆ ತಾಯಿಯಂಥ ಪ್ರೀತಿ.. 3 ದೇವಸ್ಥಾನ, ಹೈಸ್ಕೂಲ್, ಆಸ್ಪತ್ರೆ ಏನೆಲ್ಲ ಕಟ್ಟಿಸಿಕೊಟ್ಟಿದ್ದರು?