ತ್ರಿ ದೇವಿ ಸ್ವರೂಪಿ ಕೊಲ್ಲೂರು ಮೂಕಾಂಬಿಕೆ ಮಹಿಮೆ ಅಪಾರ

By Web DeskFirst Published Nov 15, 2018, 2:14 PM IST
Highlights

 ಶ್ರಿ ಚಕ್ರದ ಮೇಲೆ ದೇವಿಯನ್ನು ಸ್ಥಾಪಿಸಿ, ಆದಿ ಶಂಕರಚಾರ್ಯರು ಸೌಂದರ್ಯ ಲಹರಿ ಬರೆದಿರುವ ಕೊಲ್ಲೂರು ಮೂಕಾಂಬಿಕೆ ಕ್ಷೇತ್ರದ ಬಗ್ಗೆ ಇಲ್ಲಿವೆ ಒಂದಿಷ್ಟು ಮಾಹಿತಿ...

ಕರ್ನಾಟಕದ ಪಶ್ಚಿಮ ಘಟ್ಟದ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಕೊಲ್ಲೂರು ಒಂದು. ಕೊಡಚಾದ್ರಿಯ ಬುಡದಲ್ಲಿ, ಸೌಪರ್ಣಿಕಾ ನದಿ ತೀರದಲ್ಲಿ ಈ ಪುಣ್ಯ ಕ್ಷೇತ್ರವಿದೆ.

  • ಪಾರ್ವತಿ, ಸರಸ್ವತಿ ಹಾಗೂ ಲಕ್ಷ್ಮಿ ಸ್ವರೂಪಿಯಾದ ಮೂಕಾಂಬಿಕೆಗೆ ತಮಿಳರು, ತುಳುvವರು  ಕನ್ನಡಿಗರೂ ನಡೆದುಕೊಳ್ಳುತ್ತಾರೆ. ಮಲಯಾಳಿ ಭಕ್ತರು ಹೆಚ್ಚು ಆಗಮಿಸುತ್ತಾರೆ.
  • ದುಷ್ಟ ಮೂಕಾಸುರನ ಹತ್ಯೆಗಾಗಿ ಆದಿಶಕ್ತಿ ಅವತಾರ ತಾಳಿದಳು ಮೂಕಾಂಬಿಕೆ. ಈ ಅವತಾರವನ್ನು ಕಂಡ ತ್ರಿಮೂರ್ತಿಗಳು ಬೆರಗಾದರಂತೆ. ಈಕೆಯ ಎಡಭಾಗದಲ್ಲಿ ಮಹಾಕಾಳಿ, ಮಹಾಲಕ್ಷ್ಮಿ ಹಾಗೂ ಸರಸ್ವತಿ ಇರುತ್ತಾರೆ. ಬಲ ಭಾಗದಲ್ಲಿ ಬ್ರಹ್ಮ, ವಿಷ್ಣು ಹಾಗೂ ಶಿವನನ್ನು ಸ್ಥಾಪಿಸಿಕೊಂಡಿದ್ದಾಳೆ.
  • ಆದಿ ಶಂಕರಾಚಾರ್ಯರು ತಪಸ್ಸು ಮಾಡುತ್ತಿರುವಾಗ ದೇವಿಯು ಅವರಿಗೆ ದಿವ್ಯ ದೃಷ್ಟಿಯಲ್ಲಿ ಕಾಣಿಸಿಕೊಂಡಿದ್ದು, ಅದಕ್ಕೆ ಅವರು ಶ್ರೀ ಚಕ್ರದ ಮೇಲೆ ವಿಗ್ರಹವನ್ನು ಸ್ಥಾಪಿಸಿದರು. 
  • ದೇವಾಲಯದ ಮುಂದಿರುವ ಕಬ್ಬಿಣದ ಕಂಬಕ್ಕೆ 2300 ವರ್ಷಗಳ ಇತಿಹಾಸವಿದೆ. ಇದೂವರೆಗೂ ಇದು ತುಕ್ಕು ಹಿಡಿದಿಲ್ಲ ಎನ್ನುವುದೇ ವಿಶೇಷ. ಈ ಬಗ್ಗೆ ಸಂಶೋಧನೆಯೂ ನಡೆಯುತ್ತಿದೆ. 
  • ಕೊಲ್ಲೂರು ಎಂಬ ಹೆಸರು ಬಂದಿದ್ದು ಕೋಲ ಮಹರ್ಷಿಯ ಕಾರಣದಿಂದ.
  • ಏಳು  ಮುಕ್ತಿ ಸ್ಥಳಗಳಲ್ಲಿ ಒಂದಾದ ಕೊಲ್ಲೂರಿನಲ್ಲಿ ಮಾತ್ರ  ಪರಶುರಾಮ ಪಾರ್ವತಿ ವಿಗ್ರಹ ಸ್ಥಾಪಿಸಿದ್ದನಂತೆ. 
  • ಈ ದೇವಾಲಯದಲ್ಲಿಯೇ ಕುಳಿತುಕೊಂಡು ಆದಿ ಶಂಕರರು ಸೌಂದರ್ಯ ಲಹರಿ ಬರೆದಿದ್ದು.
  • ದೇವಾಲಯದಲ್ಲಿರುವ ಮಂಟಪದಲ್ಲಿ ರಾಜಾ ರವಿವರ್ಮ ಬರೆದಿರುವ ಚಿತ್ರವಿದೆ.
  • ಈ ದೇವಿಗೆ ಚಿನ್ನದ ಮುಖವಾಡ ಮಾಡಿಸಿಕೊಟ್ಟವರು ವಿಜಯನಗರದ ಅರಸರು.
  • ಹಲವೆಡೆಯಿಂದ ಬಂದ ಜನರು ಮಕ್ಕಳಿಗೆ ಇಲ್ಲಿ ಅಕ್ಷರಾಭ್ಯಾಸ ಮಾಡಿಸುತ್ತಾರೆ. 
  • ಖ್ಯಾತ ಹಾಡುಗಾರ ಯೇಸುದಾಸ್ ತಮ್ಮ ಹುಟ್ಟುಹಬ್ಬದಂದು ಈ ಕ್ಷೇತ್ರಕ್ಕೆ ಭೇಟಿ ನೀಡಿ, ಸಂಗೀತ ಸೇವೆ ಸಲ್ಲಿಸಿ ಹೋಗುತ್ತಾರೆ.

ಪವಾಡಗಳ ಆಗರ ಶ್ರೀ ಸಿಗಂದೂರು ಚೌಡೇಶ್ವರಿ

ಶಿರಡಿ ಸಾಯಿ ಬಾಬಾರ ಶಾಕಿಂಗ್ ಫ್ಯಾಕ್ಸ್ಟ್!

click me!