Asianet Suvarna News Asianet Suvarna News

ಈಕೆ ಪಾಕಿಸ್ತಾನಿ, ಆದ್ರೆ ದಿಲ್ ಹೈ ಹಿಂದೂಸ್ತಾನಿ; ಪಾಕ್ ಹುಡುಗಿಗೆ ಭಾರತೀಯ ದಾನಿಯ ಹೃದಯ ಕಸಿ

ಆಕೆಯ ಹೃದಯ ಕವಾಟದಲ್ಲಿ ಸೋರಿಕೆ ಶುರುವಾಯಿತು. ಇದರಿಂದ ಪೂರ್ಣ ಹೃದಯ ಕಸಿ ಅನಿವಾರ್ಯವಾಯಿತು. ಆದರೆ, ಆಕೆ ಅದೃಷ್ಟವಂತಳಾಗಿದ್ದಳು.
 

Phir bhi dil hai Hindustani pak girl gets Indian heart donor skr
Author
First Published Apr 25, 2024, 10:33 AM IST

ಹತ್ತೊಂಬತ್ತರ ಹರೆಯದ ಆಯೇಶಾ ರಶನ್, ಒಂದು ದಶಕದಿಂದ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದಳು. ಇದೀಗ ಪಾಕಿಸ್ತಾನದ ಈ ಯುವತಿಗೆ ಭಾರತೀಯ ದಾನಿಯ ಹೃದಯ ಕಸಿ ಮಾಡಲಾಗಿದೆ. 

ಚೆನ್ನೈನ ಎಂಜಿಎಂ ಹೆಲ್ತ್‌ಕೇರ್‌ನಲ್ಲಿ ಕಸಿ ಶಸ್ತ್ರಚಿಕಿತ್ಸೆಯ ನಂತರ ಭಾರತೀಯ ಹೃದಯವು ಪಾಕಿಸ್ತಾನದ ಕರಾಚಿಯ ಯುವತಿ ಮತ್ತು ಅವರ ಕುಟುಂಬಕ್ಕೆ ಹೊಸ ಜೀವನವನ್ನು ನೀಡಿದೆ. ಅದರಲ್ಲೂ ಬರೋಬ್ಬರಿ 35 ಲಕ್ಷ ರೂ. ವೆಚ್ಚವಾಗುವ ಶಸ್ತ್ರಚಿಕಿತ್ಸೆಯನ್ನು ವೈದ್ಯರು ಮತ್ತು ಐಶ್ವರ್ಯಂ ಟ್ರಸ್ಟ್‌ ಸೇರಿ ಉಚಿತವಾಗಿ ನಿರ್ವಹಿಸಿದ್ದಾರೆ. 

2014ರಲ್ಲಿ, ಆಯೇಷಾ ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಭೇಟಿ ನೀಡಿದ್ದಳು. ಅಲ್ಲಿ ಆಕೆಗೆ ಹೃದಯ ಪಂಪ್ ಅನ್ನು ಅಳವಡಿಸಲಾಯಿತು. ಆದಾಗ್ಯೂ, ಸಾಧನವು ಕಾಲಾನಂತರದಲ್ಲಿ ನಿಷ್ಪರಿಣಾಮಕಾರಿಯಾಯಿತು ಮತ್ತು ಹೃದಯ ಕಸಿ ಅಗತ್ಯವಾಯಿತು. ಚೆನ್ನೈನ ಎಂಜಿಎಂ ಹೆಲ್ತ್‌ಕೇರ್ ಆಸ್ಪತ್ರೆಯಲ್ಲಿ ಡಾ.ಕೆ.ಆರ್.ಬಾಲಕೃಷ್ಣನ್ ಮತ್ತು ಡಾ.ಸುರೇಶ್ ರಾವ್ ಆಯೇಷಾ ಕುಟುಂಬದೊಡನೆ ಸಮಾಲೋಚನೆ ನಡೆಸಿದ ನಂತರ ಪರಿಸ್ಥಿತಿಯ ತುರ್ತು ಮತ್ತು ಹಣಕಾಸಿನ ನೆರವಿನ ಅಗತ್ಯದ ಬಗ್ಗೆ ತಿಳಿದುಕೊಂಡಿತು.

ಕೈ ಇಲ್ಲದೇ ಕಾರು ಚಲಾಯಿಸುವ ಏಷ್ಯಾದ ಮೊದಲ ಮಹಿಳೆ!
 

ವೈದ್ಯರ ಪ್ರಕಾರ, ಆಯೇಶಾ ತೀವ್ರ ಹೃದಯದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಳು. ಹೃದಯ ವೈಫಲ್ಯದ ನಂತರ, ಅವಳನ್ನು ECMO ನಲ್ಲಿ ಇರಿಸಲಾಯಿತು. ಇದು ಅವರ ಹೃದಯ ಅಥವಾ ಶ್ವಾಸಕೋಶದ ಕಾರ್ಯಚಟುವಟಿಕೆಗೆ ಪರಿಣಾಮ ಬೀರುವ ಮಾರಣಾಂತಿಕ ಅನಾರೋಗ್ಯ ಹೊಂದಿರುವ ಜನರಿಗೆ  ನೀಡುವ ಒಂದು ಬೆಂಬಲದ ರೂಪವಾಗಿದೆ. ಆದಾಗ್ಯೂ, ಆಕೆಯ ಹೃದಯ ಕವಾಟದಲ್ಲಿ ಸೋರಿಕೆ ಶುರುವಾಯಿತು. ಇದರಿಂದ ಪೂರ್ಣ ಹೃದಯ ಕಸಿ ಅನಿವಾರ್ಯವಾಯಿತು. 

ತಮ್ಮ ಮಗಳಿಗೆ ಪುನರ್ಜನ್ಮ ನೀಡಿದ್ದಕ್ಕಾಗಿ ಆಯೇಶಾ ತಾಯಿ ವೈದ್ಯರು, ಆಸ್ಪತ್ರೆ ಮತ್ತು ವೈದ್ಯಕೀಯ ಟ್ರಸ್ಟ್‌ಗೆ ಧನ್ಯವಾದ ವ್ಯಕ್ತಪಡಿಸಿದ್ದಾರೆ. 'ನಿಜವಾಗಿ ಹೇಳಬೇಕೆಂದರೆ, ಭಾರತಕ್ಕೆ ಹೋಲಿಸಿದರೆ ಪಾಕಿಸ್ತಾನವು ಉತ್ತಮ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿಲ್ಲ. ಭಾರತವು ತುಂಬಾ ಸ್ನೇಹಪರವಾಗಿದೆ ಎಂದು ನಾನು ಭಾವಿಸುತ್ತೇನೆ. ಯಾವುದೇ ಕಸಿ ಸೌಲಭ್ಯ ಲಭ್ಯವಿಲ್ಲ ಎಂದು ಪಾಕಿಸ್ತಾನದ ವೈದ್ಯರು ಹೇಳಿದಾಗ, ನಾವು ಡಾ. ಕೆ.ಆರ್. ಬಾಲಕೃಷ್ಣನ್ ಅವರನ್ನು ಸಂಪರ್ಕಿಸಿದ್ದೇವೆ. ನಾನು ಭಾರತ ಮತ್ತು ವೈದ್ಯರಿಗೆ ಧನ್ಯವಾದಗಳು' ಎಂದವರು ಹೇಳಿದ್ದಾರೆ.  ರಶನ್ ಸ್ಥಿತಿ ಸ್ಥಿರವಾಗಿದೆ ಮತ್ತು ಆಕೆ ಪಾಕಿಸ್ತಾನಕ್ಕೆ ಮರಳಬಹುದು ಎಂದು ವೈದ್ಯರು ಹೇಳಿದ್ದಾರೆ.

ಬ್ರೈನ್‌ ಟ್ಯೂಮರ್‌ಗೂ ಸ್ಟ್ರೋಕ್‌ಗೂ ಸಂಬಂಧವಿದ್ಯಾ?
 

ದಾನಿ ಹೃದಯವು ದೆಹಲಿಯಿಂದ ಬಂದಿದ್ದು, ಯುವತಿ ಅದೃಷ್ಟಶಾಲಿಯಾಗಿದ್ದಾಳೆ. ಈಕೆಗೆ ಅಗತ್ಯವಿದ್ದ ಸಂದರ್ಭದಲ್ಲಿ ಯಾವುದೇ ಭಾರತೀಯರು ಹೃದಯದ ದಾನಿಗಾಗಿ ಹುಡುಕುವ ಮನವಿ ಇರಲಿಲ್ಲ. ಹಾಗೊಂದು ವೇಳೆ ಇದ್ದಿದ್ದರೆ ವಿದೇಶಿಯರಿಗೆ ಅಂಗವನ್ನು ಪಡೆಯಲು ಸಾಧ್ಯವಿಲ್ಲ ಎಂದು ಹೃದಯ ಮತ್ತು ಶ್ವಾಸಕೋಶದ ಕಸಿ ಸಂಸ್ಥೆ ನಿರ್ದೇಶಕ ಡಾ. ಸುರೇಶ್ ರಾವ್  ಮತ್ತು ಹೃದಯ ಮತ್ತು ಶ್ವಾಸಕೋಶದ ಕಸಿ ಸಂಸ್ಥೆ ಸಹ ನಿರ್ದೇಶಕ ಡಾ.ಕೆ.ಆರ್.ಬಾಲಕೃಷ್ಣನ್ ತಿಳಿಸಿದ್ದಾರೆ.

ಈಗ ಹೊಸ ಭರವಸೆಯಿಂದ ತುಂಬಿರುವ ಆಯೇಷಾ, ಹೊಸ ಚೈತನ್ಯದೊಂದಿಗೆ ಜೀವನದ ಸಾಧ್ಯತೆಗಳನ್ನು ಅಳವಡಿಸಿಕೊಂಡು ಫ್ಯಾಷನ್ ಡಿಸೈನರ್ ಆಗಲು ಬಯಸಿದ್ದಾಳೆ. 

Follow Us:
Download App:
  • android
  • ios