Asianet Suvarna News Asianet Suvarna News

Today Rashibhavishy: ಇಂದು ಮಣ್ಣೆತ್ತಿನ ಅಮಾವಾಸ್ಯೆ..ಈ ದಿನ ಏನು ಮಾಡಬೇಕು, ಮಾಡಬಾರದು..?

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?
 

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ,ಭಾನುವಾರ, ಅಮಾವಾಸ್ಯೆ ತಿಥಿ, ಮೃಗಶಿರ ನಕ್ಷತ್ರ. 

ಈ ದಿನ ಮಣ್ಣೆತ್ತಿನ ಅಮಾವಾಸ್ಯೆ ಇದೆ. ಹೀಗೆಂದರೆ ಮಣ್ಣನ್ನು ಹದ ಮಾಡುವ ಸಮಯ ಇದು ಎಂಬುದಾಗಿದೆ. ಕೃಷಿಕನ ಬದುಕಿನಲ್ಲಿ ಆಸರೆಯಾಗಿರುವ ಎತ್ತುಗಳನ್ನು ಈ ದಿನ ಪೂಜಿಸಲಾಗುತ್ತದೆ. ಈ ದಿನ ಒಳ್ಳೆಯದಾಗಿದೆ. ಇಂದು ಪಿತೃದೇವತೆಗಳ ಆರಾಧನೆ ಮಾಡಬೇಕು. ಹಿರಿಯರ ಸ್ಮರಣಾರ್ಥವಾಗಿ ದಾನ- ಧರ್ಮವನ್ನು ಮಾಡಿ. ಅವರ ಅನುಗ್ರಹದಿಂದ ನಿಮ್ಮ ಜೀವನ ಉತ್ತಮವಾಗಿ ಇರಲಿ. ಪ್ರತಿ ಅಮಾವಾಸ್ಯೆ ದಿನ ನಿಮ್ಮ ಮನೆಯ ಮೇಲೆ ಕಾಗೆ ಒಂದು ತುತ್ತು ಅನ್ನವನ್ನು ಇಡಿ.  

ಇದನ್ನೂ ವೀಕ್ಷಿಸಿ: ಬಿಜೆಪಿ-ಕಾಂಗ್ರೆಸ್‌ ನಡುವೆ ರೈಸ್‌ ರಾಜಕೀಯ, ಬಸ್‌ ಡೋರ್‌ ಕಿತ್ತು ಕಂಡಕ್ಟರ್‌ಗೆ ಕೊಟ್ಟ 'ಶಕ್ತಿ' ಮಹಿಳೆಯರು!