Asianet Suvarna News Asianet Suvarna News

ನಿಮಗೆ ಪ್ರತಿದಿನ ಕೆಟ್ಟ ಆಲೋಚನೆಗಳು ಬರುತ್ತಿವೆಯಾ..?: ಸುಬ್ರಹ್ಮಣ್ಯ ಸ್ವಾಮಿ ಆರಾಧನೆ ಹೀಗೆ ಮಾಡಿ..

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಅಧಿಕ ಶ್ರಾವಣ ಮಾಸ, ಶುಕ್ಲ ಪಕ್ಷ, ಸೋಮವಾರ, ಷಷ್ಠಿ ತಿಥಿ, ಹಸ್ತ ನಕ್ಷತ್ರ.

ಸೋಮವಾರ ಹಾಗೂ ಷಷ್ಠಿಯುಕ್ತವಾಗಿರುವ ಕಾರಣ ಸುಬ್ರಹ್ಮಣ್ಯ ಸ್ವಾಮಿ ಆರಾಧನೆ ಮಾಡಿ. ಈ ಸ್ವಾಮಿ ಹೆಚ್ಚು ಮಡಿಯನ್ನು ಇಷ್ಟಪಡುತ್ತಾನೆ. ಹಾಗಾಗಿ ಮಾನಸಿಕ ಮತ್ತು ಶುಭ್ರವಾದ ಬಟ್ಟೆಗಳನ್ನು ಧರಿಸಿ, ಪ್ರಾರ್ಥನೆ ಮಾಡಿ. ಬೇಡವಾದ ಆಲೋಚನೆಗಳಿಂದ ನಾವು ಪ್ರತಿದಿನ ತೊಂದರೆಗೊಳಗಾಗುತ್ತೇವೆ. ಇದೆಲ್ಲಾದಕ್ಕೂ ಸುಬ್ರಹ್ಮಣ್ಯ ಸ್ವಾಮಿ ಆರಾಧನೆ ಮಾಡಿ, ಇವುಗಳಿಂದ ದೂರವಿರಿ.  

ಇದನ್ನೂ ವೀಕ್ಷಿಸಿ:  ಮಳೆಗಾಲದಲ್ಲಿ ಮಕ್ಕಳನ್ನು ಕಾಡೋ ಡೆಂಗ್ಯೂ..ಪೋಷಕರೇ ಇರಲಿ ಎಚ್ಚರ

Video Top Stories