Asianet Suvarna News Asianet Suvarna News

ಇಂದು ಜ್ಯೋತಿರ್ಭೀಮೇಶ್ವರ ಅಮಾವಾಸ್ಯೆ: ಈ ರಥ ಆಚರಣೆ ಹಿಂದಿನ ಮಹತ್ವೇನು ಗೊತ್ತಾ ?

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ಸೋಮವಾರ, ಅಮಾವಾಸ್ಯೆ ತಿಥಿ, ಪುನರ್ವಸು ನಕ್ಷತ್ರ. 

ಈ ದಿನ ಎರಡು ವಿಶೇಷತೆ ಇದ್ದು, ಒಂದು ದಕ್ಷಿಣಾಯನ ಪುಣ್ಯಕಾಲ ಮತ್ತು ರವಿಯ ಸಂಕ್ರಮಣ ಇದೆ. ಕರ್ಕಟ ರಾಶಿಗೆ ಇಂದು ಸೂರ್ಯ ಪ್ರವೇಶಿಸುತ್ತಿದ್ದಾನೆ. ಈ ಸಮಯದಲ್ಲಿ ರಾತ್ರಿ ಜಾಸ್ತಿ ಇದ್ದು, ದೇವತೆಗಳ ನಿದ್ರಾ ಸಮಯ ಇದಾಗಿದೆ. ಅಲ್ಲದೇ ಇಂದು ಭೀಮನ ಅಮಾವಾಸ್ಯೆ ಇದೆ. ಈ ದಿನ ವಿವಾಹಿತ ಮಹಿಳೆಯರು ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಪೂಜೆಯನ್ನು ಮಾಡಿದರೆ, ಅವಿವಾಹಿತ ಮಹಿಳೆಯರು ತಮ್ಮ ತಂದೆ, ಸಹೋದರರ ಆಯಸ್ಸು ಮತ್ತು ಆರೋಗ್ಯಕ್ಕಾಗಿ ಪೂಜೆಯನ್ನು ಮಾಡುತ್ತಾರೆ.

ಇದನ್ನೂ ವೀಕ್ಷಿಸಿ:  ಟ್ರೈಲರ್ ರಿಲೀಸ್ ಕಾರ್ಯಕ್ರಮ: ಹಿರಿಯ ಕಲಾವಿದ ಅಂದವರಿಗೆ ಫನ್ನಿಯಾಗಿ ಕಿಚಾಯಿಸಿದ ಸುದೀಪ್!

Video Top Stories