Asianet Suvarna News Asianet Suvarna News

ಗಣಿನಾಡಲ್ಲಿ ಕರೆಂಟ್ ಸ್ಥಗಿತದಿಂದ ಜೀವಗಳು ಖಲ್ಲಾಸ್: ಆ ಘಟನೆ ನಡೆದು ವರ್ಷಗಳೇ ಆದ್ರೂ ಯಾರು ಕ್ಯಾರೆ ಅಂತಿಲ್ಲ!

ಇನ್ನೂ ಪರಿಹಾರ ಘೋಷಣೆಗೂ ಮುನ್ನ ಘಟನೆ ಬಗ್ಗೆ ಪ್ರತ್ಯೇಕವಾಗಿ ತಂಡವೊಂದು ಬಂದು ಸಾವನ್ನಪ್ಪಿದವರ ಬಗ್ಗೆ ಮತ್ತು ಘಟನೆಯ ಬಗ್ಗೆ ಪ್ರತ್ಯೇಕವಾಗಿ ವರದಿಯನ್ನ ಸರ್ಕಾರಕ್ಕೆ ಸಲ್ಲಿಸಿತ್ತು.

ಬಳ್ಳಾರಿ(ಆ.22):  ಗಣಿನಾಡು ಬಳ್ಳಾರಿಯಲ್ಲಿ ಕಳೆದ ವರ್ಷದ ಸಪ್ಟೆಂಬರ್‌ 14 ರಂದು ವಿಮ್ಸ್‌ ಆಸ್ಪತ್ರೆಯಲ್ಲಿ ವಿದ್ಯುತ್‌ ಸ್ಥಗಿತದಿಂದ ಇಬ್ಬರು ರೋಗಿಗಳು ಸಾವನ್ನಪ್ಪಿದ್ದರು. ಈ ಘಟನೆ ಕೂಡ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಅದರೆ, ಇದರಲ್ಲಿ ಚಂದಮ್ಮ ಐಸಿಯು ವಾರ್ಡ್‌ನಲ್ಲಿ ಇರಲಿಲ್ಲವೆಂದು ಬಂದ ವರದಿ ಹಿನ್ನಲೆಯಲ್ಲಿ ಮೌಲಾ ಹುಸೇನ್‌ ಹಾಗೂ ಚೆನ್ನಮ್ಮ ಎಂಬುವರ ಕುಟುಂಬಕ್ಕೆ ಪರಿಹಾರ ನೀಡುವ ಭರಸವೆಯನ್ನ ಅಂದಿನ ಸಚಿವರಾದ ಡಿ.ಸುಧಾಕರ್ ಹಾಗೂ ಶ್ರೀರಾಮುಲು ಅವರು ಭರವಸೆಯನ್ನ ನೀಡಿದ್ದರು. ಆದರೆ, ಇನ್ನೂ ಪರಿಹಾರ ಘೋಷಣೆಗೂ ಮುನ್ನ ಘಟನೆ ಬಗ್ಗೆ ಪ್ರತ್ಯೇಕವಾಗಿ ತಂಡವೊಂದು ಬಂದು ಸಾವನ್ನಪ್ಪಿದವರ ಬಗ್ಗೆ ಮತ್ತು ಘಟನೆಯ ಬಗ್ಗೆ ಪ್ರತ್ಯೇಕವಾಗಿ ವರದಿಯನನ್ನ ಸರ್ಕಾರಕ್ಕೆ ಸಲ್ಲಿಸಿತ್ತು. ಈ ಬಗ್ಗೆ ವಿವರವಾದ ಮಾಹಿತಿ ಈ ವಿಡಿಯೋದಲ್ಲಿದೆ.   

ಬಿಗ್ 3ಯಲ್ಲಿ ವರದಿ ಮಾಡುವಂತೆ ಜಡ್ಜ್ ಸಲಹೆ: 6 ವರ್ಷದಿಂದ ಮುಗಿಯದ ಕಾಮಗಾರಿ 2 ವರ್ಷದಲ್ಲಿ ಕಂಪ್ಲೀಟ್..!

Video Top Stories