Asianet Suvarna News Asianet Suvarna News

ಎಕ್ಸ್‌ಟ್ರಾ ಪೆಗ್ ಅಂದ್ರೆ ಎನರ್ಜಿ ಡ್ರಿಂಕ್: ಲಕ್ಷ್ಮೀ ವಿರುದ್ಧ ಕೋರ್ಟ್‌ನಲ್ಲಿ ಕ್ರಿಮಿನಲ್‌ ಕೇಸ್ ಹಾಕ್ತೇನೆಂದ ಸಂಜಯ್ ಪಾಟೀಲ್

ನಾನು ಮೊದಲು ಎನು ಮಾತಾಡಿದ್ದಿನಿ ನನಗೆ ಗೊತ್ತಾಗುತ್ತಿಲ್ಲ. ನಾನು ಮಾತಾಡಿದ್ರಲ್ಲಿ ಅವರ (ಲಕ್ಷ್ಮೀ ಹೆಬ್ಬಾಳ್ಕರ್ )ಹೆಸರಿದ್ರೆ ತೋರಿಸಿಕೊಡಿ ಎಂದು ಮಾಜಿ‌ ಶಾಸಕ ಸಂಜಯ್ ‌ಪಾಟೀಲ ಹೇಳಿದರು. 

Sanjay Patil Slams On Minister Laxmi Hebbalkar At Belagavi gvd
Author
First Published Apr 14, 2024, 4:37 PM IST

ಬೆಳಗಾವಿ (ಏ.14): ನಾನು ಮೊದಲು ಎನು ಮಾತಾಡಿದ್ದಿನಿ ನನಗೆ ಗೊತ್ತಾಗುತ್ತಿಲ್ಲ. ನಾನು ಮಾತಾಡಿದ್ರಲ್ಲಿ ಅವರ (ಲಕ್ಷ್ಮೀ ಹೆಬ್ಬಾಳ್ಕರ್ )ಹೆಸರಿದ್ರೆ ತೋರಿಸಿಕೊಡಿ ಎಂದು ಮಾಜಿ‌ ಶಾಸಕ ಸಂಜಯ್ ‌ಪಾಟೀಲ ಹೇಳಿದರು. ಅಕ್ಕಾಬಾಯಿ ಅಂದ್ರೆ ಅವರೇ ಅಂತ ನೀವ್ಯಾಕೆ‌ ತಿಳ್ಕೊತಿರಿ. ಎಕ್ಸ್‌ಟ್ರಾ ಪೆಗ್ ಅಂದ್ರೆ ಎನರ್ಜಿ ಡ್ರಿಂಕ್ ಎಂದು ಸಂಜಯ್ ಪಾಟೀಲ್ ಹೇಳಿದ್ದಾರೆ. ಚುನಾವಣೆಯ ಸೋಲಿನ ಭಯದಿಂದ ಅವರಿಗೆ ಹೆದರಿಕೆ ಶುರುವಾಗಿದೆ. ನನ್ನ ತಾಯಿ ಮಹಿಳೆ ನನ್ನ ಮಗಳು ಸಹ ಮಹಿಳೆ ನನ್ನ ಹೆಂಡತಿಯೂ ಮಹಿಳೆಯೇ. ಭಾರತದ ಸಂಸ್ಕ್ರತಿ ಮಹಿಳೆಯರಿಗೆ ಹೇಗೆ ಗೌರವ ಕೊಡಬೇಕು ಎನ್ನುವುದನ್ನು ಕಲಿಸಿದೆ ಎಂದರು.

ನಾನು ತಪ್ಪು ಮಾಡಿದ್ರೆ ಚುನಾವಣೆ ಆಯೋಗ ಇದೆ, ಪೊಲೀಸರಿದ್ದಾರೆ. ಅಲ್ಲಿ ಹೋಗಿ ನೀವು ದೂರು ನೀಡಿ ನಾನು ತಪ್ಪು ಮಾಡಿದ್ರೆ ಶಿಕ್ಷೆ ಆಗಲಿ. ಆದರೆ ಮನೆಗೆ ಹೋಗಿ ರಾತ್ರಿಯಲ್ಲಿ ಪ್ರತಿಭಟನೆ ‌ಮಾಡೋದು ಎಷ್ಟು ಸರಿ. ನಾನು ಹಾರ್ಟ್ ಪೇಷಂಟ್ ಇದ್ದೆನೆ ಬೈ ಪಾಸ್ ಸರ್ಜರಿ ಸಹ ಆಗಿದೆ ಹಾರ್ಟ್ ವೀಕ್ ಇದ್ದರೆ ಗತಿ ಏನು? ಅವರು ಹೀಗೆ ಮಾಡೋದು ಎಷ್ಟು ಸರಿ ಎಂದು ಸಂಜಯ್ ಪ್ರಶ್ನೆ ಮಾಡಿದರು. ಪೃಥ್ವಿ ಸಿಂಗ್ ಮೇಲೆ ಹಲ್ಲೆ ಆಯ್ತು. ಅಂಗನವಾಡಿ ಟೀಚರ್ಸ್  ಮೇಲೆ ಹಲ್ಲೆ ಆಯ್ತು ಅದು ಎನೂ ಆಗಲಿಲ್ಲ. ಸಚಿವೆ ತಮ್ಮ ಸ್ವಾರ್ಥಕ್ಕಾಗಿ ಇಲಾಖೆಯನ್ನು ದುರುಪಯೋಗ ಮಾಡ್ಕೊಳ್ತಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಗಾಳಿ ಬೀಸುತ್ತಿದೆ: ಸಚಿವ ಎಂ.ಬಿ.ಪಾಟೀಲ್‌

ಮೋದಿ ಚೌಕಿದಾರ್ ಅಲ್ಲ ಚೋರ್ ಅಂತಾರೆ ಸಿದ್ದರಾಮಯ್ಯ ಬಿಜೆಪಿಯವರು ನಾಲಾಯಕರು ಅಂತಾರೆ. ನನ್ನ ಮಾತನ್ನೂ ಕಾಂಗ್ರೆಸ್ ‌ನಾಯಕರು ಸ್ಪೋಟಿವ್ ಆಗಿ ತೆಗೆದುಕೊಳ್ಳಬೇಕು. ಇದು ಚುನಾವಣೆ ನೀವು ಮಾತಾಡ್ತಿರಿ, ನಾವು ಮಾತಾಡ್ತಿವಿ ಬೈ ಮಿಸ್ಟೇಕ್ ಎನಾದ್ರು ಆಗಿರಬಹುದು. ಹೋರಾಟಕ್ಕೆ ಒಂದು ಪ್ರೊಸಿಜರ್ ಇದೆ ಅದನ್ನು ಬಿಟ್ಟು ಮನೆ‌ಬಾಗಿಲಿಗೆ ಬಂದು ಕೂರೋದು ಎಷ್ಟು ಸರಿ. ನಾನು ಅವರ ಹೆಸರು ತೆಗೆದುಕೊಂಡಿದ್ದಿನಾ ಹೆಸರು ತೆಗೆದುಕೊಂಡಿದ್ದರೆ ನೀವೆ ಇಲ್ಲೆ ಶಿಕ್ಷೆ ಕೊಡಿ. ಯಾರಿಗೂ ನಾನು ಅಪಮಾನ ಮಾಡಿಲ್ಲ‌ ಅವರದೆ ಸರ್ಕಾರ ಇದೆ ಸಿಬಿಐ ತನಿಖೆ ಮಾಡಲಿ. ನಾನು ಅವರ ಬಗ್ಗೆ ಮಾತಾಡಿಲ್ಲ ನಮ್ಮ‌ಮನೆಯಲ್ಲಿರುವರ ಬಗ್ಗೆ ನಾನು ಮಾತಾಡಿರುವೆ.

ವಿಡಿಯೋ ಪೂರ್ತಿ ಪರಿಶೀಲನೆ ಮಾಡಿ, ಬಿಜೆಪಿ ಕಾರ್ಯಕ್ರಮಕ್ಕೆ ಹೋಗಬೇಡಿ ಎಂದು ಅವರು ತಡೆಯುತ್ತಿದ್ದಾರೆ ಅಂತ ಹೇಳಿದ್ದೇನೆ. ಗೋ ಹತ್ಯೆ‌ ಕಾನೂನು ಹಾಗೂ ಮತಾಂತರ ನಿಷೇಧ ಕಾನೂನಿಗೆ ಸಪೋರ್ಟ್ ಮಾಡಲಿ ಎಂದು ಹೇಳಿರುವೆ. ವಾತಾವರಣ ಕೆಡಿಸುವ ಕೆಲಸ ಆಗ್ತಿದೆ ಅವರ ನಾನು ಮಾತಾಡಿಲ್ಲ. ಇದರ ಅಡ್ವಾಂಟೇಜ್ ತೆಗೆದುಕೊಳ್ಳುವ ಕೆಲಸ ಅವರು ಮಾಡ್ತಿದ್ದಾರೆ. ಸಂಜಯ್ ಪಾಟೀಲ್ ಬಗ್ಗೆ ಪ್ರೀಯಾಂಕಾ ಜಾರಕಿಹೊಳಿ, ಅಂಜಲಿ ನಿಂಬಾಳ್ಕರ್ ಯಾಕೆ ಮಾತಾಡ್ತಿಲ್ಲ. ನನ್ನ ವಿರುದ್ಧ ಅವರ್ಯಾಕೆ ಮಾತಾಡ್ತಿಲ್ಲ. ಇವರು ಸ್ವಂತ ಲಾಭ ತೆಗೆದುಕೊಳ್ಳಲು ನೋಡ್ತಿದ್ದಾರೆ. ಅಂಜಲಿ ಕಾಂಗ್ರೇಸ್ ನಲ್ಲಿದ್ದರೂ ನಾನು ಆಕೆಗೆ ತಂಗಿ ಅಂತ ಕರೆಯುತ್ತೇನೆ. ಅಂಜಲಿ ಹೇಳಲಿ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತಾಡ್ತಾನೆ ಅಂತ ಹೇಳಲಿ. 

ಪ್ರಧಾನಿ ಅಭ್ಯರ್ಥಿ ಹೆಸರಲ್ಲಿ ಕಾಂಗ್ರೆಸ್‌ ಮತ ಕೇಳುತ್ತಿಲ್ಲ: ಮಾಜಿ ಸಚಿವ ಸಿ.ಟಿ.ರವಿ ಹೇಳಿದ್ದೇನು?

ಪ್ರೀಯಾಂಕಾ ಜಾರಕಿಹೊಳಿ ಮಹಿಳೆಯರಿಗೆ ಅಪಮಾನ ಮಾಡ್ತಾರೆ ಅಂತ ಹೇಳಲಿ ನೋಡೊಣ. ಜಗತ್ತಿನಲ್ಲಿ ಒಬ್ಬರೇ ಮಹಿಳೆಯರಿದ್ದಾರಾ ಎಂದು ಪ್ರಶ್ನೆ ಮಾಡಿದ ಸಂಜಯ್ ಪಾಟೀಲ್. ನನ್ನ ತಾಯಿಗೆ 90 ವರ್ಷ ಅವರು ಬೆಡ್ ನಲ್ಲಿದ್ದಾರೆ ತಾಯಿಗೆ ಹೆಚ್ಚು‌ಕಮ್ಮಿ ಆದ್ರೆ ಯಾರು ಜವಾಬ್ದಾರಿ. ರಾಜಕೀಯ ಲಾಭ ತೆಗೆದುಕೊಳ್ಳಲು ಇದೊಂದು ಷಢ್ಯಂತ್ರ ಹರ್ಟ್ ಆಗುವ ರೀತಿ ನಾನು ಎನೂ ಮಾತನಾಡಿಲ್ಲ. ಚುನಾವಣೆಗೆ ಇನ್ನು 20 ದಿನ ಇದೆ ನೀವು ಮಾತಾಡ್ತಿರಿ ನಾವು ಮಾತಾಡ್ತಿವಿ ಸ್ಪೋಟಿವ್ ಆಗಿ ತೆಗೆದುಕೊಳ್ಳಿ. ನಿಮ್ಮ‌ಮನೆಯ ಮುಂದೆ ಬಂದು ಪ್ರತಿಭಟನೆ ಮಾಡಿದ್ದಕ್ಕೆ ಕಾನೂನು ಹೋರಾಟ ಮಾಡ್ತಿರಾ, ಕೋರ್ಟ್ ನಲ್ಲಿ ಕ್ರಿಮಿನಲ್‌ ಕೇಸ್ ಮಾಡ್ತಿನಿ ಎಲ್ಲಾ ಕಂಪ್ಲೀಟ್ ವಿಡಿಯೋ ರೆಕಾರ್ಡ್ ಇದೆ. ಕೋರ್ಟ್ ನಲ್ಲಿ ಕ್ರಿಮಿನಲ್‌ ಕೇಸ್ ದಾಖಲು ಮಾಡ್ತಿನಿ ಎಂದು ಸಂಜಯ್ ಪಾಟೀಲ್ ಹೇಳಿದರು.

Follow Us:
Download App:
  • android
  • ios