ದೇಶ ಬಿಜೆಪಿಯತ್ತ ದೃಷ್ಟಿ ನೆಟ್ಟಿದೆ, ನಮ್ಮ ಗುರಿ ಸ್ಪಷ್ಟವಾಗಿದೆ: ಪ್ರಧಾನಿ ಮೋದಿ!
ನವದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶವನ್ನು ಒಗ್ಗೂಡಿಸಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವ ಶಕ್ತಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ನವದೆಹಲಿ(ಜ.12): ದೇಶದ ಜನತೆ ಬಿಜೆಪಿಯತ್ತ ದೃಷ್ಟಿ ನೆಟ್ಟಿದ್ದು, ದೇಶವನ್ನು ಪ್ರಗತಿಯ ಪಥದಲ್ಲಿ ಮುನ್ನಡೆಯುವಂತೆ ಮಾಡಲು ಬಿಜೆಪಿಗೆ ಮಾತ್ರ ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ನವದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶವನ್ನು ಒಗ್ಗೂಡಿಸಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವ ಶಕ್ತಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಿಂದ ಮಾತ್ರ ಸಾಧ್ಯ ಎಂದು ಹೇಳಿದರು.
PM Modi at BJP National Convention: It has happened for the first time in the history of the country that a government that came into power with absolute majority hasn't been accused of corruption. We can take pride in the fact that there is no taint on us. pic.twitter.com/iwK45ZrsPK
— ANI (@ANI) January 12, 2019
ದೇಶ ಸ್ವಾತಂತ್ರ್ಯಗೊಂಡ ಮೇಲೆ ಸರ್ದಾರ್ ವಲ್ಲಭ್ ಭಾಯಿ ಪಟೇಲ್ ಪ್ರಧಾನಿಯಾಗಿದ್ದರೆ ಇಂದು ದೇಶದ ಸ್ಥಿತಿ ಬೇರೆಯೇ ಆಗಿರುತ್ತಿತ್ತು. ಅದರಂತೆ 2004ರ ಬಳಿಕವೂ ಮಾಜಿ ಪ್ರಧಾನಿ, ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರೇ ಪ್ರಧಾನಿಯಾಗಿದ್ದರೆ ದೇಶದ ಚಹರೆಯೇ ಬದಲಾಗಿರುತ್ತಿತ್ತು ಎಂದು ಮೋದಿ ಹೇಳಿದರು.
2004ರಿಂದ 2014ರ ಅವಧಿಯು ಭಾರತ ವಿಶ್ವದ ಮುಂದೆ ತಲೆತಗ್ಗಸಿದ ಪರ್ವವಾಗಿತ್ತು. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ದೇಶದ ಮರ್ಯಾದೆ ಹರಾಜಾಗಿತ್ತು ಎಂದು ಪ್ರಧಾನಿ ಕಿಡಿಕಾರಿದರು.
ಇದೇ ವೇಳೆ ಕೇಂದ್ರದ ಎನ್ ಡಿಎ ಸರ್ಕಾರದ ಸಾಧನೆಗಳನ್ನು ಬಿಚ್ಚಿಟ್ಟ ಪ್ರಧಾನಿ ಮೋದಿ, ನಾಲ್ಕುವರೆ ವರ್ಷಗಳ ಕಾರ್ಯಕಲಾಪದ ಅಭಿವೃದ್ಧಿ ಕಾರ್ಯಗಳನ್ನು ವಿಸ್ತಾರವಾಗಿ ವಿವರಿಸಿದರು.
PM Narendra Modi at BJP National Convention in Delhi: The government before us pushed the country into darkness. It won't be wrong if I say that India lost 10 important years (2004-2014) in scams and corruption. pic.twitter.com/5Or2XzTOrW
— ANI (@ANI) January 12, 2019
ಅಲ್ಲದೇ ಅಪನಗದೀಕರಣ, ಜಿಎಸ್ ಟಿ, ತೆರಿಗೆ ಕಾನೂನು, ಉನ್ನತ ವರ್ಗದ ಬಡವರಿಗಾಗಿ ಶೇ.10 ರಷ್ಟು ಉದ್ಯೋಗದಲ್ಲಿ ಮೀಸಲಾತಿ, ತ್ರಿವಳಿ ತಲಾಖ್ ಹೀಗೆ ಹತ್ತು ಹಲವು ವಿಷಯಗಳ ಕುರಿತು ಪ್ರಧಾನಿ ಮೋದಿ ದೀರ್ಘವಾಗಿ ಮಾತನಾಡಿದರು.
PM Modi at BJP National Convention in Delhi: Important initiatives have been taken up in last 4 years for women empowerment. Ppl made fun of ' Beti Bachao, Beti Padhao' for political opposition, but we have come a long way to free society of wrong beliefs that existed for decades pic.twitter.com/QpOjuRuIAJ
— ANI (@ANI) January 12, 2019
ಇನ್ನು ಕಾಂಗ್ರೆಸ್ ವಿರುದ್ಧ ತಮ್ಮ ಭಾಷಣದಲ್ಲಿ ಹರಿಹಾಯ್ದ ಮೋದಿ, ಭ್ರಷ್ಟಾಚಾರ, ವಂಶವಾಹೀ ಆಡಳಿತ ಆ ಪಕ್ಷದ ಮೂಲ ಗುಣ ಎಂದು ಕಿಡಿಕಾರಿದರು. ಕ್ರಿಶ್ಚಿಯನ್ ಮಿಶೆಲ್ ನನ್ನು ರಕ್ಷಿಸಲು ಆ ಪಕ್ಷ ಹೆಣಗುತ್ತಿರುವ ರೀತಿ ನೋಡಿದರೆ ನಗು ಬರುತ್ತದೆ ಎಂದು ಮೋದಿ ಲೇವಡಿ ಮಾಡಿದರು.
ಈ ವೇಳೆ ರಾಮ ಮಂದಿರದ ಕುರಿತು ಪ್ರಸ್ತಾಪಿಸಿದ ಪ್ರಧಾನಿ, ಧರ್ಮ ಧರ್ಮಗಳ ನಡುವೆ ಸಮನ್ವಯ ತರುವುದರ ಮೂಲಕ ಸಮಾಜದಲ್ಲಿ ಶಾಂತಿ ತರಲು ನಾವು ಪ್ರಯತ್ನಿಸುತ್ತಿದ್ದರೆ, ಕಾಂಗ್ರೆಸ್ ಧರ್ಮಗಳ ನಡುವೆ ವಿಷಬೀಜ ಬಿತ್ತಿ ರಾಜಕೀಯ ಲಾಭ ಪಡೆಯುವ ಹುನ್ನಾರ ನಡೆಸುತ್ತಿದೆ ಎಂದು ಹರಿಹಾಯ್ದರು.
PM: Bank gave loans of Rs 18 lakh cr in 60 yrs & Rs 34 lakh cr in last 6 yrs of Congress governance. There were two means of taking loans in the country. One common process & the other Congress process. In the Congress process, banks were forced to give loans to fraudster friends pic.twitter.com/sM1TdFAhHr
— ANI (@ANI) January 12, 2019
ಇಂದು ನವದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪ್ರಧಾನಿ ನೆರೇಂದ್ರ ಮೋದಿ ಮಾಡಿದ ಭಾಷಣದ ಪೂರ್ಣ ವಿಡಿಯೋ ನಿಮಗಾಗಿ...
"
ಕುಮಾರಣ್ಣ ಸಿಎಂ? ಅಥವಾ ಕ್ಲರ್ಕ್?: ಮೋದಿ ಲೇವಡಿ!
ಕುಮಾರಸ್ವಾಮಿ ಮೇಲೆ ಮೋದಿ ಅನುಕಂಪದ ಮಾತು: ಹಿಂದಿನ ಮರ್ಮವೇನು?