ಮನೆಗೆ ಕರೆದೊಯ್ಯದ ಪತಿ ವಿರುದ್ಧ ಪತ್ನಿ ಧರಣಿ
ನ್ಯಾಯಾಲಯದ ತೀರ್ಪು ನೀಡಿದರೂ ಮನೆಗೆ ಕರೆದೊಯ್ಯದ ಪತಿ ಮನೆ ಎದುರು ಪತ್ನಿ ಉಪವಾಸ ಸತ್ಯಾಗ್ರಹ ಆರಂಭಿಸಿರುವ ಘಟನೆ ನಗರದಲ್ಲಿ ನಡೆದಿದೆ. ನಗರದ ಅನ್ನಪೂರ್ಣೇಶ್ವರಿ ಬಡಾವಣೆಯ 5ನೇ ಕ್ರಾಸ್ನಲ್ಲಿ ವಾಸವಾಗಿರುವ ತಾಲೂಕಿನ ಹೊನ್ನಾಯನಕಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕ ಅಶೋಕ್ ಪತ್ನಿ ಶಾಂತಕುಮಾರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಮಂಡ್ಯ(ನ.15): ನ್ಯಾಯಾಲಯದ ತೀರ್ಪು ನೀಡಿದರೂ ಮನೆಗೆ ಕರೆದೊಯ್ಯದ ಪತಿ ಮನೆ ಎದುರು ಪತ್ನಿ ಉಪವಾಸ ಸತ್ಯಾಗ್ರಹ ಆರಂಭಿಸಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ಅನ್ನಪೂರ್ಣೇಶ್ವರಿ ಬಡಾವಣೆಯ 5ನೇ ಕ್ರಾಸ್ನಲ್ಲಿ ವಾಸವಾಗಿರುವ ತಾಲೂಕಿನ ಹೊನ್ನಾಯನಕಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕ ಅಶೋಕ್ ಪತ್ನಿ ಶಾಂತಕುಮಾರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಪ್ರೇಮ ವಿವಾಹವಾಗಿದ್ದ ನವ ವರನನ್ನು ಕೊಲೆ ಮಾಡಿ ನದಿಗೆಸೆದ್ರು..!
ನಾಗಮಂಗಲ ತಾಲೂಕಿನ ನರಗನಹಳ್ಳಿ ಗಂಗೇಗೌಡರ ಪುತ್ರ ಅಶೋಕ್ ಹಾಗೂ ಮಂಡ್ಯ ತಾಲೂಕು ಹೊನ್ನಾಗಳ್ಳಿ ದೇವೇಗೌಡರ ಪುತ್ರಿ ಶಾಂತಕುಮಾರಿ ವಿವಾಹ ಕಳೆದ 9 ವರ್ಷಗಳ ಹಿಂದೆ ನಡೆದಿತ್ತು. ಈ ದಂಪತಿಗೆ ಮಕ್ಕಳಿರಲಿಲ್ಲ. 2014ರಲ್ಲಿ ಪತಿ ಅಶೋಕ್ ಬೇರೆ ಮನೆ ಮಾಡುವುದಾಗಿ ತಿಳಿಸಿ ಪತ್ನಿಯನ್ನು ತವರಿಗೆ ಕಳುಹಿಸಿದ್ದನು. ನಂತರದ ದಿನಗಳಲ್ಲಿ ಆತ ಪತ್ನಿಗೆ ವಿಚ್ಛೇದನ ನೋಟಿಸ್ ಕಳುಹಿಸಿದ್ದಾನೆ.
ಕೆ. ಆರ್. ಪೇಟೆ: ಕಾಂಗ್ರೆಸ್ನಿಂದ ಬೈ ಎಲೆಕ್ಷನ್ ಸ್ಪೆಷಲಿಸ್ಟ್ ಕಣಕ್ಕೆ..!
ಪ್ರಕರಣದ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ 2019ರ ಫೆ. 8ರಂದು ವಿಚ್ಚೇದನಕ್ಕೆ ಸಮ್ಮತಿಸದೆ ಪತ್ನಿಯನ್ನು ಮನೆಗೆ ಕರೆಯೊಯ್ಯುವಂತೆ ತೀರ್ಪು ನೀಡಿತ್ತು. ನ್ಯಾಯಾಲಯದ ತೀರ್ಪಿನ ನಂತರ ಪತಿ ಅಶೋಕ್ ಮೇ ತಿಂಗಳಲ್ಲಿ ಮನೆಗೆ ಕರೆದುಕೊಂಡು ಹೋಗುವುದಾಗಿ ಒಪ್ಪಿಕೊಂಡಿದ್ದನು. ಆದರೆ, ಈವರೆಗೂ ಪತ್ನಿ ಶಾಂತಕುಮಾರಿಯನ್ನು ಮನೆಗೆ ಕರೆದೊಯ್ಯದೇ ಸತಾಯಿಸುತ್ತಿದ್ದನು.
ಇದರಿಂದ ಬೇಸತ್ತ ಪತ್ನಿ ಶಾಂತಕುಮಾರಿ ನಗರದ ಅನ್ನಪೂರ್ಣೇಶ್ವರಿ ಬಡಾವಣೆಯಲ್ಲಿ ಪತಿ ಮನೆ ಎದುರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಪೊಲೀಸರು ಧಾವಿಸಿ ಶಾಂತಕುಮಾರಿಗೆ ಭದ್ರತೆ ಒದಗಿಸಿದ್ದಾರೆ. ಶಾಂತಕುಮಾರಿ ಧರಣಿ ಆರಂಭಿಸುತ್ತಿದ್ದಂತೆ ಪತಿ ಅಶೋಕ್ ತಂದೆ ಮನೆಯೊಳಗಿಂದ ಹೊರಗೆ ಬಂದು ಬಾಗಿಲಿಗೆ ಬೀಗ ಹಾಕಿ ಭದ್ರತೆಯಲ್ಲಿದ್ದ ಮಹಿಳಾ ಪೊಲೀಸ್ ಪೇದೆಯನ್ನೂ ತಳ್ಳಿ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ. ತಮಗೆ ನ್ಯಾಯ ದೊರೆಯುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಅಶೋಕ್ ಪತ್ನಿ ಶಾಂತಕುಮಾರಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಕೆ. ಆರ್. ಪೇಟೆ JDS ಅಭ್ಯರ್ಥಿ ಫಿಕ್ಸ್, ಅಧಿಕೃತ ಘೋಷಣೆಯೊಂದೇ ಬಾಕಿ