ಅದೇ ಸ್ಥಳದಲ್ಲಿ ವಿದ್ಯಾಸಾಗರ್ ಪ್ರತಿಮೆ ನಿರ್ಮಾಣ: ಮೋದಿ ಭರವಸೆ
ಅಮಿತ್ ಶಾ ರೋಡ್ ಶೋ ಬಳಿಕ ಭುಗಿಲೆದ್ದಿದ್ದ ಹಿಂಸಾಚಾರ| ಕೋಲ್ಕತ್ತಾ ಹಿಂಸಾಚಾರ ಖಂಡಿಸಿದ ಪ್ರಧಾನಿ ಮೋದಿ| ಟಿಎಂಸಿ ಗೂಂಡಾ ವರ್ತನೆ ಪ್ರಜಾಪ್ರಭುತ್ವಕ್ಕೆ ಮಾರಕ ಎಂದ ಮೋದಿ| ಹಿಂಸಾಚಾರದಲ್ಲಿ ಧ್ವಂಸಗೊಂಡಿದ್ದ ಈಶ್ವರ್ ಚಂದ್ರ ವಿದ್ಯಾಸಾಗರ್ ಪ್ರತಿಮೆ| ಅದೇ ಸ್ಥಳದಲ್ಲಿ ಈಶ್ವರ್ ಚಂದ್ರ ವಿದ್ಯಾಸಾಗರ್ ಭವ್ಯ ಪ್ರತಿಮೆ ನಿರ್ಮಾಣದ ಭರವಸೆ|
ಮಥುರಾಪುರ್(ಮೇ.16): ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರೋಡ್ ಶೋ ಬಳಿಕ, ಪ.ಬಂಗಾಳದ ಕೋಲ್ಕತ್ತಾದಲ್ಲಿ ನಡೆದ ಹಿಂಸಾಚಾರವನ್ನು ಪ್ರಧಾನಿ ಮೋದಿ ತೀವ್ರವಾಗಿ ಖಂಡಿಸಿದ್ದಾರೆ.
ಪ.ಬಂಗಾಳದ ಮಥುರಾಪುರ್ದಲ್ಲಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಟಿಎಂಸಿ ಗೂಂಡಾಗಳಿಂದ ಧ್ವಂಸವಾಗಿರುವ ಈಶ್ವರ್ ಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆಯನ್ನು ಅದೇ ಸ್ಥಳದಲ್ಲಿ ಭವ್ಯವಾಗಿ ಪುನರ್ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದಾರೆ.
PM Modi in Mathurapur,WB: TMC goons spread violence, they vandalised statue of Vidyasagar. CCTV cameras were installed there. The way the state govt erased evidences of Narada& Sarada scam, it is trying to remove evidence in the incident. I demand a strict action should be taken. pic.twitter.com/V1lc9fIR9x
— ANI (@ANI) May 16, 2019
ಟಿಎಂಸಿ ಪ.ಬಂಗಾಳದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದ್ದು, ಇದಕ್ಕೆ ಅಮಿತ್ ಶಾ ರೋಡ್ ಶೋ ಮೇಲೆ ನಡೆದ ದಾಳಿಯೇ ಸಾಕ್ಷಿ ಎಂದು ಪ್ರಧಾನಿ ಮೋದಿ ಹರಿಹಾಯ್ದರು.
ಆದರೆ ಟಿಎಂಸಿ ಗೂಂಡಾಗಳಿಗೆ ಹೆದರುವ ಜಾಯಮಾನ ಬಿಜೆಪಿಯದ್ದಲ್ಲ, ಧ್ವಂಸವಾಗಿರುವ ಈಶ್ವರ್ ಚಂದ್ರ ವಿದ್ಯಾಸಾಗರ್ ಪ್ರತಿಮೆಯನ್ನು ಅದೇ ಸ್ಥಳದಲ್ಲಿ ಭವ್ಯವಾಗಿ ಪುನರ್ ನಿರ್ಮಾಣ ಮಾಡುವುದು ಶತಸಿದ್ಧ ಎಂದು ಮೋದಿ ಗುಡುಗಿದರು.
WB CM:He (PM) said he'll make Vidyasagar statue.Bengal has money to make the statue.Can he give back the 200 years old heritage? We've proof&you say that TMC has done.Aren't you ashamed?He should do sit ups for lying so much.Liar.Prove allegations otherwise we'll drag you to jail pic.twitter.com/v9zKD2xIjW
— ANI (@ANI) May 16, 2019
ಇನ್ನು ಮೋದಿ ಹೇಳಿಕೆಗೆ ತಿರುಗೇಟು ನೀಡಿರುವ ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಬಿಜೆಪಿಯ ದುಡ್ಡಲ್ಲಿ ಈಶ್ವರ್ ಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆ ಕಟ್ಟುವ ದುರ್ಗತಿ ರಾಜ್ಯಕ್ಕೆ ಬಂದಿಲ್ಲ ಎಂದು ಕಿಡಿಕಾರಿದ್ದಾರೆ.
ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.