ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ : ಪ್ರಖ್ಯಾತ ಜ್ಯೋತಿಷಿ
ಲೋಕ ಮಹಾ ಸಮರಕ್ಕೆ ದಿನಗಣನೆ ಆರಂಭವಾಗಿದೆ. ದೇಶದಲ್ಲಿ ಕಾಂಗ್ರೆಸ್ - ಬಿಜೆಪಿ ಗೆಲುವಿಗಾಗಿ ಸಖತ್ ಸರ್ಕಸ್ ಮಾಡುತ್ತಿವೆ. ಇತ್ತ ಜ್ಯೋತಿಷಿಯೊಬ್ಬರು ಮುಂದಿನ ಸರ್ಕಾರ ಯಾರದ್ದು ಎಂದು ಭವಿಷ್ಯ ನುಡಿದಿದ್ದಾರೆ.
ನವದೆಹಲಿ : ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇದೇ ವೇಳೆ ಸೋಲು ಗೆಲುವಿನ ಚರ್ಚೆಗಳು ಜೋರಾಗಿದೆ.
ಇದೇ ಸಂದರ್ಭದಲ್ಲಿ ಹಲವು ಸಮೀಕ್ಷೆಗಳು, ಜ್ಯೋತಿಷಿಗಳು ಸೋಲು ಗೆಲುವಿನ ಬಗ್ಗೆ ಭವಿಷ್ಯ ನುಡಿಯುತ್ತಿದ್ದಾರೆ. ಇದೀಗ ಜ್ಯೋತಿಷಿ ಬೇಜಾನ್ ದರುವಾಲಾ ಲೋಕಸಭಾ ಚುನಾವಣೆಯ ಸೋಲು ಗೆಲುವಿನ ಕುರಿತು ಚೈನಿಸ್ ಪರಿಕಲ್ಪನೆಯ ನೆರವಿನಿಂದ ಭವಿಷ್ಯ ನುಡಿದಿದ್ದಾರೆ.
ಈ ಜ್ಯೋತಿಷ್ಯದ ಪ್ರಕಾರ ಮೋದಿ ಹುಲಿ ಸ್ಥಾನದಲ್ಲಿ ನಿಂತರೆ, ರಾಹುಲ್ ಕೊಂಚ ಕೆಳಗಿನ ಸ್ಥಾನದಲ್ಲಿರುತ್ತಾರೆ. ಆದ್ದರಿಂದ ಈ ಚುನಾವಣೆಯಲ್ಲಿ ಮೋದಿ ಗೆಲುವು ಖಚಿತ ಎಂದು ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಮೋದಿ ಗೆಲುವಿನಿಂದ ಮುಂದೆ ಬಿಜೆಪಿ ಭವಿಷ್ಯವೂ ಪ್ರಜ್ವಲಿಸಲಿದೆ. ಎಂದು ಮಹಾ ಸಮರಕ್ಕೆ ಇನ್ನು ಕೆಲವೇ ದಿನಗಳಿರುವ ಈ ಸಂದರ್ಭದಲ್ಲಿ ಹೇಳಿದ್ದಾರೆ.
2019 ಲೋಕ ಮಹಾ ಸಮರದಲ್ಲಿ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಹಾಗೂ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನಡುವೆ ಫೈಟ್ ನಡೆಯುತ್ತಿದ್ದು, ಇದರಲ್ಲಿ ಸ್ಥಳೀಯ ಪಕ್ಷಗಳೂ ಕೂಡ ಮಹತ್ವದ ಪಾತ್ರ ವಹಿಸುತ್ತಿವೆ. ಇದೇ ವೇಳೆ ಪ್ರಸಿದ್ಧ ಜ್ಯೋತಿಷಿ ದರುವಾಲಾ ಮೋದಿಯೇ ಮತ್ತೊಮ್ಮೆ ಎಂದು ಭವಿಷ್ಯ ನುಡಿದಿದ್ದಾರೆ.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...