Asianet Suvarna News Asianet Suvarna News

ಒಂದು ರಾಶಿಗೆ ಲಾಭ - ಮತ್ತೊಂದು ರಾಶಿಗೆ ಪ್ರಗತಿ

ಒಂದು ರಾಶಿಗೆ  ಲಾಭ - ಮತ್ತೊಂದು ರಾಶಿಗೆ ಪ್ರಗತಿ

Special Bhavishya 20 December 2018
Author
Bengaluru, First Published Dec 20, 2018, 6:55 AM IST

ಒಂದು ರಾಶಿಗೆ  ಲಾಭ - ಮತ್ತೊಂದು ರಾಶಿಗೆ ಪ್ರಗತಿ

ಮೇಷ ರಾಶಿ : ನಿಮ್ಮ ಮನಸ್ಸಿಗೆ ಇಂದು ಸ್ವಲ್ಪ ಘಾಸಿಯಾಗಲಿದೆ. ಬೆಂಕಿ ಅವಘಡ ಸಂಭವ, ನಿಮ್ಮ ಕೋಪ ನಿಮ್ಮ ಒಳ್ಳೆತನವನ್ನು ತಿಂದುಹಾಕುವ ಸಮಯ ಎದುರಾಗಲಿದೆ, ಜಾಗ್ರತೆ ಇರಲಿ, ಮಾತು ಮಿತವಾಗಿರಲಿ. 

ದೋಷಪರಿಹಾರ : ಗಣಪತಿಗೆ ಗರಿಕೆ ಸಮರ್ಪಿಸಿ

ವೃಷಭ : ಇಂದು ನಿಮ್ಮ ಮನಸ್ಸಿಗೆ ಅಸಮಾಧಾನದ ದಿನ, ರಾಜಕಾರಣಿಗಳಿಂದ ಅಥವಾ ಸರ್ಕಾರಿ ಕೆಲಸಗಳಲ್ಲಿ ಅಸಹಕಾರ, ಸುಖ ಹಾನಿಯಾಗುವ ಸಾಧ್ಯತೆಯೂ ಇದೆ. ಮುಖ್ಯವಾಗಿ ಕಾಲಿಗೆ ಸ್ವಲ್ಪ ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ ಇದೆ. ಜಾಗ್ರತೆ ಇರಲಿ.   

ದೋಷ ಪರಿಹಾರ : ನವಗ್ರಹ ದರ್ಶನ ಮಾಡಿ

ಮಿಥುನ : ದಾಂಪತ್ಯದಲ್ಲಿ ವಿರಸ, ಹೊಂದಾಣಿಕೆ ಇರುವುದಿಲ್ಲ,  ಸ್ತ್ರೀಯರಿಂದ ಹಣ ನಷ್ಟ ನಷ್ಟವಾಗುವ ಸಂಭವ ಇದೆ. ಸಣ್ಣಪುಟ್ಟ ವಿಷಯಗಳಿಗೆ ಕೋಪ ಸಂಭವಿಸುತ್ತದೆ. ವ್ಯಾಪಾರದಲ್ಲಿ ಅಶಾಂತತೆ. 

ದೋಷ ಪರಿಹಾರ : ಶಿವೋಪಾಸನೆ ಮಾಡಿ

ಕಟಕ : ಇಂದು ಜಲ ವ್ಯಾಪಾರಿಗಳಿಗೆ ಲಾಭದ ದಿನ, ಅಷ್ಟೇ ಅಲ್ಲ ರಸ ವ್ಯಾಪಾರಿಗಳಿಗೆ ಲಾಭದ ದಿನ, ಸ್ವಲ್ಪ ಧನ ನಷ್ಟವೂ ಇದೆ. ಗಂಡ-ಹೆಂಡಿರಲ್ಲಿ ಸ್ವಲ್ಪ ಸಾಮರಸ್ಯ ಸಮಸ್ಯೆ ಕಾಣುವ ಸಾಧ್ಯತೆ ಇದೆ. ಜಗಳಕ್ಕೆ ಆಸ್ಪದ ಕೊಡಬೇಡಿ.
  
ದೋಷ ಪರಿಹಾರ :  ಗಣಪತಿ ಆರಾಧನೆ ಮಾಡಿ

ಸಿಂಹ : ನಿಮ್ಮ ರಾಶಿಯ ಕೆಲವರಿಗೆ ಆರೋಗ್ಯ ಸಮಸ್ಯೆ ಕಾಣಿಸಲಿದೆ. ತಂದೆ-ಮಕ್ಕಳಲ್ಲಿ ಭಿನ್ನಾಭಿಪ್ರಾಯ ಮೂಡಲಿದೆ, ಬುದ್ಧಿಯಲ್ಲಿ ಮಂಕು, ಆತ್ಮವಿಶ್ವಾಸ ಹಾಳಾಗಲಿದೆ, ಉತ್ತಮರ ಸಹವಾಸದಿಂದ ದೂರಾಗುತ್ತೀರಿ. 

ದೋಷ ಪರಿಹಾರ : ಶಿವನಿಗೆ ಅರ್ಚನೆ ಮಾಡಿಸಿ

ಕನ್ಯಾ :  ಸ್ತ್ರೀಯರಿಗೆ ಇಂದು ಉತ್ತಮ ದಿನ, ನಿಮ್ಮ ಆಲೋಚನೆಗಳು ಸಾಕಾರಗೊಳ್ಳಲಿದೆ. ಸ್ವಲ್ಪ ಹಣ ನಷ್ಟವಾಗಲಿದೆ.ಉದ್ಯೋಗದಲ್ಲಿ ಸ್ವಲ್ಪ ಸಮಸ್ಯೆ ಉಲ್ಬಣವಾಗಲಿದೆ. ಗಂಧರ್ವರ ಆರಾಧನೆಯಿಂದ ಉದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ. 
  
ದೋಷ ಪರಿಹಾರ : ಗಂಧರ್ವ ಯಂತ್ರ ಮಾಡಿಸಿಕೊಳ್ಳಿ. 

ತುಲಾ :  ಇಂದು ಶತ್ರುಗಳಿಂದ ಲಾಭವಾಗುವ ಸಾಧ್ಯತೆ ಇದೆ. ಅಂದ್ರೆ ಅವರು ನಿಮ್ಮ ಮೇಲೆ ಮಾಡುವ ಯಾವುದೇ ದುಷ್ಟ ಯೋಜನೆ ನಿಮ್ಮ ಪಾಲಿಗೆ ವರವಾಗಲಿದೆ. ನಿಮ್ಮ ಅಭಿಪ್ರಾಯಗಳಿಗೆ ಮಾನ್ಯತೆ ದೊರೆಯಲಿದೆ.

ದೋಷ ಪರಿಹಾರ : ದುರ್ಗಾ ಸಪ್ತಶತಿ ಪಾರಾಯಣ ಮಾಡಿ

ವೃಶ್ಚಿಕ : ಸಾಹಸಕಾರ್ಯಗಳಲ್ಲಿ ವಿಘ್ನ, ಬಾಯಲ್ಲಿ ಸ್ವಲ್ಪ ತೊಂದರೆ ಕಾಣಿಸಿಕೊಳ್ಳುತ್ತದೆ. ಹುಣ್ಣು ಈ ರೀತಿಯ ಸಮಸ್ಯೆಗಳು ಬಾಧಿಸಬಹುದು. ಸ್ತ್ರೀಯರಿಂದ ನಿಮ್ಮ ಮನಸ್ಸಿಗೆ ನೆಮ್ಮದಿ ಸಾಧ್ಯತೆಯೂ ಇದೆ.

ದೋಷ ಪರಿಹಾರ : ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಧನಸ್ಸು : ಇಂದು ತಂದೆ ಮಕ್ಕಳಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಮೂಡಿ ಮನೆ ಬಿಟ್ಟು ಹೋಗುವ ಸಾಧ್ಯತೆ ಇದೆ. ಅದಕ್ಕೆ ಆಸ್ಪದ ಕೊಡಬಾರದು ಎಂದರೆ ಶಿವನಿಗೆ ಭಸ್ಮಾಭಿಷೇಕ ಮಾಡಿಸಿ ಬನ್ನಿ. ಮನೆಯಲ್ಲೂ ಬಾಧೆ. 

ದೋಷ ಪರಿಹಾರ : ದತ್ತಾತ್ರೇಯ ಉಪಾಸನೆ ಮಾಡಿ.

ಮಕರ :  ಸುಖ ಅಭಿವೃದ್ಧಿ, ವ್ಯಾಪಾರಿಗಳಿಗೆ ಉತ್ತಮ ದಿನ, ಗುರು ನಿಮಗೆ ಅನುಕೂಲಕರವಾಗಿರುವುದರಿಂದ ಉದ್ಯೋಗದಲ್ಲಿ ಶೇಯಸ್ಸು ಬಡ್ತಿ ಹೊಂದುವ ಸಾಧ್ಯತೆ ಇದೆ. ಸ್ವಲ್ಪ ಧನ ನಷ್ಟ ಸಂಭವ.
  
ದೋಷ ಪರಿಹಾರ : ತಿಲ ದಾನ ಮಾಡಿ

ಕುಂಭ : ಉದ್ಯೋಗ ಸ್ಥಳದಲ್ಲಿ ಸ್ವಲ್ಪ ಕಿರಿಕಿರಿ ಉಂಟಾಗಬಹುದು, ಆದರೆ ಆತಂಕವೇನೂ ಇಲ್ಲ. ಹಿರಿಯರಿಂದ ಸಹಕಾರ, ಮಾತಿನಿಂದ ತೊಡಕು, ವಿದ್ಯೆಯಲ್ಲಿ ಭಂಗ, ನಿಮ್ಮ ಪ್ರರ್ಥನೆ ಸಾಕಾರವಾಗುವುದು ಕಷ್ಟ.   

ದೋಷ ಪರಿಹಾರ : ಅಂಬಾ ಭವಾನಿ ದರ್ಶನ ಮಾಡಿ.
  
ಮೀನ : ಉದ್ಯೋಗದಲ್ಲಿ ಉತ್ತಮ ಪ್ರಗತಿ, ಸಹೋದರಿಯರ ಸಹಕಾರ, ಸ್ತ್ರೀಯರಿಗೆ ಬೇಸರದ ದಿನ, ದೇವಸ್ಥಾನ ದರ್ಶನ, ಸಂಗಾತಿಯೊಂದಿಗೆ ಆಪ್ತ ಸಮಾಲೋಚನೆ, ಸಮಾಧಾನದ ದಿನ.
  
ದೋಷ ಪರಿಹಾರ : ದೇವಸ್ಥಾನದಲ್ಲಿ ತೀರ್ಥ ಪ್ರೋಕ್ಷಣೆ ಮಾಡಿಕೊಳ್ಳಿ

ವಾಞ್ಮಯೀ.

Follow Us:
Download App:
  • android
  • ios