ಧರ್ಮ ರಕ್ಷಣೆ: ದಂಡೆತ್ತಿ ಬಂದ ಮುಸ್ಲಿಂ ದೊರೆಗಳ ಎದೆ ನಡುಗಿಸಿದ್ದ ನಾಗಾಸಾಧುಗಳು!

ಉತ್ತರ ಪ್ರದೇಶದ ಪ್ರಯಾಗರಾಜ್​​​ನಲ್ಲಿ ಮಹಾಕುಂಭಮೇಳ ನಡೆಯುತ್ತಿದೆ. ಈ ಮಹಾಕುಂಭಮೇಳದ ಕೇಂದ್ರಬಿಂದು ಎಂದ್ರೆ ಅದು ನಾಗಾಸಾಧುಗಳು. ನಾಗಾಸಾಧುಗಳೆಂದ್ರೆ ಸಮಾಜದಿಂದ ದೂರ ಇರುವವರು. ಎಲ್ಲವನ್ನು ತೊರೆದು ವೈರಾಗಿಗಳಾಗಿರುವವರು ಎಂದು ನಾವಂದುಕೊಂಡಿದ್ದೇವೆ. ಆದ್ರೆ ನಾಗಾಸಾಧುಗಳ ಇತಿಹಾಸ ತಿಳಿದ್ರೆ ಮೈ ರೋಮಾಂಚನವಾಗುತ್ತೆ. ಈ ಹಿಂದೆ ದೇಶದ ಮೇಲೆ ಶತ್ರುಗಳು ದಾಳಿ ಮಾಡಿದಾಗ ಹೋರಾಡಿ ಗೆದ್ದವರು ನಾಗಾಸಾಧುಗಳು. 

Girish Goudar  | Updated: Jan 25, 2025, 10:35 AM IST

ಬೆಂಗಳೂರು(ಜ.25):  ಶಿವ ಸ್ವರೂಪಿ.. ಉಗ್ರರೂಪಿ.. ಧರ್ಮ ಸೈನಿಕ.. ನಾಗಾಸಾಧುಗಳು..! ದಂಡೆತ್ತಿ ಬಂದ ಮುಸ್ಲಿಂ ದೊರೆಗಳ ಎದೆ ಡುಗಿಸಿದ್ದು ಇವರೇ..! ಅಖಾಡ ರಹಸ್ಯ.. ಯುದ್ಧ ಚರಿತ್ರೆ.. ನಾಗಾಸಾಧುಗಳ ಪ್ರಾಣತ್ಯಾಗ..! ಧರ್ಮ ರಕ್ಷಣೆಗೆ ಶಸ್ತ್ರ ಎತ್ತಿದ್ದವರ ಇತಿಹಾಸ ಅದೆಷ್ಟು ರೋಚಕ..? ಇದೆಲ್ಲವನ್ನು ನೋಡೋದೇ ಈ ಕ್ಷಣದ ವಿಶೇಷ ಅಘೋರಿಗಳ ಅತ್ಯುಗ್ರ ಕಥೆ. 

ಉತ್ತರ ಪ್ರದೇಶದ ಪ್ರಯಾಗರಾಜ್​​​ನಲ್ಲಿ ಮಹಾಕುಂಭಮೇಳ ನಡೆಯುತ್ತಿದೆ. ಈ ಮಹಾಕುಂಭಮೇಳದ ಕೇಂದ್ರಬಿಂದು ಎಂದ್ರೆ ಅದು ನಾಗಾಸಾಧುಗಳು. ನಾಗಾಸಾಧುಗಳೆಂದ್ರೆ ಸಮಾಜದಿಂದ ದೂರ ಇರುವವರು. ಎಲ್ಲವನ್ನು ತೊರೆದು ವೈರಾಗಿಗಳಾಗಿರುವವರು ಎಂದು ನಾವಂದುಕೊಂಡಿದ್ದೇವೆ. ಆದ್ರೆ ನಾಗಾಸಾಧುಗಳ ಇತಿಹಾಸ ತಿಳಿದ್ರೆ ಮೈ ರೋಮಾಂಚನವಾಗುತ್ತೆ. ಈ ಹಿಂದೆ ದೇಶದ ಮೇಲೆ ಶತ್ರುಗಳು ದಾಳಿ ಮಾಡಿದಾಗ ಹೋರಾಡಿ ಗೆದ್ದವರು ನಾಗಾಸಾಧುಗಳು. ದೇಶ ರಕ್ಷಣೆಯಲ್ಲಿ, ಧರ್ಮ ರಕ್ಷಣೆಯಲ್ಲಿ ಇವರು ಸದಾ ಮುಂದಿರುವವರು. ನಾಗಾಸಾಧುಗಳು ಜಗತ್ತಿನ ಮಹಾನ್​ ಅಕ್ರಮಣಕಾರಿ ತೈಮೂರ್​​ ಸೇರಿದಂತೆ ಯಾವೆಲ್ಲ ಶತ್ರಗಳ ಜೊತೆ ಯುದ್ಧ ಮಾಡಿದ್ದಾರೆ? ಮಹಾಕುಂಭಮೇಳದ ನಂತರ ಇವರೆಲ್ಲ ಎಲ್ಲಿ ವಾಸಿಸುತ್ತಾರೆ ಅನ್ನೋದನ್ನು ಸೇರಿದಂತೆ ಇವರ ರೋಚಕ ಇತಿಹಾಸವನ್ನು ಒಮ್ಮೆ ನೋಡೋಣ ಬನ್ನಿ.

Daily Horoscope: ಇಂದು ಉಪವಾಸದಿಂದ ವಿಷ್ಣು ದೇವನ ಸ್ಮರಣೆ ಮಾಡಿದರೆ ಒಳಿತಾಗುವುದು 

ನಾಗಾಸಾಧುಗಳು ದೇಶ ಮತ್ತು ಧರ್ಮ ರಕ್ಷಣೆಗಾಗಿ ಮಾಡಿದ್ದ ಯುದ್ಧಗಳ ಪಟ್ಟಿ ಇಲ್ಲಿಗೆ ಮುಗಿಯೋದಿಲ್ಲ. 1857ರಲ್ಲಿ ಸ್ವತಂತ್ರ ಸಂಗ್ರಾಮದಲ್ಲೂ ನಾಗಾಸಾಧುಗಳು ಯುದ್ಧ ಮಾಡಿದ್ದಾರೆ.  ಬ್ರಿಟಿಷರಿಂದ ದೇಶಕ್ಕೆ ಸ್ವಾತಂತ್ರ್ಯ ಸಿಗಲು ನಾಗಾಸಾಧುಗಳ ಪಾತ್ರವೂ ಇದೆ. 1857ರಲ್ಲಿ ನಡೆದ ಸ್ವತಂತ್ರ ಸಂಗ್ರಾಮದಲ್ಲಿ ಬ್ರಿಟಿಷರು ರಾಣಿ ಲಕ್ಷ್ಮೀಬಾಯಿ ಸೇನೆ ಮೇಲೆ ದಾಳಿ ಮಾಡಿತ್ತು. ಆ ಸಂದರ್ಭದಲ್ಲಿ ನಾಗಾಸಾಧುಗಳ ಸೇನೆ ರಾಣಿ ಲಕ್ಷ್ಮೀಬಾಯಿ ಬೆಂಬಲಕ್ಕೆ ನಿಂತಿತ್ತು.  
ಇದಿಷ್ಟು ನಾಗಾಸಾಧುಗಳು ಧರ್ಮ ಮತ್ತು ದೇಶ ರಕ್ಷಣೆಗಾಗಿ ಹಿಂದಿನ ಕಾಲದಿಂದಲೂ ಹೋರಾಡಿಕೊಂಡು ಬಂದಿರುವ ರೋಚಕ ಇತಿಹಾಸ. ಹಾಗಿದ್ರೆ ಧರ್ಮಕ್ಕಾಗಿ ಮತ್ತು ದೇಶಕ್ಕಾಗಿ ಈ ಹಿಂದೆ ಇಷ್ಟೆಲ್ಲ ರೋಚಕ ಹೋರಾಟ ಮಾಡಿರುವ ನಾಗಾಸಾಧುಗಳ ಬಗ್ಗೆ ನಿಮಗೆಷ್ಟು ಗೊತ್ತಿದೆ? ನಾಗಾಸಾಧುಗಳ ನಿತ್ಯದ ಬದುಕು ಹೇಗಿರುತ್ತೆ? ಅವರ ಕಠೀಣ ಬದುಕಿನ ಹಿಂದಿರುವ ಆ ಮೂಲ ಮಂತ್ರವೇನು?.   

ರಕ್ಕಮ್ಮನ ಯೋಗ ನೋಡಿದ್ರೆ ಗಡಂಗ್ ಕುಡಿದಷ್ಟೇ ಕಿಕ್! ಯೋಗದಲ್ಲಿ ಪರಿಣಿತೆ ಜಾಕ್ವೆಲಿನ್ ಫರ್ನಾಂಡಿಸ್!

ನಾಗಾಸಾಧುಗಳ ಬದುಕಿನ ಬಂಡಿ ಅಷ್ಟು ಸುಲಭವಲ್ಲ. ನಾಗಾಸಾಧುಗಳ ತ್ಯಾಗ ತುಂಬಾನೇ ದೊಡ್ಡದು. ಅವರ ಜೀವನ ಮತ್ತು ದಿನಚರಿ ಬೇರೆಯವರಿಂದ ಕಷ್ಟಸಾಧ್ಯ. ಹಾಗಿದ್ರೆ ನಾಗಾಸಾಧುಗಳು ಆಗೋದು ಹೇಗೆ? ಅವರ ಕಠೀಣ ಬದುಕು ಹೇಗಿರುತ್ತೆ ಅನ್ನೋದರ ಕುರಿತು ಒಂದಿಷ್ಟು ಇಲ್ಲಿ ನೋಡೋಣ. 

ಇದು ನಾಗಾಸಾಧುಗಳ ಕಠೀಣ ಬದುಕು ಮತ್ತು ದೇಶ-ಧರ್ಮಕ್ಕಾಗಿ ಹಿಂದಿನಿಂದಲೂ ಅವರು ಹೋರಾಡಿಕೊಂಡು ಬಂದಿರೋ ರೋಚಕ ಇತಿಹಾಸ ಇದಾಗಿದೆ.