ಋತುಚಕ್ರದಲ್ಲಿ ದೇವರ ಪೂಜೆ ಹೇಗೆ? ಪ್ರೇಮಾನಂದ ಬಾಬಾರಿಂದ ತಿಳಿಯಿರಿ
Kannada
ಋತುಚಕ್ರದಲ್ಲಿ ಭಗವಂತನ ಭಕ್ತಿ ಹೇಗೆ?
ಮಹಿಳೆಯರಿಗೆ ಪ್ರತಿ ತಿಂಗಳು ಋತುಚಕ್ರ ಬರುತ್ತದೆ. ಈ ಸಮಯದಲ್ಲಿ ಅವರಿಗೆ ಪೂಜೆ-ಪುನಸ್ಕಾರ ಮಾಡುವುದನ್ನು ನಿಷೇಧಿಸಲಾಗಿದೆ. ಋತುಚಕ್ರದ ಸಮಯದಲ್ಲಿ ಮಹಿಳೆಯರು ಹೇಗೆ ಭಗವಂತನ ಭಕ್ತಿ ಮಾಡಬಹುದು?
Kannada
ಋತುಚಕ್ರದಲ್ಲಿ ಇದನ್ನು ಮಾಡಬೇಡಿ
ಪ್ರೇಮಾನಂದ ಮಹಾರಾಜರ ಪ್ರಕಾರ, ಮಾಸಿಕ ಧರ್ಮ ಅಂದರೆ ಋತುಚಕ್ರದ ಸಮಯದಲ್ಲಿ ಮಹಿಳೆಯರು ದೇವಸ್ಥಾನದಲ್ಲಿ ಪೂಜೆ-ಪುನಸ್ಕಾರ ಮಾಡಬಾರದು. ಜೊತೆಗೆ ಯಾವುದೇ ರೀತಿಯ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗವಹಿಸಬಾರದು.
Kannada
ಇದನ್ನು ಮಾಡುವುದರಿಂದಲೂ ದೂರವಿರಿ
ಋತುಚಕ್ರದ ಸಮಯದಲ್ಲಿ ಮಹಿಳೆಯರು ಯಾವುದೇ ಧಾರ್ಮಿಕ ಗ್ರಂಥವನ್ನು ಸ್ಪರ್ಶಿಸಬಾರದು. ಅಡುಗೆ ಮನೆಗೆ ಪ್ರವೇಶಿಸಬಾರದು . ದೇವರ ಸೇವೆ ಮಾಡುವುದರಿಂದಲೂ ಮಹಿಳೆಯರು ದೂರವಿರಬೇಕು.
Kannada
ಈ ನಿಯಮಗಳನ್ನು ಏಕೆ ರಚಿಸಲಾಗಿದೆ?
ಪ್ರೇಮಾನಂದ ಮಹಾರಾಜರ ಪ್ರಕಾರ, ಋತುಚಕ್ರದ ಸಮಯದಲ್ಲಿ ಮಹಿಳೆಯರ ದೇಹವನ್ನು ಅಪವಿತ್ರವೆಂದು ಪರಿಗಣಿಸಲಾಗಿದೆ. ಆದ್ದರಿಂದ ಈ ಸಮಯದಲ್ಲಿ ಮಹಿಳೆಯರು ಪೂಜೆ-ಪುನಸ್ಕಾರ ಮುಂತಾದ ಧರ್ಮ-ಕರ್ಮಗಳಿಂದ ದೂರವಿರಬೇಕು.
Kannada
ಋತುಚಕ್ರದಲ್ಲಿ ಹೀಗೆ ಭಕ್ತಿ ಮಾಡಿ
ಪ್ರೇಮಾನಂದ ಜೀ ಮಹಾರಾಜರ ಪ್ರಕಾರ, ಋತುಚಕ್ರದ 3 ದಿನಗಳಲ್ಲಿ ಮಹಿಳೆಯರು ಧರ್ಮ ಸಂಬಂಧಿ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ ಆದರೆ ನಾಮಜಪ ಮಾಡಬಹುದು. ಹೀಗೆ ಮಾಡುವುದರಿಂದ ಯಾವುದೇ ನಿಯಮವನ್ನು ಉಲ್ಲಂಘಿಸಿದಂತಾಗುವುದಿಲ್ಲ.
Kannada
ಮಾನಸಿಕ ಜಪ ಮಾಡಿ
ಮಹಿಳೆಯರು ಮಾಸಿಕ ಧರ್ಮದ ಸಮಯದಲ್ಲಿ ಮನಸ್ಸಿನಲ್ಲೇ ನಾಮಜಪ ಮಾಡಬಹುದು. ಈ ಮಂತ್ರ ಜಪವನ್ನು ಮಾನಸಿಕವಾಗಿ ಮಾಡಬೇಕು ಅಂದರೆ ಬಾಯಿಂದ ಧ್ವನಿ ಮಾಡದೆ ಮಂತ್ರ ಜಪ ಮಾಡಬೇಕು.