India

ಬಾಬಾ ಸಿದ್ದಿಕಿ ಪ್ರಕರಣದಿಂದ ಎಸ್ಆರ್‌ಕೆ ದೂರ ಉಳಿದಿದ್ದೇಕೆ?

ಹತ್ಯೆ ಬಳಿಕ  ಸಿದ್ದಿಕಿ ಕುಟುಂಬದೊಂದಿಗೆ ಅನೇಕರು ಕಾಣಿಸಿಕೊಂಡರು. ಆದರೆ  ಆಪ್ತ ಸ್ನೇಹಿತ ಶಾರುಖ್ ಖಾನ್ ಕುಟುಂಬ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿಲ್ಲ.

ಅಂತ್ಯಕ್ರಿಯೆಯಲ್ಲಿ ಸೆಲೆಬ್ರಿಟಿಗಳು

ಅಕ್ಟೋಬರ್ 12 ರಂದು ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಅಕ್ಟೋಬರ್ 13 ರಂದು ಮುಂಬೈನಲ್ಲಿ ಸಮಾಧಿ ಮಾಡಲಾಯಿತು. ಈ ವೇಳೆ ಬಾಲಿವುಡ್‌ನ ಹಲವಾರು ದಿಗ್ಗಜರು  ಸೇರಿದ್ದರು.

ಬಾಬಾ ಆಪ್ತ ಸ್ನೇಹಿತ ಎಸ್ಆರ್‌ಕೆ ಕಾಣಿಸಲಿಲ್ಲ

ಬಾಬಾ ಸಿದ್ದಿಕಿ ಅವರ ಆಪ್ತ ಸ್ನೇಹಿತರಲ್ಲಿ ಒಬ್ಬರಾದ ಶಾರುಖ್ ಖಾನ್ ಸಿದ್ದಿಕಿ ಕುಟುಂಬವನ್ನು ಭೇಟಿ ಮಾಡಲಿಲ್ಲ, ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿಲ್ಲ ಎಂಬುದು ಗಮನಾರ್ಹ.

ಬಾಬಾ ಸಿದ್ದಿಕಿ ಪ್ರಕರಣದಿಂದ ಶಾರುಖ್ ಖಾನ್ ದೂರ ಉಳಿದಿದ್ದೇಕೆ?

ಟೈಮ್ಸ್ ನೌ ವರದಿಯ ಪ್ರಕಾರ, ಶಾರುಖ್ ಖಾನ್ ಸಿದ್ದಿಕಿ ಕುಟುಂಬವನ್ನು ಭೇಟಿ ಮಾಡಲಿಲ್ಲ, ಏಕೆಂದರೆ ಅವರು ರಾಜಕೀಯದಿಂದ ಮಾತ್ರವಲ್ಲ, ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದಿಂದಲೂ ದೂರವಿರಲು ಬಯಸಿದ್ದರು.

ಸಲ್ಮಾನ್ ಖಾನ್‌ಗೂ ಸಂಬಂಧಿಸಿದ್ದರಿಂದ ಎಸ್ಆರ್‌ಕೆ ದೂರ ಉಳಿದರು!

 “ಶಾರುಖ್ ಖಾನ್ ರಾಜಕಾರಣಿಯ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಲು ಬಯಸಲಿಲ್ಲ. ಈ ವಿಷಯವು ಸಲ್ಮಾನ್ ಖಾನ್‌ಗೂ ಸಂಬಂಧಿಸಿರುವುದರಿಂದ, ಎಸ್ಆರ್‌ಕೆ ಇದರಿಂದ ದೂರವಿರಲು ಬಯಸಿದ್ದರು” ಎಂದು ಬರೆಯಲಾಗಿದೆ.

ಲಾರೆನ್ಸ್ ಬಿಷ್ಣೋಯ್‌ ಎಸ್ಆರ್‌ಕೆ ದೂರ ಉಳಿದಿದ್ದಕ್ಕೆ ಕಾರಣ

“ಲಾರೆನ್ಸ್ ಬಿಷ್ಣೋಯ್‌ನ  ನೆಟ್‌ವರ್ಕ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ತಿಳಿದ ಶಾರುಖ್ ತಮಗೆ ಕುಟುಂಬಕ್ಕೆ ಯಾವುದೇ ಹಾನಿಯಾಗಲು ಬಯಸುವುದಿಲ್ಲ. ಆದ್ದರಿಂದ ಅವರು ಇಡೀ ಪ್ರಕರಣದಿಂದ ದೂರ ಉಳಿದರು.”

ಬಾಬಾ ಸಿದ್ದಿಕಿ ಶಾರುಖ್-ಸಲ್ಮಾನ್ ರಾಜಿ ಮಾಡಿಸಿದ್ದರು

2008 ರಲ್ಲಿ ಕತ್ರಿನಾ ಕೈಫ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಜಗಳವಾದ ನಂತರ ಶಾರುಖ್ ಸಲ್ಮಾನ್ ಮಾತನಾಡುತ್ತಿರಲಿಲ್ಲ. 2013 ರಲ್ಲಿ ಬಾಬಾ ಸಿದ್ದಿಕಿ ತಮ್ಮ ಇಫ್ತಾರ್ ಪಾರ್ಟಿಯಲ್ಲಿ ಇಬ್ಬರ ರಾಜಿ ಮಾಡಿಸಿದ್ದರು.

Find Next One