Kannada

PM Kisan ಹಣ ಬಂದಿಲ್ಲವೇ? ಏನು ಮಾಡಬೇಕು?

ದಸರಾ, ದೀಪಾವಳಿ ಸಂಭ್ರದಲ್ಲಿರುವ ರೈತರಿಗೆ ಪ್ರಧಾನಿ ಮೋದಿ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಪಿಎಂ ಕಿಸಾನ್ ಯೋಜನೆಯಡಿ 18ನೇ ಕಂತಿನ 2000 ರೂಪಾಯಿ ಹಣವನ್ನು ಶನಿವಾರ ಬಿಡುಗಡೆ ಮಾಡಲಿದ್ದಾರೆ.

Kannada

ಪಿಎಂ ಕಿಸಾನ್ 18ನೇ ಕಂತು

ಪಿಎಂ ಕಿಸಾನ್ ಸಮ್ಮಾನ್ ನಿಧಿ (PM Kisan Samman Nidhi) ಯೋಜನೆಯ ಹಣವನ್ನು ವರ್ಗಾವಣೆ ಮಾಡಲಿದ್ದಾರೆ. ಒಂದು ವೇಳೇ ಅರ್ಹರಿದ್ದರೂ ಖಾತೆಗೆ ಹಣ ತಲುಪಿಲ್ಲವೆಂದರೆ ಚಿಂತಿಸಬೇಡಿ.

Kannada

ರೈತರಿಗೆ ಪ್ರತಿ ವರ್ಷ 6 ಸಾವಿರ ರೂ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪ್ರತಿ ವರ್ಷ ರೈತರಿಗೆ 6 ಸಾವಿರ ರೂಪಾಯಿ ನೀಡಲಾಗುತ್ತದೆ. ಪ್ರತಿ 4 ತಿಂಗಳಿಗೊಮ್ಮೆ 2-2 ಸಾವಿರ ಕಂತುಗಳನ್ನು ವರ್ಗಾಯಿಸಲಾಗುತ್ತದೆ. 

Kannada

ಪಿಎಂ ಕಿಸಾನ್‌ನಲ್ಲಿ ಎಷ್ಟು ರೈತರು ಹೆಚ್ಚಾಗಿದ್ದಾರೆ

ಜೂನ್ 2024 ರಲ್ಲಿ ಬಿಡುಗಡೆಯಾದ ಕಂತಿಗೆ ಹೋಲಿಸಿದರೆ ಈ ಬಾರಿ ಸುಮಾರು 25 ಲಕ್ಷಕ್ಕೂ ಹೆಚ್ಚು ರೈತರಿಗೆ ಇದರ ಪ್ರಯೋಜನ ಸಿಗಲಿದೆ. ಆದಾಗ್ಯೂ, ಕೆವೈಸಿ ಪೂರ್ಣಗೊಳ್ಳದ ಕಾರಣ ಹಲವು ರೈತರು ನಿರಾಶೆಗೊಳ್ಳಬೇಕಾಗುತ್ತದೆ.

Kannada

ಯಾವ ರೈತರಿಗೆ PM Kisan ಪ್ರಯೋಜನ ಸಿಗುತ್ತದೆ

ಪಿಎಂ ಕಿಸಾನ್ ಯೋಜನೆಯ ಪ್ರಯೋಜನಕ್ಕಾಗಿ ಮಾನದಂಡಗಳನ್ನು ನಿಗದಿಪಡಿಸಲಾಗಿದೆ. 2 ಹೆಕ್ಟೇರ್‌ವರೆಗೆ ಭೂಮಿ ಹೊಂದಿರುವ ರೈತರಿಗೆ ಮಾತ್ರ ಇದರ ಪ್ರಯೋಜನ ಸಿಗಲಿದೆ.

Kannada

PM Kisan ಅರ್ಹತೆಯನ್ನು ಹೇಗೆ ಪರಿಶೀಲಿಸುವುದು

ಪಿಎಂ ಕಿಸಾನ್ ವೆಬ್‌ಸೈಟ್‌ಗೆ ಹೋಗಿ ಫಲಾನುಭವಿ ಪಟ್ಟಿ ಲಿಂಕ್ ಮೇಲೆ ಕ್ಲಿಕ್ ಮಾಡಿ ಎಲ್ಲಾ ಮಾಹಿತಿ ನೀಡಿ ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಿ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಿ.

Kannada

ಪಿಎಂ ಕಿಸಾನ್ ಹಣ ಬಂದಿಲ್ಲದಿದ್ದರೆ ಏನು ಮಾಡಬೇಕು

ಅರ್ಹತೆ ಪೂರ್ಣಗೊಳಿಸಿದರೂ ಪಿಎಂ ಕಿಸಾನ್ ಹಣ ಬಂದಿಲ್ಲದಿದ್ದರೆ ಸರ್ಕಾರ ದೂರು ನೀಡಲು ಹಲವು ಆಯ್ಕೆಗಳನ್ನು ತಿಳಿಸಿದೆ. pmkisan-ict@gov.in ನಲ್ಲಿ ನೀವು ದೂರು ದಾಖಲಿಸಬಹುದು.

Kannada

ಪಿಎಂ ಕಿಸಾನ್‌ಗಾಗಿ ಸಹಾಯವಾಣಿ ಸಂಖ್ಯೆ

ನೀವು ಮೇಲ್ ಮಾಡಲು ಸಾಧ್ಯವಾಗದಿದ್ದರೆ, ನೀವು 155261 ಅಥವಾ 1800115526 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದು. ಇದಲ್ಲದೆ 011-23381092 ಗೆ ಸಹ ದೂರು ನೀಡಬಹುದು.

ಮಹಾತ್ಮ ಗಾಂಧೀಜಿಯ ಬಗ್ಗೆ ನೀವು ತಿಳಿದಿರದ 10 ಸಂಗತಿಗಳು ಇಲ್ಲಿವೆ!

'ನೀವು ನನ್ನಂತಾಗಬಾರದು, ನನಗಿಂತ ಉತ್ತಮರಾಗಬೇಕು'; ನಾರಾಯಣಮೂರ್ತಿ ಜೀವನ ಪಾಠ

ಆತ್ಮಹತ್ಯೆ ಪ್ರಕರಣಗಳಲ್ಲಿ ಮುಂಚೂಣಿಯಲ್ಲಿರುವ 6 ನಗರಗಳು ಇಲ್ಲಿವೆ

ಮುಂಬೈ ಯುವತಿಯನ್ನು ವರಿಸಿದ ಪಾಕ್ ಬಿಲಿಯನೇರ್: ವಯಸ್ಸಿನ ಅಂತರವೆಷ್ಟು ಗೊತ್ತಾ?