ಶಿವಭಕ್ತರ ನೆಚ್ಚಿನ ಕನ್ವರ್ಯಾತ್ರೆ ಈಗಾಗಲೇ ಆರಂಭವಾಗಿದೆ. ಕನ್ವರ್ಯಾತ್ರೆಯಲ್ಲಿ ಸಾಗುತ್ತಿರುವ ಶಿವ ಭಕ್ತರ ಫೋಟೋಗಳು ಇಲ್ಲಿವೆ.
ಜುಲೈ11 ಶುಕ್ರವಾರ ಕನ್ವರ್ಯಾತ್ರೆ ಆರಂಭವಾಗಿದೆ. ಪ್ರತಿ ವರ್ಷ ಶ್ರಾವಣ ಮಾಸದ ಮೊದಲ ದಿನ ಈ ಕನ್ವರ್ಯಾತ್ರೆ ಆರಂಭವಾಗುತ್ತದೆ.
ದೇಶದ ಮೂಲೆ ಮೂಲೆಯಿಂದ ಪಾದಯಾತ್ರೆಯಲ್ಲಿ ಬರುವ ಭಕ್ತರು ಗಂಗೆಯನ್ನು ತುಂಬಿಕೊಂಡು ಬಂದು ಶಿವನಿಗೆ ಅಭಿಷೇಕ ಮಾಡುತ್ತಾರೆ.
ಗಂಗೆಯನ್ನು ಬಿಂದಿಗೆಯಲ್ಲಿ ಹೊತ್ತು ತರುವ ಭಕ್ತರು ದೇಶದ ಪ್ರಮುಖ ಶಿವನ ಆಲಯಕ್ಕೆ ಭೇಟಿ ಕೊಟ್ಟು ಅಲ್ಲಿ ಶಿವನಿಗೆ ಗಂಗಾಭಿಷೇಕ ಮಾಡುತ್ತಾರೆ.
ಕನ್ವರಿಗಳು ಹರಿದ್ವಾರ, ಗೌಮುಖ, ಗಂಗೋತ್ರಿ ಮುಂತಾದ ಪವಿತ್ರ ಸ್ಥಳಗಳಿಂದ ಗಂಗೆಯನ್ನು ಬಿಂದಿಗೆಯಲ್ಲಿ ಹೊತ್ತು ತರುತ್ತಾರೆ.
ಹೀಗೆ ಬಿಂದಿಗೆ, ಕಳಸದಲ್ಲಿ ಗಂಗೆಯನ್ನು ತರುವ ಭಕ್ತರು ತಮ್ಮ ಊರಿನ ಹಾಗೂ ದೇಶದ ಪ್ರಮುಖ ಶಿವನ ದೇಗುಲಗಳಲ್ಲಿ ಶಿವನಿಗೆ ಗಂಗೆಯ ಅಭಿಷೇಕ ಮಾಡುತ್ತಾರೆ.
ದೇಶದ ರಾಜಧಾನಿಯ ರಸ್ತೆಯಲ್ಲಿ ಕನ್ವರ್ಯಾತ್ರೆ ಆರಂಭವಾದಾಗಿನಿಂದಲೂ ಪ್ರತಿದಿನ ಕನ್ವರ್ಯಾತ್ರಿಗಳು ಸಾಗುವುದನ್ನು ನೋಡಬಹುದಾಗಿದೆ.
ಈ ಯಾತ್ರೆಗೆ ಭಾರಿ ಬಿಗಿಭದ್ರತೆಯನ್ನು ಏರ್ಪಡಿಸಲಾಗಿದೆ. 5000 ಹೆಚ್ಚು ದೆಹಲಿ ಪೊಲೀಸರು ಹಾಗೂ ಅಷ್ಟೇ ಪ್ರಮಾಣದ ಪ್ಯಾರಾ ಮಿಲಿಟರಿ ಪಡೆಯನ್ನು ಭದ್ರತೆಗಾಗಿನಿಯೋಜಿಸಲಾಗಿದೆ.
ಕನ್ವರ್ಯಾತ್ರಿಗಳ ಸುಗಮ ಸಂಚಾರಕ್ಕಾಗಿ ಈ ಭಾರಿ ಪ್ರಮಾಣದ ಭದ್ರತೆಯನ್ನು ಏರ್ಪಡಿಸಲಾಗಿದೆ. ಡ್ರೋಣ್ಗಳನ್ನು ಕೂಡ ಭದ್ರತೆಗೆ ನಿಯೋಜಿಸಲಾಗಿದೆ.
ಉತ್ತರ ಭಾರತದಲ್ಲಿ ಈಗ ಶ್ರಾವಣ ಮಾಸವಾಗಿದ್ದು, ಇದು ಶಿವಭಕ್ತರಿಗೆ ಹಾಗೂ ಶಿವನಿಗೆ ಅತ್ಯಂತ ಪವಿತ್ರ ಮಾಸವಾಗಿದೆ.
ಈ ಯಾತ್ರೆಯೂ ಶ್ರಾವಣ ಮಾಸದ ಮೊದಲ ದಿನದಿಂದ ಆರಂಭವಾಗಿ ಶಿವರಾತ್ರಿಯಂದು ಕೊನೆಗೊಳ್ಳುತ್ತದೆ.
ಪ್ರತಿವರ್ಷವೂ ಈ ಕನ್ವರ್ಯಾತ್ರೆಯಲ್ಲಿ ಲಕ್ಷಾಂತರ ಜನ ಭಾಗವಹಿಸುತ್ತಾರೆ. ಇವರು ಬಹುತೇಕ ಪಾದಯಾತ್ರೆಯ ಮೂಲಕವೇ ಸಾಗುತ್ತಾರೆ.