Asianet Suvarna News Asianet Suvarna News

ಶಿವಮೊಗ್ಗದಲ್ಲಿ ಮುಸ್ಲಿಂ ಗೂಂಡಾಗಳು ಬಾಲ ಬಿಚ್ಚಿದ್ದಾರೆ, ನಾವು ಅವಕಾಶ ಕೊಡಲ್ಲ: ಈಶ್ವರಪ್ಪ

'ಶಿವಮೊಗ್ಗದಲ್ಲಿ ಮುಸಲ್ಮಾನ ಗೂಂಡಾಗಳು ಬಾಲ ಬಿಚ್ಚಿದ್ದಾರೆ. ಗೂಂಡಾಗಿರಿಗೆಲ್ಲಾ ನಾವು ಅವಕಾಶ ಕೊಡಲ್ಲ. ಭಗವಾ ಧ್ವಜ ಸಂಬಂಧಪಟ್ಟಂತೆ ಡಿಕೆಶಿ ಹೇಳಿಕೆಯಿಂದ ಗೂಂಡಾಗಳಿಗೆ ಕುಮ್ಮಕ್ಕು ಸಿಕ್ಕಿದೆ. ಇವರು ಶಿವಮೊಗ್ಗ ನಗರದವರೋ, ಹೊರಗಿನವರೋ ತನಿಖೆಯಿಂದ ಗೊತ್ತಾಗಬೇಕಿದೆ' ಎಂದು ಈಶ್ವರಪ್ಪ ಹೇಳಿದ್ದಾರೆ. 

First Published Feb 21, 2022, 1:33 PM IST | Last Updated Feb 21, 2022, 1:33 PM IST

ಶಿವಮೊಗ್ಗ (ಫೆ. 21): ಹಿಂದೂಪರ ಕಾರ್ಯಕರ್ತನೊಬ್ಬನನ್ನು (Right Wing Activist) ಅಪರಿಚಿತ ದುರ್ಷರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ತೀರ್ಥಹಳ್ಳಿ ರಸ್ತೆಯ ಭಾರತಿ ಕಾಲೋನಿಯಲ್ಲಿ ನಡೆದಿದೆ. ಘಟನೆಯಿಂದಾಗಿ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಎರಡು ಕಡೆ ಕಲ್ಲುತೂರಾಟ ನಡೆದು, ಕೆಲವು ವಾಹನಗಳಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಮುನ್ನೆಚ್ಚರಿಕಾ ಕ್ರಮವಾಗಿ ನಗರ ವ್ಯಾಪ್ತಿಯಲ್ಲಿ ಸೋಮವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ಈಗಾಗಲೇ ಜಾರಿಯಲ್ಲಿದ್ದ 144 ಸೆಕ್ಷನ್‌ ಅನ್ನು ಮತ್ತೆರಡು ದಿನ ವಿಸ್ತರಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

Right-Wing Activist Murder: ಹಂತಕರ ಸುಳಿವು ಸಿಕ್ಕಿದೆ, ಹೆಡೆಮುರಿ ಕಟ್ತೇವೆ: ಗೃಹ ಸಚಿವ

'ಶಿವಮೊಗ್ಗದಲ್ಲಿ ಮುಸಲ್ಮಾನ ಗೂಂಡಾಗಳು ಬಾಲ ಬಿಚ್ಚಿದ್ದಾರೆ. ಗೂಂಡಾಗಿರಿಗೆಲ್ಲಾ ನಾವು ಅವಕಾಶ ಕೊಡಲ್ಲ. ಭಗವಾ ಧ್ವಜ ಸಂಬಂಧಪಟ್ಟಂತೆ ಡಿಕೆಶಿ ಹೇಳಿಕೆಯಿಂದ ಗೂಂಡಾಗಳಿಗೆ ಕುಮ್ಮಕ್ಕು ಸಿಕ್ಕಿದೆ. ಇವರು ಶಿವಮೊಗ್ಗ ನಗರದವರೋ, ಹೊರಗಿನವರೋ ತನಿಖೆಯಿಂದ ಗೊತ್ತಾಗಬೇಕಿದೆ' ಎಂದು ಈಶ್ವರಪ್ಪ ಹೇಳಿದ್ದಾರೆ.