Asianet Suvarna News Asianet Suvarna News

Right-Wing Activist Murder: ಹಂತಕರ ಸುಳಿವು ಸಿಕ್ಕಿದೆ, ಹೆಡೆಮುರಿ ಕಟ್ತೇವೆ: ಗೃಹ ಸಚಿವ

'ಶಿವಮೊಗ್ಗದಲ್ಲಾದ (Shivamogga) ಹತ್ಯೆ ಸಂಬಂಧ ತನಿಖೆ ನಡೆಯುತ್ತಿದೆ. ಪೊಲೀಸ್ ಇಲಾಖೆಗೆ ಕೆಲವು ಸುಳಿವು ಸಿಕ್ಕಿದೆ. ಶೀಫ್ರದಲ್ಲೇ ಅಪರಾಧಿಗಳನ್ನು ಹೆಡೆಮುರಿ ಕಟ್ಟಿ ತರುತ್ತಾರೆ. ತಪ್ಪಿತಸ್ಥರನ್ನು ತಪ್ಪಿಸಿಕೊಳ್ಳಲು ಬಿಡುವುದಿಲ್ಲ' ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿದ್ದಾರೆ. 

First Published Feb 21, 2022, 1:13 PM IST | Last Updated Feb 21, 2022, 1:13 PM IST

ಬೆಂಗಳೂರು (ಫೆ. 21): ಹಿಂದೂಪರ ಕಾರ್ಯಕರ್ತನೊಬ್ಬನನ್ನು (Right Wing Activist) ಅಪರಿಚಿತ ದುರ್ಷರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ತೀರ್ಥಹಳ್ಳಿ ರಸ್ತೆಯ ಭಾರತಿ ಕಾಲೋನಿಯಲ್ಲಿ ನಡೆದಿದೆ. ಘಟನೆಯಿಂದಾಗಿ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಎರಡು ಕಡೆ ಕಲ್ಲುತೂರಾಟ ನಡೆದು, ಕೆಲವು ವಾಹನಗಳಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದ್ದಾರೆ. ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. 

Right- Wing Activist Murder: ಗೃಹ ಸಚಿವರ ವೈಫಲ್ಯ, ಪ್ರಿಯಾಂಕ ಖರ್ಗೆ ಆರೋಪ

'ಹತ್ಯೆ ಸಂಬಂಧ ತನಿಖೆ ನಡೆಯುತ್ತಿದೆ. ಪೊಲೀಸ್ ಇಲಾಖೆಗೆ ಕೆಲವು ಸುಳಿವು ಸಿಕ್ಕಿದೆ. ಶೀಫ್ರದಲ್ಲೇ ಅಪರಾಧಿಗಳನ್ನು ಹೆಡೆಮುರಿ ಕಟ್ಟಿ ತರುತ್ತಾರೆ. ತಪ್ಪಿತಸ್ಥರನ್ನು ತಪ್ಪಿಸಿಕೊಳ್ಳಲು ಬಿಡುವುದಿಲ್ಲ' ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿದ್ದಾರೆ.