Asianet Suvarna News Asianet Suvarna News

ಕೊರೋನಾ ಎಕ್ಸ್‌ಪ್ರೆಸ್: ಕಾರ್ಮಿಕರ ಪಾದಪೂಜೆ ಮಾಡಿದ ಭದ್ರಾವತಿಯ ಯುವಕ

ಕೊರೋನಾ ಭೀತಿಯ ನಡುವೆಯೂ ಕಟ್ಟಡ ಕೆಲಸ ಮಾಡುತ್ತಿರುವ ಕಾರ್ಮಿಕರ ಪಾದ ಪೂಜೆ ಮಾಡಿದ್ದಾನೆ ಭದ್ರಾವತಿ ಯುವಕ. ಈ ಯುವಕನ ನಡೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.  

ಬೆಂಗಳೂರು(ಏ.22): ಕೊರೋನಾ ಭೀತಿಯ ನಡುವೆಯೂ ಕಟ್ಟಡ ಕೆಲಸ ಮಾಡುತ್ತಿರುವ ಕಾರ್ಮಿಕರ ಪಾದ ಪೂಜೆ ಮಾಡಿದ್ದಾನೆ ಭದ್ರಾವತಿ ಯುವಕ. ಮೀನು ಮಾರಾಟದ ಹಣದಲ್ಲಿ ಕಾರ್ಮಿಕರ ಪಾದ ಪೂಜೆ ಮಾಡಿದ್ದಾನೆ ಭದ್ರಾವತಿಯ ಪ್ರಶಾಂತ್. ಭದ್ರಾವತಿಯ ಯುವಕನ ಕೆಲಸ ಇದೀಗ ಮೆಚ್ಚುಗೆಗೆ ಪಾತ್ರವಾಗಿದೆ. 

ಇನ್ನು ಹುಂಡಿಯಲ್ಲಿ ಕೂಡಿಟ್ಟ ಹಣವನ್ನು ಕೋಲಾರದ ಪುಟಾಣಿಯೊಬ್ಬಳು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಅರ್ಪಿಸಿದ್ದಾಳೆ. ಮೋದಿ ತಾತ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ, ಎಲ್ಲರು ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಜಿಲ್ಲಾಧಿಕಾರಿ ಬಾಲಕಿಯ ಕೆಲಸವನ್ನು ಶ್ಲಾಘಿಸಿದ್ದಾರೆ.

ಪಾದರಾಯನಪುರ ಗಲಭೆ: ಮತ್ತಷ್ಟು ಆರೋಪಿಗಳು ರಾಮನಗರ ಜೈಲಿಗೆ ಶಿಫ್ಟ್

ಕೊರೋನಾ ಎಕ್ಸ್‌ಪ್ರೆಸ್‌ನಲ್ಲಿ ಮತ್ತಷ್ಟು ಸುದ್ದಿಗಳು ಇಲ್ಲಿವೆ ನೋಡಿ. 

Video Top Stories