Asianet Suvarna News Asianet Suvarna News

ವ್ಯಾಕ್ಸಿನ್ ಪಡೆಯದ ಶೇ. 80 ರಷ್ಟು ಮಂದಿಗೆ ಸೋಂಕು ಅಟ್ಯಾಕ್!

ಕೊರೊನಾ ಲಸಿಕೆ ಪಡೆದುಕೊಳ್ಳಿ ಎಂದು ಸರ್ಕಾರ ಎಷ್ಟೇ ಜಾಗೃತಿ ಮೂಡಿಸಿದರೂ ಜನ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ವ್ಯಾಕ್ಸಿನ್ ಪಡೆಯದೇ ಇದ್ದವರೇ ಕೊರೋನಾಗೆ ಬಲಿಯಾಗುತ್ತಿದ್ದಾರೆ.

ಬೆಂಗಳೂರು (ಸೆ. 23): ಕೊರೊನಾ ಲಸಿಕೆ ಪಡೆದುಕೊಳ್ಳಿ ಎಂದು ಸರ್ಕಾರ ಎಷ್ಟೇ ಜಾಗೃತಿ ಮೂಡಿಸಿದರೂ ಜನ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ವ್ಯಾಕ್ಸಿನ್ ಪಡೆಯದೇ ಇದ್ದವರೇ ಕೊರೋನಾಗೆ ಬಲಿಯಾಗುತ್ತಿದ್ದಾರೆ. ವ್ಯಾಕ್ಸಿನ್ ಪಡೆಯದ ಶೇ. 80 ರಷ್ಟು ಮಂದಿಗೆ ಸೋಂಕು ತಗುಲುತ್ತಿದೆ. ಇನ್ನು ಐಸಿಯುಗೆ ದಾಖಲಾಗುವವರು, ಸಾವನ್ನಪ್ಪುತ್ತಿರುವವರು ಲಸಿಕೆ ಪಡೆಯದವರೇ ಹೆಚ್ಚು. ಬೆಂಗಳೂರಿನಲ್ಲಿ ಕಳೆದ 14 ದಿನಗಳಲ್ಲಿ 32 ಸೋಂಕಿತರು ಐಸಿಯುಗೆ ದಾಖಲಾಗಿದ್ದಾರೆ. ಅದರಲ್ಲಿ 25 ಮಂದಿ ಲಸಿಕೆಯನ್ನೇ ಪಡೆದಿಲ್ಲ. 

ತರಬೇತಿಗಾಗಿ ಬಂದಿದ್ದ ಮೇಘಾಲಯ ಯೋಧರಲ್ಲಿ 83 ಮಂದಿಗೆ ಕೊರೋನಾ ಸೋಂಕು ದೃಢ

Video Top Stories