Asianet Suvarna News Asianet Suvarna News

Puneeth Rajkumar:'ಪರಮಾತ್ಮ'ನ ಆರಾಧನೆಯಲ್ಲಿ ಕರುನಾಡು: 'ಅಪ್ಪು' ನೆನಪಿನಲ್ಲಿ ಅನ್ನಸಂತರ್ಪಣೆ

ಇಂದು ಅಪ್ಪು ಮೊದಲ ವರ್ಷದ ಪುಣ್ಯಸ್ಮರಣೆ ಹಿನ್ನೆಲೆ ಅನ್ನಸಂತರ್ಪಣೆ, ರಕ್ತದಾನ ಸೇರಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
 

ಇಂದು ಪುನೀತ್ ನಮ್ಮನ್ನು ಅಗಲಿ ಒಂದು ವರ್ಷ ಕಳೆದಿದೆ. ಇಡೀ ಕರ್ನಾಟಕವೇ ಅಪ್ಪು ಆರಾಧನೆಯಲ್ಲಿದೆ. ಅವರ ಸಮಾಧಿ ಬಳಿ ಫ್ಯಾನ್ಸ್‌ ಕಣ್ಣೀರಧಾರೆ ಹರಿಸುತ್ತಿದ್ದು, ಜೈಕಾರ ಹಾಕುತ್ತಿದ್ದಾರೆ. ಅಪ್ಪು ನೆನಪಿನಲ್ಲಿ ಅನ್ನಸಂತರ್ಪಣೆ ಹಾಗೂ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ 2 ಲಕ್ಷ ಜನರು  ಸೇರುವ ಸಾಧ್ಯತೆಯಿದ್ದು, ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಟೊಮೆಟೋ ಬಾತ್‌, ಕೇಸರಿ ಬಾತ್‌ ಮಾಡಲಾಗಿದ್ದು, ಬೆಳಗ್ಗೆ 9 ಗಂಟೆಯಿಂದ ರಾತ್ರಿ 6 ಗಂಟೆಯವರೆಗೆ ಅನ್ನಸಂತರ್ಪಣೆ ನಡೆಯಲಿದೆ.

Alia Bhatt ರಿವೀಲ್ ಆಯ್ತು ಆಲಿಯಾ ಡೆಲಿವರಿ ಡೇಟ್‌; ಈ ದಿನಾಂಕವೇ ಯಾಕೆ?