Asianet Suvarna News Asianet Suvarna News

ಚಿಕ್ಕಬಳ್ಳಾಪುರದಲ್ಲಿ ಹಬ್ಬ: ಮೂರು ದಶಕಗಳ ಬಳಿಕ ಒಲಿಯಿತು ಮಂತ್ರಿ ಭಾಗ್ಯ

ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಸುಧಾಕರ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರಕ್ಕೂ ಸಚಿವ ಸ್ಥಾನ ಸಿಗುತ್ತೆ ಎಂಬ ನಿರೀಕ್ಷೆ ಈಗ ಈಡೇರಿದೆ.  ಹೌದು ಚಿಕ್ಕಬಳ್ಳಾಪುರ ಕ್ಷೇತ್ರದಿಂದ 1985ರಲ್ಲಿ ಕೆ.ಎಂ. ಮನಿಯಪ್ಪಗೆ ಸಚಿವ ಸ್ಥಾನ ಸಿಕ್ಕ ಬಳಿಕ ಇದುವರೆಗೆ ಯಾರಿಗೂ ಸಚಿವ ಸ್ಥಾನ ಸಿಕ್ಕಿರಲಿಲ್ಲ

ಚಿಕ್ಕಬಳ್ಳಾಪುರ (ಫೆ.06): ರಾಜಧಾನಿ ಬೆಂಗಳೂರಿನ ಪಕ್ಕದಲ್ಲೇ ಇರೋ  ಈ ಕ್ಷೇತ್ರಕ್ಕೆ ಬರೋಬ್ಬರಿ 30 ವರ್ಷಗಳ ಬಳಿಕ ಸಚಿವ ಸ್ಥಾನ ಸಿಕ್ಕಿರೋದು ಕ್ಷೇತ್ರದ ಜನರಿಗೆ ಖುಷಿ ತಂದಿದೆ. ಒಂದೆಡೆ ಸಚಿವ ಸ್ಥಾನದ ಖುಷಿ,

ಇದನ್ನೂ ನೋಡಿ | ಕೈತಪ್ಪಿದ ಸಚಿವ ಸ್ಥಾನ, ಮುಂದಿನ ನಡೆ ಹೇಳಿದ ಮಹೇಶ್ ಕುಮಟಳ್ಳಿ...

ಮತ್ತೊಂದೆಡೆ ಜನರಿಗೆ ಕ್ಷೇತ್ರ ಹಾಗೂ ಜಿಲ್ಲೆಯಲ್ಲಿ  ಅಭಿವೃದ್ದಿ ಕೆಲಸಗಳು ಆಗುತ್ತೆ ಅನ್ನೋ ಸಂತಸ  ಜಿಲ್ಲೆಯ ಬಹುದಿನಗಳ ಬೇಡಿಕೆ ನೀರಾವರಿ ಸಮಸ್ಯೆ ಸೇರಿದಂತೆ ಅಭಿವೃದ್ದಿ ಕೆಲಸಗಳು ಆಗುತ್ತೆ ಅನ್ನೋ ಆಶಾಭಾವನೆ. 

Video Top Stories