Asianet Suvarna News Asianet Suvarna News

Sumalatha: ಮಂಡ್ಯ ಗೌಡ್ತಿ ನಡೆ ಏನು..? ಮೈತ್ರಿ ಅಭ್ಯರ್ಥಿಗೆ ಬೆಂಬಲವೋ ? ಸ್ವತಂತ್ರ ಸ್ಪರ್ಧೆಯೋ?

ರಣ ರಣ ಮಂಡ್ಯದಲ್ಲಿ ಇಂದು ಸುಮಲತಾ ರಾಜಕೀಯ ಭವಿಷ್ಯ
ಮಂಡ್ಯದಲ್ಲಿ ರಾಜಕೀಯ ನಿರ್ಧಾರ ಪ್ರಕಟಿಸಲಿರುವ ರೆಬೆಲ್ ಲೇಡಿ
ಪೂಜೆ ಬಳಿಕ ದೇಗುಲದ ಆವರಣದಲ್ಲೇ ನಿರ್ಧಾರ ಪ್ರಕಟ ಸಾಧ್ಯತೆ

ಬಿಜೆಪಿಗೆ ಬೆಂಬಲ ಕೊಟ್ಟ ಸಂಸದೆ ಸುಮಲತಾ(Sumalatha) ನಡೆ ಇವತ್ತು ನಿರ್ಧಾರವಾಗಲಿದೆ. ದೇಗುಲಕ್ಕೆ ಪೂಜೆ ಸಲ್ಲಿಸಿ ಬಳಿಕ ಮಂಡ್ಯದಲ್ಲಿ(Mandya) ಬಂಡಾಯ ಸ್ಪರ್ಧೆಯೋ..? ಮೈತ್ರಿ ಅಭ್ಯರ್ಥಿಗೆ ಬೆಂಬಲವೋ ಎಂಬ ನಿರ್ಧಾರ ಪ್ರಕಟಿಸಲಿದ್ದಾರೆ. ಇನ್ನು ರೆಬೆಲ್ ಲೇಡಿಗೆ ಅಭಿಷೇಕ್, ನಟ ದರ್ಶನ್ ಸಾಥ್ ನೀಡಲಿದ್ದಾರೆ. ಅಲ್ಲದೇ ಬಿಜೆಪಿ(BJP), ಜೆಡಿಎಸ್(JDS)  ನಾಯಕರಿಗೆ ಸಂದೇಶ ರವಾನೆ ಮಾಡೋ ಸಾಧ್ಯತೆ ಇದೆ. ನಿರ್ಧಾರ ಪ್ರಕಟಿಸುವ ಬಗ್ಗೆ ಫೇಸ್‌ಬುಕ್‌ನಲ್ಲಿ(Facebook Post) ಪೋಸ್ಟ್ ಹಾಕಿದ್ದು, ದರ್ಶನ್, ಅಭಿಷೇಕ್ ಸೇರಿ ಹಲವರು ಇರ್ತಾರೆ. ನನ್ನ ನಿರ್ಧಾರ ಹೇಳುವೆ ಎಂದು ಸಂಸದೆ ಸುಮಲತಾ ಪೋಸ್ಟ್‌ ಮಾಡಿದ್ದಾರೆ. ಸಂಸದೆಯಾಗಿ ಮಾಡಿರುವ ಕೆಲಸಗಳ ಬಗ್ಗೆ ಕಿರು ಚಿತ್ರ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಮಂಡ್ಯ ಜನರ ಬೆಂಬಲಕ್ಕೆ ಧನ್ಯವಾದ ಹೇಳಲಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ವೀಕ್ಷಿಸಿ:  Liquor Scam Case : ಸಂಜಯ್ ಸಿಂಗ್ ರಿಲೀಸ್.. ಕೇಜ್ರಿವಾಲ್ ಲಾಕ್: ಎಲೆಕ್ಷನ್ ಮುಗಿಯೋ ವರೆಗೂ ಸಿಎಂ, ಡಿಸಿಎಂಗೆ ಜೈಲಾ..?

Video Top Stories