Asianet Suvarna News Asianet Suvarna News

Winter Session: ಸದನದಲ್ಲಿ ಸಾವರ್ಕರ್‌ ಫೋಟೋ ಹಾಕಿದ್ದು ತಪ್ಪು: ಡಿ.ಕೆ ಶಿವಕುಮಾರ್ ಕಿಡಿ

ಬೆಳಗಾವಿಯ ಸುವರ್ಣಸೌಧ ಅಸೆಂಬ್ಲಿ ಹಾಲ್'ನಲ್ಲಿ ಸಾವರ್ಕರ್ ಫೋಟೋ ಹಾಕಿದ್ದನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಖಂಡಿಸಿದ್ದಾರೆ.

ಸದನದಲ್ಲಿ ಸಾವರ್ಕರ್‌ ಫೋಟೋ ಅಳವಡಿಕೆಗೆ ಡಿಕೆಶಿ ವಿರೋಧ ವ್ಯಕ್ತಪಡಿಸಿದ್ದು, ವೀರ  ಸಾವರ್ಕರ್‌ ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಎಂದು ಬೆಳಗಾವಿಯಲ್ಲಿ ಕಿಡಿ ಕಾರಿದ್ದಾರೆ. ಸಾವರ್ಕರ್‌ ಬ್ರಿಟಿಷರಿಗೆ ಕ್ಷಮೆ ಕೇಳಿದವರು, ಅಂಚೆ ಚೀಟಿ ಬಿಡುಗಡೆ ಮಾಡಿದ್ದು ಇವರೊಬ್ಬರದ್ದೇ ಅಲ್ಲ. ಸದನದ ಒಳಗೂ ಪ್ರತಿಭಟನೆ ಮಾಡುತ್ತೇವೆ  ಸಾವರ್ಕರ್‌ ಫೋಟೋ ಹಾಕಿದ್ದು ತಪ್ಪು. ಗಾಂಧಿಜೀ ಫೋಟೋ ಅನಾವರಣಕ್ಕೆ ಆಹ್ವಾನ ನೀಡಿ, ಸಾವರ್ಕರ್‌ ಫೋಟೋ ಲೋಕಾರ್ಪಣೆ ಮಾಡಲಾಗಿದೆ ಎಂದು ಆರೋಪ ಮಾಡಿದ್ದಾರೆ.

ಕೇಂದ್ರ ಸರ್ಕಾರದ ಗುಜರಿ ನೀತಿಯ ವಿರುದ್ಧ ಲಾರಿ ಮಾಲೀಕರ ಆಕ್ರೋಶ