Asianet Suvarna News Asianet Suvarna News

ಸಿದ್ದರಾಮಯ್ಯರನ್ನು ಜನ ಸೋಲಿಸಿದ ಅಸಲಿ ಗುಟ್ಟು ತಿಳಿಸಿದ ಸಿಟಿ ರವಿ

ಸಿದ್ದರಾಮಯ್ಯ ಮೇಲೆ ಸಿಟಿ ರವಿ ವಾಗ್ದಾಳಿ/ ಯಾವ ಸರ್ಕಾರ ಏನು ಮಾಡಿದೆ ಎನ್ನುವುದು  ಜನರಿಗೆ ಗೊತ್ತು/ ರಾಮಮಂದಿರ ನಿರ್ಮಾಣ ಮಾಡಿದ್ದು ಸುಳ್ಳಾ?/ ನಿಮ್ಮ ಸರ್ಕಾರ ಲೋಕಾಯುಕ್ತವನ್ನೇ ಮುಗಿಸಿತ್ತು

ಚಿಕ್ಕಮಗಳೂರು( ಏ. 08)  ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ  ವಿಪಕ್ಷ ನಾಯಕ ಸಿದ್ದರಾಮಯ್ಯ ಮೇಲೆ ವಾಕ್ ಪ್ರಹಾರ ಮಾಡಿದ್ದಾರೆ. ಯಾವುದು ಕೆಟ್ಟ ಆಡಳಿತ ಎಂಬುದನ್ನು ಮೊದಲು ತಿಳಿದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

'ಮುಜುಗರ ತರುವ ಕೆಲಸಗಳು ಆಗುತ್ತಿದ್ದು ಎಲ್ಲದಕ್ಕೂ ಉತ್ತರ ಸಿಗುತ್ತದೆ'

ಕೊರೋನಾ ಕಾಲದಲ್ಲಿ ಎಲ್ಲರಿಗೂ ಲಸಿಕೆ ನೀಡಲು ಮುಂದಾಗಿದ್ದು ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ? ಲೋಕಾಯುಕ್ತಕ್ಕೆ ಕೊನೆ ಮೊಳೆ ಹೊಡೆದ ನಿಮ್ಮ ಸರ್ಕಾರ ಮಾಡಿದ್ದು ಏನು ಎಂಬುದು ಜನರಿಗೆ ಗೊತ್ತಿದೆ ಎಂದಿದ್ದಾರೆ. 

 

Video Top Stories