Asianet Suvarna News Asianet Suvarna News

ರಾಜ್ಯದಲ್ಲೀಗ ಆತ್ಮಕಥೆಗಳ ಸುಗ್ಗಿಕಾಲ: 3 ನಾಯಕರ ಜೀವನ ಚರಿತ್ರೆಯಲ್ಲಿ ದಶಕಗಳ ರಾಜಕೀಯ ಸೀಕ್ರೆಟ್

ರಾಜ್ಯದಲ್ಲೀಗ ಆತ್ಮಕಥೆಗಳ ಸುಗ್ಗಿಕಾಲ, ರಾಜಕೀಯ ನಾಯಕರ ಬದುಕಿನ ಕಥೆಗಳು ಒಬ್ಬರಾದ ಮೇಲೊಬ್ಬರಂತೆ ಬಿಡುಗಡೆಗೆ ಸಿದ್ಧವಾಗಿವೆ. ಜನವರಿ ತಿಂಗಳಿನಲ್ಲೇ ಎಸ್ಎಂ ಕೃಷ್ಣ, ಎಚ್.ಡಿ ದೇವೇಗೌಡ ಇಬ್ಬರ ಕುರಿತಾದ ಪುಸ್ತಕಗಳು ಹೊರ ಬರಲು ಸಜ್ಜಾಗಿವೆ. ಈ ಆತ್ಮಕಥೆ, ಜೀವನ ಚರಿತ್ರೆ ಬಿಡುಗಡೆಯಾಗಿ ತಿಂಗಳು ಕಳೆಯುವ ಹೊತ್ತಿಗೆ, ಸಿಎಂ ಯಡಿಯೂರಪ್ಪರ ಜೀವನ ಚರಿತ್ರೆ ಸಿದ್ಧವಾಗ್ತಿದೆ. 

ಬೆಂಗಳೂರು, [ಡಿ.26]: ರಾಜ್ಯದಲ್ಲೀಗ ಆತ್ಮಕಥೆಗಳ ಸುಗ್ಗಿಕಾಲ, ರಾಜಕೀಯ ನಾಯಕರ ಬದುಕಿನ ಕಥೆಗಳು ಒಬ್ಬರಾದ ಮೇಲೊಬ್ಬರಂತೆ ಬಿಡುಗಡೆಗೆ ಸಿದ್ಧವಾಗಿವೆ. ಜನವರಿ ತಿಂಗಳಿನಲ್ಲೇ ಎಸ್ಎಂ ಕೃಷ್ಣ, ಎಚ್.ಡಿ ದೇವೇಗೌಡ ಇಬ್ಬರ ಕುರಿತಾದ ಪುಸ್ತಕಗಳು ಹೊರ ಬರಲು ಸಜ್ಜಾಗಿವೆ.

ಈ ಆತ್ಮಕಥೆ, ಜೀವನ ಚರಿತ್ರೆ ಬಿಡುಗಡೆಯಾಗಿ ತಿಂಗಳು ಕಳೆಯುವ ಹೊತ್ತಿಗೆ, ಸಿಎಂ ಯಡಿಯೂರಪ್ಪರ ಜೀವನ ಚರಿತ್ರೆ ಸಿದ್ಧವಾಗ್ತಿದೆ. ದಿಗ್ಗಜರ ಜೀವನ ಚರಿತ್ರೆಗಳು ಪ್ರಕಟಣೆ ಆಗುತ್ತಿದ್ದಂತೆಯೇ ಅವರ ರಾಜಕೀಯ ಆಟೋಟಗಳು ಹೇಗಿದ್ದವು..? ಯಾರು ಹೇಗೆಲ್ಲ ರಾಜಕೀಯ ಮಾಡಿದ್ರು ಎನ್ನವು ರಾಜಕೀಯ ಸಂಗತಿಗಳು ಬಯಲಾಗಲಿವೆ.

ಮೋಟಮ್ಮ ಮದ್ವೆಯಲ್ಲಿ ದಿಗ್ಗಜರ ಜೂಟಾಟ: SM ಕೃಷ್ಣ ಚರಿತ್ರೆಯಲ್ಲಿ ರಾಜಕೀಯ ರಹಸ್ಯ ಸ್ಫೋಟ 

Video Top Stories