Asianet Suvarna News Asianet Suvarna News

Renukaswamy murder case: ಪೊಲೀಸ್ ಹುಡುಕುತ್ತಿರೋ ಸಾಕ್ಷಿ ಅದೇನಾ ? 24 ಗಂಟೆಗಳಲ್ಲಿ ಪೊಲೀಸರಿಗೆ ಸಿಗುತ್ತಾ ಆ ಸ್ಫೋಟಕ ಸಾಕ್ಷಿ?

"ಬಾಸ್" ಎನ್ನುತ್ತಿದ್ದ ಅಭಿಮಾನಿಗಳಿಂದಲೇ ಕುಕೃತ್ಯ ಮಾಡಿಸಿದ ಕುಖ್ಯಾತ ನಟ..!
ತಾನು ಬಚಾವಾಗಲು ಅಭಿಮಾನಿಗಳನ್ನೇ ಜೈಲಿಗೆ  ಕಳುಹಿಸಿದ ನಟ ಭಯಂಕರ..!
ಖಳನಾಯಕನ ಪಾಪ ಕೃತ್ಯಕ್ಕೆ ಅಸ್ತ್ರವೂ ನಟ ದರ್ಶನ್‌, ಗುರಾಣಿಯೂ ಅವರೇ..!

First Published Jun 22, 2024, 5:11 PM IST | Last Updated Jun 22, 2024, 5:31 PM IST

ಪರಪ್ಪನ ಅಗ್ರಹಾರದಲ್ಲಿ ಪವಿತ್ರಾ ಗೌಡ(Pavitra gowda) ಇದ್ರೆ, ಪೊಲೀಸ್ ಕಸ್ಟಡಿಯಲ್ಲಿ(Police custody) ದರ್ಶನ್. 13 ಮಂದಿಗೆ ಜೈಲು, 4 ಮಂದಿಗೆ ಪೊಲೀಸ್ ಕಸ್ಟಡಿಯ ಶಾಕ್. ರೇಣುಕಾಸ್ವಾಮಿ ಮರ್ಡರ್ ಪ್ರಕರಣದಲ್ಲಿ(Renukaswamy murder case) ನಟ ದರ್ಶನ್(Darshan) ಮತ್ತವನ ಕ್ರೂರ ಗ್ಯಾಂಗ್‌ನ ಕಿರಾತಕರನ್ನೆಲ್ಲಾ ನಮ್ಮ ಗಂಡೆದೆಯ ಪೊಲೀಸರು ಬೇಟೆಯಾಡಿಯಾಗಿದೆ. ರೇಣುಕಾಸ್ವಾಮಿಗೆ ಚಿತ್ರಹಿಂಸೆ ಕೊಟ್ಟು ಕೊಂದಿರೋ 17 ಮಂದಿ ಅಂದರ್ ಆಗಿದ್ದಾರೆ. ಕೊಲೆಗಡುಕರಿಗೆ ಕಠಿಣ ಶಿಕ್ಷೆ ಕೊಡಿಸಲೇಬೇಕು ಅಂತ ಟೊಂಕ ಕಟ್ಟಿ ನಿಂತಿರೋ ಪೊಲೀಸರು, ಒಂದೊಂದೇ ಸಾಕ್ಷಿಗಳನ್ನು ಕಲೆ ಹಾಕಿದ್ದಾರೆ. ಈ ಮಧ್ಯೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳ ಕಸ್ಟಡಿ ಅವಧಿ ಮುಗಿದಿದ್ದಿರಂದ, ಕಿರಾತಕರನ್ನೆಲ್ಲಾ ಗುರುವಾರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಸೇರಿದಂತೆ 6 ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಎ2 ಆರೋಪಿ ದರ್ಶನ್ ಸಹಿತ ನಾಲ್ವರನ್ನು ಮತ್ತೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಮೂಲಗಳ ಪ್ರಕಾರ ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ಇಲ್ಲಿವರೆಗೆ ಸಿಕ್ಕಿರೋ ಸಾಕ್ಷಿಗಳ ಸಂಖ್ಯೆ 139. ಇದ್ರಲ್ಲಿ ಆರೋಪಿಗಳು ನೀಡಿರೋ ಹೇಳಿಕೆಗಳು, ಸ್ಥಳ ಮಹಜರು ವೇಳೆ ಸಿಕ್ಕಿರೋ ಸಾಕ್ಷಿಗಳು, ಸಾಂದರ್ಭಿಕ ಸಾಕ್ಷಿಗಳು, ಡಿಜಿಟಲ್ ಎವಿಡೆನ್ಸ್, ಟೆಕ್ನಿಕಲ್ ಎವಿಡೆನ್ಸ್ ಎಲ್ಲಾ ಸೇರಿವೆ. ಹತ್ತಾರು ಆಯಾಮಗಳಲ್ಲಿ ವಿಚಾರಣೆ ನಡೆದಿದೆ, ತನಿಖೆ ಮುಂದುವರಿದಿದೆ.

ಇದನ್ನೂ ವೀಕ್ಷಿಸಿ:  ಬರ್ಬರ ಹತ್ಯೆಯ ಕೇಸ್ ಕ್ಲೋಸ್ ಮಾಡ್ಸೋ ಪ್ಲ್ಯಾನ್ ಇತ್ತಾ..? ಅಭಿಮಾನಿಗಳೇ ಆರೋಪಿಗಳು..ಫ್ಯಾನ್ಸ್‌ಗೆ ಇದೇನಾ ಸಂದೇಶ?