Asianet Suvarna News Asianet Suvarna News

ಬೆಳಗಾವಿ;  ಚಳಿ-ಮಳೆ ಕೇಳುವರಿಲ್ಲ.. ಬಸ್‌ ಸ್ಟಾಪೇ ಅಜ್ಜಿಯ 'ಅರಮನೆ'!

* ಪ್ರವಾಹದ ಹೊಡೆತಕ್ಕೆ ಬಸ್ ನಿಲ್ದಾಣಕ್ಕೆ ಬಂದು ನಿಂತ ಬದುಕು
* ಪ್ರವಾಹದಿಂದ ಬದುಕು ಕಳೆದುಕೊಂಡ ಅಜ್ಜಿಯ ಕರುಣಾಜನಕ ಕಥೆ
* ಇಳಿವಯಸ್ಸಲ್ಲಿ ಇದೆಂಥ ಬದುಕು ಎಂದು ಕಣ್ಣೀರಿಟ್ಟ ಅಜ್ಜಿ...
* ಪ್ರವಾಹದಲ್ಲಿ ಸಿಲುಕಿದ್ದವಳನ್ನ 500ರು ತಗೊಂಡು ಇಲ್ಲಿ ತಂದು ಬಿಟ್ಟಿದ್ದಾರೆ ಎಂದು ಅಜ್ಜಿ ಗೋಳಾಟ

ಬೆಳಗಾವಿ/ಅಥಣಿ(ಜು.  29)  ಮಳೆ ಕಡಿಮೆಯಾಗಿದ್ದರೂ ಪ್ರವಾಹ ಇಳಿದಿಲ್ಲ. ಅದರ ಜತೆಗೆ ಬಂದ ಸಂಕಷ್ಟಗಳು ಕೊನೆಯಾಗಿಲ್ಲ. ಪ್ರವಾಹದ ಹೊಡೆತಕ್ಕೆ ಬಸ್ ನಿಲ್ದಾಣಕ್ಕೆ ಬದುಕು ಬಂದು ನಿಂತಿದೆ.   ಪ್ರವಾಹದಿಂದ ಬದುಕು ಕಳೆದುಕೊಂಡ ಅಜ್ಜಿಯ ಕರುಣಾಜನಕ ಕಥೆ ಇದು.

ಧಾರಾಕಾರ ಮಳೆಗೆ ಕೊಚ್ಚಿ ಹೋದ ಬೆಳಗಾವಿ

ಚಳಿಯಾಗ್ತಿದೆ, ಮುಂದೆ ಏನು ಮಾಡಬೇಕು ಎನ್ನುವುದು ತೋಚದಾಗಿದೆ ಎನ್ನುವ ಅಜ್ಜಿಗೆ ಸತ್ತಿ ಗ್ರಾಮದ ಬಳಿಯ ಜೀರೋ ಪಾಯಿಂಟ್ ಬಸ್ ನಿಲ್ದಾಣವೇ  ಮನೆಯಾಗಿದೆ. ಕಾಳು-ಕಡಿ ಎಮ್ಮೆ, ದನ ಕರುಗಳ ಸಮೇತ ಬಸ್ ನಿಲ್ದಾಣದಲ್ಲೆ ವೃದ್ಧೆ ವಾಸಮಾಡುತ್ತಿದ್ದಾರೆ. ತಾಲೂಕು ಆಡಳಿತದ ಮೇಲೆ ಅಜ್ಜಿ ಹಿಡಿಶಾಪ ಹಾಕಿದ್ದಾರೆ.  

Video Top Stories