Asianet Suvarna News Asianet Suvarna News

Covid-19 Crisis: ಬಳ್ಳಾರಿಗೆ ಬಂದ ಹರಿಯಾಣದ ವಿದ್ಯಾರ್ಥಿಗಳು: ಕೊರೋನಾ ಸ್ಫೋಟ ಭೀತಿ..!

*  ನರ್ಸಿಂಗ್‌ ವಿದ್ಯಾರ್ಥಿಗಳಿಂದ ಹೆಚ್ಚಾದ ಆತಂಕ
*  RTPCR ರಿಪೋರ್ಟ್‌ ಇಲ್ಲದೆ ಬಳ್ಳಾರಿಗೆ ಬಂದ ವಿದ್ಯಾರ್ಥಿಗಳು
*  ಬಳ್ಳಾರಿ ಜಿಲ್ಲೆಗೆ ಕಂಟಕವಾದ ಹೊರರಾಜ್ಯದ ವಿದ್ಯಾರ್ಥಿಗಳು

First Published Jan 16, 2022, 12:59 PM IST | Last Updated Jan 16, 2022, 12:59 PM IST

ಬಳ್ಳಾರಿ(ಜ.15): ಬಳ್ಳಾರಿ ಜಿಲ್ಲೆಗೆ ಕಂಟಕವಾಗಿದ್ದಾರೆ ಹೊರರಾಜ್ಯದ ವಿದ್ಯಾರ್ಥಿಗಳು. ಹೌದು, ಹೊರರಾಜ್ಯದ ವಿದ್ಯಾರ್ಥಿಗಳಿಂದ ಜಿಲ್ಲೆಯಲ್ಲಿ ಕೊರೋನಾ ಆತಂಕ ಎದುರಾಗಿದೆ. ಹರಿಯಾಣ ಮೂಲದ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಳ್ಳಾರಿಗೆ ಆಗಮಿಸಿದ್ದಾರೆ. ಇವರಿಂದ ಜಿಲ್ಲೆಯಲ್ಲಿ ಕೊರೋನಾ ಸ್ಫೋಟಗೊಳ್ಳುವ ಭೀತಿ ಎದುರಾಗಿದೆ. RTPCR ವರದಿ ಇಲ್ಲದೆ ಹರಿಯಾಣದಿಂದ ಸುಮಾರು 100 ನರ್ಸಿಂಗ್‌ ವಿದ್ಯಾರ್ಥಿಗಳು ಬಳ್ಳಾರಿಗೆ ಬಂದಿದ್ದಾರೆ. ಶಬರೇಶ್ವರ ಕಾಲೇಜಿನ ಹೆಸರು ಹೇಳಿಕೊಂಡು ನಗರಕ್ಕೆ ಆಗಮಿಸಿದ್ದಾರೆ. ಈ ವಿದ್ಯಾರ್ಥಿಗಳಿಂದ ನಗರದಲ್ಲಿ ಕೊರೋನಾತಂಕ ಮತ್ತಷ್ಟು ಹೆಚ್ಚಾಗಿದೆ.  

Curfew Effects On Artists: ಕರ್ಫ್ಯೂನಿಂದ ಹೊಟ್ಟೆಗೆ ಬರೆ, ಕಣ್ಣೀರಿಟ್ಟ ಕಲಾವಿದರು