Asianet Suvarna News Asianet Suvarna News

ಸಿಎಂ ಸ್ವಕ್ಷೇತ್ರದಲ್ಲಿ ನೋಡಲಾರದ ಅನಾಚಾರ: ಸರ್ಕಾರಿ ನೌಕರರಿಂದ ಅರೆಬೆತ್ತಲೆ ಡ್ಯಾನ್ಸ್‌..!

ಕರ್ತವ್ಯದ ವೇಳೆ ಸರ್ಕಾರಿ ನೌಕರರು ಮದ್ಯಪಾನ| ಸಾರ್ವಜನಿಕ ಸ್ಥಳದಲ್ಲಿ ಅರೆಬೆತ್ತಲೆ ನೃತ್ಯ| ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಂಜನಾಪುರ ಜಲಾಶಯದ ಬಳಿ ನಡೆದ ಘಟನೆ| ಕಂಠಪೂರ್ತಿ ಕುಡಿದು ಬೈಕ್‌ ಸ್ಟಂಟ್‌ ಮಾಡಿದ ಮೆಸ್ಕಾಂ ನೌಕರರು| 

ಶಿವಮೊಗ್ಗ(ನ.08): ಕರ್ತವ್ಯದ ವೇಳೆ ಸರ್ಕಾರಿ ನೌಕರರು ಮದ್ಯಪಾನ ಮಾಡಿ ಸಾರ್ವಜನಿಕ ಸ್ಥಳದಲ್ಲಿ ಅರೆಬೆತ್ತಲೆಯಾಗಿ ನಗ್ನತೆ ಪ್ರದರ್ಶನ ಮಾಡಿದ ಘಟನೆ ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಂಜನಾಪುರ ಜಲಾಶಯದ ಬಳಿ ನಡೆದಿದೆ. ಕುಡಿದ ಅಮಲಿನಲ್ಲಿ ಮೆಸ್ಕಾಂ ನೌಕರರು ಕುಣಿದು ಕುಪ್ಪಳಿಸಿದ್ದಾರೆ.

ಬಿಜೆಪಿ ಮುಖಂಡ ಹತ್ಯೆ: ಸಿಬಿಐ ತನಿಖೆಯಲ್ಲೂ ಸಾಬೀತಾಯ್ತು ಸುವರ್ಣ ನ್ಯೂಸ್ ಕೊಟ್ಟ ಸಾಕ್ಷ್ಯಿಗಳು

ಚಂದ್ರಶೇಖರ್‌ ರಾಥೋಡ್‌, ವಿನಯ್‌ ಕುಮಾರ್‌, ರವಿ, ಸುರೇಶ, ಮಂಜುನಾಥ್‌, ಮಹೇಶ್ವರಪ್ಪ ಎಂಬುವರು ಕಂಠಪೂರ್ತಿ ಕುಡಿದು ಬೈಕ್‌ ಸ್ಟಂಟ್‌ ಮಾಡಿದ್ದಲ್ಲದೆ ಸಾರ್ವಜನಿಕರ ಸ್ಥಳದಲ್ಲಿ ಅರೆಬೆತ್ತಲೆಯಾಗಿ ನೃತ್ಯ ಮಾಡುವ ಮೂಲಕ ಅಸಭ್ಯವಾಗಿ ವರ್ತಿಸಿದ್ದಾರೆ.