
ದೇವಿರಮ್ಮ ದರ್ಶನಕ್ಕೆ ಹರಿದು ಬಂದ ಭಕ್ತಸಾಗರ: ಅಪ್ಪು ಫೋಟೋ ಹಿಡಿದು ಸಾಗಿದ ಅಭಿಮಾನಿಗಳು
ದೇವಿರಮ್ಮ ದರ್ಶನಕ್ಕೆ ಭಕ್ತರ ನೂಕು-ನುಗ್ಗಲು ಉಂಟಾಗುತ್ತಿದ್ದು, ಪುನೀತ್ ಫೋಟೋ ಹಿಡಿದು ಅಭಿಮಾನಿಗಳು ಬೆಟ್ಟ ಹತ್ತುತ್ತಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮಲ್ಲೇನಹಳ್ಳಿಯಲ್ಲಿರುವ ಬಿಂಡಿಗ ದೇವಿರಮ್ಮನ ದರ್ಶನಕ್ಕೆ ಜನಸಾಗರವೇ ಹರಿದು ಬರುತ್ತಿದ್ದು, ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಫೋಟೊ ಹಿಡಿದು ಅಭಿಮಾನಿಗಳು ಬೆಟ್ಟ ಏರುತ್ತಿದ್ದಾರೆ. ದುರ್ಗಮ ಹಾದಿಯಲ್ಲಿ ಬರಿಗಾಲಿನಲ್ಲಿ ಭಕ್ತರು ಬೆಟ್ಟ ಹತ್ತುತ್ತಿದ್ದು, ರಾತ್ರಿಯಿಂದ ಬೆಟ್ಟ ಹತ್ತಿ ಭಕ್ತರು ದೇವಿರಮ್ಮನ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.
Add Asianetnews Kannada as a Preferred Source
