Asianet Suvarna News Asianet Suvarna News

ಹಳೇ ರಾಮಲಲ್ಲಾ ಏನಾಯ್ತು ? ಹೊಸ ಮೂರ್ತಿಗೆ ಶಂಕರಾಚಾರ್ಯ ಪೀಠ ತಗಾದೆ !

ಹೊಸ ರಾಮಲಲ್ಲಾ ಮೂರ್ತಿಗೆ ಜ್ಯೋತಿರ್‌ ಮಠದ ಅವಿಮುಕ್ತೇಶ್ವರಾನಂದ ಸ್ವಾಮೀಜಿ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. 
 

ಉತ್ತರಾಖಂಡದ ಜ್ಯೋತಿರ್‌ ಮಠದ ಅಮಿಮುಕ್ತೇಶ್ವರಾನಂದ ಸ್ವಾಮೀಜಿ ಹೊಸ ರಾಮಲಲ್ಲಾ ಮೂರ್ತಿ(Ramalalla) ಪ್ರಾಣ ಪ್ರತಿಷ್ಠಾಪನೆಗೆ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಟ್ರಕ್‌ ಮೂಲಕ ಹೊಸ ಮೂರ್ತಿ ತಂದ ದೃಶ್ಯವನ್ನು ನೋಡಿದೆ. ಹೊಸ ಮೂರ್ತಿಯನ್ನು ಸ್ಥಾಪನೆ ಯಾಕೆ ಮಾಡುತ್ತಿದ್ದೀರಿ ಹಳೆಯ ರಾಮಲಲ್ಲಾ ಮೂರ್ತಿ ಏನಾಯ್ತು ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಈ ಬಗ್ಗೆ ಪತ್ರ ಬರೆದು ಅಮಿಮುಕ್ತೇಶ್ವರಾನಂದ ಸ್ವಾಮೀಜಿ(Avimukteswarananda Swamiji) ಪ್ರಶ್ನಿಸಿದ್ದಾರೆ. ಕಾರ್ಯಕ್ರಮದಲ್ಲಿ ಹಿಂದೂ ಧರ್ಮದ ಪದ್ಧತಿಗಳನ್ನು ಪಾಲಿಸುತ್ತಿಲ್ಲ. ಹೀಗಾಗಿ ಶಂಕರಾಚಾರ್ಯರು ಇದರಲ್ಲಿ ಭಾಗವಹಿಸುವುದಿಲ್ಲ. ಆದರೆ ಯಾರ ವಿರುದ್ಧವೂ ತಮ್ಮಲ್ಲಿ ಅಸಮಾಧಾನ ಇಲ್ಲ ಎಂದಿದ್ದಾರೆ.

ಇದನ್ನೂ ವೀಕ್ಷಿಸಿ: ಅಯೋಧ್ಯೆ ರಾಮನಿಗಾಗಿ 1ಕೆಜಿ ಚಿನ್ನ ತಂದ ಅಮೆರಿಕದ ಭಕ್ತ ಉಮಾಶಂಕರ್ !

Video Top Stories