Asianet Suvarna News Asianet Suvarna News

ಆಕಾಶ್ ಆಸ್ಪತ್ರೆ ನೆರವಿನಲ್ಲಿ ಕೊರೋನಾ ಗೆದ್ದ  9 ಹಿರಿಯರು

* ಕೊರೊನಾ ಗೆದ್ದ 9 ಮಂದಿ ವೃದ್ಧರು.
* ದೇವನಹಳ್ಳಿ ಆಕಾಶ್ ಆಸ್ಪತ್ರೆಯಲ್ಲಿ  ಕೋವಿಡ್ ನಿಂದ ಗುಣಮುಖರಾದ  ವಯೋವೃದ್ದರು. 
* ಕಳೆದ 15 ದಿನಗಳಿಂದ ಆಕಾಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ದರು.. 
* ವೃದ್ದರೆಲ್ಲರು ಹೆಸರುಟ್ಟ ಬಳಿಯ ಕರ್ನಾಟಕ ಹನಸೇವಾ ವೃದ್ದಾಶ್ರಮಕ್ಕೆ ಸೇರಿದವರು. 

ದೇವನಹಳ್ಳಿ (ಜು. 22) ಇಳಿ ವಯಸ್ಸಿನಲ್ಲಿ ಆ ಜೀವಗಳು ವೃದ್ಧಾಶ್ರಮದ ಆಶ್ರಯ ಪಡೆದುಕೊಂಡಿದ್ದರು. ಆದರೆ ಕೊರೋನಾ ಎಂಬ ಮಹಾಮಾರಿ ಅವರನ್ನು ಅಂಟಿಕೊಂಡಿತ್ತು. ಇದೀಗ ಕೊರೋನಾ ಗೆದ್ದು ಪುನರ್ ಜನ್ಮ ಪಡೆದುಕೊಂಡಿದ್ದಾರೆ.

ಮೂರನೇ ಅಲೆಗೂ ಮುನ್ನ ಎಚ್ಚರಿಕೆ

ದೇವನಹಳ್ಳಿ ಆಕಾಶ್ ಆಸ್ಪತ್ರೆಯಲ್ಲಿ 9 ಮಂದಿ ವೃದ್ಧರು ಕೊರೋನಾ ಗೆದ್ದಿದ್ದಾರೆ. ಕಳೆದ 15 ದಿನಗಳಿಂದ ಆಕಾಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ದರು ಚೇತರಿಸಿಕೊಂಡಿದ್ದಾರೆ. ವೃದ್ದರೆಲ್ಲರು ಹೆಸರುಘಟ್ಟ ಬಳಿಯ ಕರ್ನಾಟಕ ಹನಸೇವಾ ವೃದ್ದಾಶ್ರಮಕ್ಕೆ ಸೇರಿದವರು. ವೃದ್ದರಿಗೆ ಉಚಿತ ಚಿಕಿತ್ಸೆ ನೀಡಿ ಕಳುಹಿಸಿಕೊಡಲಾಗಿದೆ. ಎಲ್ಲಾ ವೃದ್ದರಿಗೂ ಪ್ರತ್ಯೇಕ ಕೊಠಡಿ ಮಾಡಿ ಚಿಕಿತ್ಸೆ ನೀಡಲಾಗಿತ್ತು. ವೃದ್ದಾಶ್ರಮಕ್ಕೆ ಒಂದು ಲಕ್ಷ ಹಣ  ಹಾಗೂ ಕ್ವಿಂಟಾಲ್ ಅಕ್ಕಿಯನ್ನು ಆಸ್ಪತ್ರೆ ಮುಖ್ಯಸ್ಥ ಮುನಿರಾಜು ನೀಡಿದ್ದಾರೆ.