Asianet Suvarna News Asianet Suvarna News

ದೇವಿ ಭಾಗವತ: ಮೃತ್ಯುವಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿದರೂ ವಿಧಿನಿಯಮದಂತೆ ಪರಿಕ್ಷಿತನಿಗೆ ಸಾವು

ಸಾವಿನ ಭಯದಿಂದ ಪರೀಕ್ಷಿತ ಮಹಾರಾಜನ ತನ್ನ ಮಂತ್ರಿಗಳನ್ನೇ ರಕ್ಷಕರನ್ನಾಗಿ ಮಾಡಿಕೊಂಡು 7 ಅಂತಸ್ತಿನ ಅರಮನೆಯನ್ನು ಕಟ್ಟಿಸಿಕೊಂಡು ಅಲ್ಲಿರುತ್ತಾನೆ. ಆ ಅರಮನೆಗೆ ಭದ್ರತೆಯನ್ನೂ ಮಾಡಿಕೊಳ್ಳುತ್ತಾನೆ. ವಿಪ್ರಶಾಪದಿಂದ ಮುಕ್ತಿಗಾಗಿ ತಕ್ಷಕ, ಪರಿಕ್ಷಿತನನ್ನು ಕಚ್ಚಲು ಬರುತ್ತಾನೆ. 

ಸಾವಿನ ಭಯದಿಂದ ಪರೀಕ್ಷಿತ ಮಹಾರಾಜನ ತನ್ನ ಮಂತ್ರಿಗಳನ್ನೇ ರಕ್ಷಕರನ್ನಾಗಿ ಮಾಡಿಕೊಂಡು 7 ಅಂತಸ್ತಿನ ಅರಮನೆಯನ್ನು ಕಟ್ಟಿಸಿಕೊಂಡು ಅಲ್ಲಿರುತ್ತಾನೆ. ಆ ಅರಮನೆಗೆ ಭದ್ರತೆಯನ್ನೂ ಮಾಡಿಕೊಳ್ಳುತ್ತಾನೆ. ವಿಪ್ರಶಾಪದಿಂದ ಮುಕ್ತಿಗಾಗಿ ತಕ್ಷಕ, ಪರಿಕ್ಷಿತನನ್ನು ಕಚ್ಚಲು ಬರುತ್ತಾನೆ. ರಾಜಭಟರು ತಂದು ಕೊಟ್ಟ ಹಣ್ಣಿನಲ್ಲಿ ಚಿಕ್ಕ ಹುಳುವಾಗಿ ತಕ್ಷಕ ಸೇರಿಕೊಳ್ಳುತ್ತಾನೆ. ಪರೀಕ್ಷಿತ ಆ ಹಣ್ಣನ್ನು ಕತ್ತರಿಸಿದಾಗ ಹುಳು ಕಾಣಿಸುತ್ತದೆ. ಆ ಹುಳು ತಕ್ಷಕನಾಗಿ ಪರೀಕ್ಷಿತನ ಕೊರಳಿಗೆ ಸುತ್ತಿಕೊಂಡು ಸಾಯಿಸುತ್ತಾನೆ. ಹೀಗೆ ಮೃತ್ಯುವಿನಿಂದ ಪರೀಕ್ಷಿತನಿಗೆ ತಪ್ಪಿಸಿಕೊಳ್ಳಲು ಆಗಲೇ ಇಲ್ಲ.

ದೇವಿ ಭಾಗವತ : ನೀರು ಸಿಗದ ಕೋಪಕ್ಕೆ ಆಶ್ರಮಕ್ಕೆ ನುಗ್ಗಿ, ಮುನಿಪುತ್ರನ ಶಾಪಕ್ಕೆ ಗುರಿಯಾದ ಪರೀಕ್ಷಿತ!
 

Video Top Stories