Asianet Suvarna News Asianet Suvarna News

ಘೋಷಣೆಗೆ ಮಾತ್ರ ಸೀಮಿತವಾಯ್ತಾ?: ಖಾಸಗಿ ಶಾಲಾ ಶಿಕ್ಷಕ, ಸಿಬ್ಬಂದಿಗೆ ಸಿಗದ ನೆರವು..!

* ಕೋವಿಡ್ ನೆರವಿನ ಪ್ಯಾಕೇಜ್ ಶಿಕ್ಷಕರ ಪಾಲಿನ ಬಿಸಿಲು ಕುದುರೆ
* ಪರಿಹಾರ ಘೋಷಿಸಿ ಮೂರು ತಿಂಗಳಾದರೂ ಸಿಕ್ಕಿಲ್ಲ ಬಿಡಿಗಾಸು
* ಘೋಷಣೆಗೆ ಮಾತ್ರ ಸೀಮಿತವಾಯ್ತ ಶಿಕ್ಷಕರಿಗೆ ಪ್ಯಾಕೇಜ್ 
 

ಗದಗ(ಸೆ.15):  ಅವ್ರೆಲ್ಲ ಶಾಲೆ, ಮಕ್ಕಳು ಶಿಕ್ಷಣ ಅಂತಾ ಪಾಠ ಮಾಡ್ಕೊಂಡಿದ್ದವರು. ಕೋವಿಡ್ ನಿಂದಾಗಿ ಅವರ ಜೀವನವೇ ಬೀದಿಗೆ ಬಂದಿತ್ತು. ಖಾಸಗಿ ಶಾಲೆಯ ಶಿಕ್ಷಕರು ತಮ್ಮ ಕೆಲಸ ಬಿಟ್ಟು ಪರ್ಯಾಯ ಕೆಲಸ ಮಾಡೋದಕ್ಕೆ ಮುಂದಗಿದ್ರು.. ಸಂಕಷ್ಟದಲ್ಲಿರೋ ಶಿಕ್ಷಕರ ನೆರವಿಗೆ ಅಂತಾ ಸರ್ಕಾರ ಪರಿಹಾರ ಘೋಷಣೆ ಮಾಡಿದ್ರೂ ಅವರ ಸಂಕಷ್ಟದ ದಿನಗಳು ಇನ್ನೂ ಮುಂದುವರೆದಿದೆ. ಅಂದಿನ ಸಿಎಂ ಬಿಎಸ್‌ವೈ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ರು. ಆದ್ರೆ, ಈವರೆಗೂ ಗದಗ ಜಿಲ್ಲೆಯ ಬಹುತೇಕ ಶಿಕ್ಷಕರಿಗೆ ಪರಿಹಾರದ ಹಣ ಸಿಕ್ಕಿಲ್ಲ. 

ಧಾರವಾಡ ಎಮ್ಮೆಗೆ ಸಿಕ್ತು ರಾಷ್ಟ್ರೀಯ ಮಾನ್ಯತೆ..!

Video Top Stories