Asianet Suvarna News Asianet Suvarna News

Today Horoscope: ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ?

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

ಶ್ರೀ ಶೋಭಕೃನ್ನಾಮ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ,ಮಂಗಳವಾರ, ಏಕಾದಶಿ ತಿಥಿ, ಮೂಲ ನಕ್ಷತ್ರ.

ಮಂಗಳವಾರ ಮೂಲ ನಕ್ಷತ್ರ ಇರುವುದರಿಂದ ಸರಸ್ವತಿ ಪ್ರಾರ್ಥನೆ ಮಾಡಿ. ಆಕೆ ಸುಭ್ರತೆಯ ದೇವತೆಯಾಗಿದ್ದಾಳೆ. ವಿದ್ಯೆ, ಕಲೆ, ಸಾಹಿತ್ಯ ಎಲ್ಲಾ ನಮ್ಮನ್ನು ಸುಭ್ರಗೊಳಿಸುತ್ತದೆ. ಮೇಷ ರಾಶಿಯವರಿಗೆ ಆಹಾರದಲ್ಲಿ ವ್ಯತ್ಯಾಸವಾಗಲಿದ್ದು, ವಿದ್ಯಾರ್ಥಿಗಳಿಗೆ ತೊಂದರೆ. ಮಾತು ಕಠಿಣವಾಗಲಿದೆ. ವೃತ್ತಿಯಲ್ಲಿ ಅನುಕೂಲ. ದೇವತಾಕಾರ್ಯಗಳಲ್ಲಿ ಭಾಗಿ. ಸರಸ್ವತಿ ಪ್ರಾರ್ಥನೆ ಮಾಡಿ. ವೃಷಭ ರಾಶಿಯವರಿಗೆ ವೃತ್ತಿಯಲ್ಲಿ ಅನುಕೂಲ. ಆರೋಗ್ಯ ಸಮಸ್ಯೆ. ತಂದೆ-ಮಕ್ಕಳಲ್ಲಿ ಭಿನ್ನಾಭಿಪ್ರಾಯ. ಮನಸ್ಸು ಹಾಳಾಗಲಿದೆ. ಮಹಾಲಕ್ಷ್ಮೀ ಸನ್ನಿಧಾನಕ್ಕೆ ನವಧಾನ್ಯ ದಾನ ಮಾಡಿ. 

ಇದನ್ನೂ ವೀಕ್ಷಿಸಿ:  ಕೃಷ್ಣ vs ರಾಮ ಭಕ್ತರ ನಡುವೆ ಸವಾಲು..! ‘ಓರ್ಚಾ’ದ ಶ್ರೀರಾಮನಿಗೆ ಪೊಲೀಸರಿಂದ ಗನ್ ಸೆಲ್ಯೂಟ್..!