Asianet Suvarna News Asianet Suvarna News

Today Horoscope: ಇಂದು ಸಂಕಷ್ಟ ಚತುರ್ಥಿ ಇದ್ದು, ಗಣಪತಿಗೆ ಈ ರೀತಿಯಾಗಿ ಪೂಜೆ ಮಾಡಿ..

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
 

ಶ್ರೀ ಶೋಭಕೃನ್ನಾಮ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ಸೋಮವಾರ, ಚತುರ್ಥಿ ತಿಥಿ, ಪುಬ್ಬ ನಕ್ಷತ್ರ.

ಸೋಮವಾರ ಸಂಕಷ್ಟ ಹರ ಸೇರಿದೆ. ಇದು ತುಂಬಾ ಒಳ್ಳೆ ಯೋಗವಾಗಿದೆ. ಗಣಪತಿ ಆರಾಧನೆ ಮಾಡುವುದರಿಂದ ರೋಗದ ಮೂಲ ಇಲ್ಲದ ಹಾಗೆ ಮಾಡಬಹುದು. ಗಣಪತಿಗೆ ಕೆಂಪು ಬಣ್ಣ ತುಂಬಾ ಪ್ರಿಯವಾದದ್ದು ಆಗಿದೆ. ಮಿಥುನ ರಾಶಿಯವರಿಗೆ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. ಅಲರ್ಜಿಗಳಾಗುವ ಸಾಧ್ಯತೆ. ಸಹೋದರರ ಸಹಕಾರ. ವಿದ್ಯಾರ್ಥಿಗಳಿಗೆ ಬಲ. ವೃತ್ತಿಯಲ್ಲಿ ಬಲ. ಬುಧಕವಚ ಪಠಿಸಿ. ಕರ್ಕಟಕ ರಾಶಿಯವರಿಗೆ ಧನ ಸಮೃದ್ಧಿ. ಸುಗ್ರಾಸ ಭೋಜನ. ಕುಟುಂಬ ಸಹಕಾರ. ವೃತ್ತಿಯಲ್ಲಿ ಅನುಕೂಲ. ದಾಂಪತ್ಯದಲ್ಲಿ ಮನಸ್ತಾಪ. ಶಿವಶಕ್ತಿಯರ ಪ್ರಾರ್ಥನೆ ಮಾಡಿ.

ಇದನ್ನೂ ವೀಕ್ಷಿಸಿ:  ಕೌಸಲ್ಯೆಯ ಪುತ್ರನಿಗೆ ಜಗಮಗ ಅಲಂಕಾರ..ಆಭರಣಗಳ ಬೆಲೆ ಎಷ್ಟು ಕೋಟಿ..?

Video Top Stories