Asianet Suvarna News Asianet Suvarna News

Today Horoscope: ಇಂದು ಬನದ ಹುಣ್ಣಿಮೆ ಇದ್ದು, ಬನಶಂಕರಿ ಅಮ್ಮನವರ ಪ್ರಾರ್ಥನೆ ಮಾಡಿ..

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
 

ಶ್ರೀ ಶೋಭಕೃನ್ನಾಮ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ಗುರುವಾರ, ಪೌರ್ಣಮಿ ತಿಥಿ, ಪುನರ್ವಸು ನಕ್ಷತ್ರ.

ಗುರುವಾರ ಪೌರ್ಣಮಿ ಬಂದಿದ್ದರಿಂದ ಇದನ್ನು ಬನದ ಹುಣ್ಣಿಮೆ ಎಂದು ಕರೆಯಲಾಗುತ್ತದೆ. ಹಾಗಾಗಿ ಇಂದು ಬನಶಂಕರಿ ಅಮ್ಮನವರ ಪ್ರಾರ್ಥನೆ ಮಾಡಿ. ಇಂದು ಯಾವ ಕೋರಿಕೆಯೊಂದಿಗೆ ತಾಯಿ ದರ್ಶನಕ್ಕೆ ಹೋಗುತ್ತಿರೋ, ಅದು ಒಂದು ವರ್ಷದೊಳಗೆ ನೆರವೇರಲಿದೆ. ಇಂದು ಚಂದ್ರನ ದರ್ಶನ ಮಾಡುವುದರಿಂದ ಮನಸ್ಸಿನ ಮಾನಸಿಕ ಖಿನ್ನತೆ ದೂರವಾಗಲಿದೆ. ಈ ದಿನ ಕನ್ಯಾ ರಾಶಿಯವರಿಗೆ ಲಾಭದಾಯಕವಾದ ದಿನವಾಗಿದೆ. ಕೃಷಿಕರಿಗೆ, ವ್ಯಾಪಾರಿಗಳಿಗೆ ಲಾಭಕರವಾದ ದಿನವಾಗಿದೆ. ಸಂಗಾತಿಯಲ್ಲಿ ವಿರೋಧ ಉಂಟಾಗಲಿದ್ದು, ಅಮ್ಮನವರ ಪ್ರಾರ್ಥನೆ ಮಾಡಿ. 

ಇದನ್ನೂ ವೀಕ್ಷಿಸಿ: ಕೊರೆವ ಚಳಿಯಲ್ಲೂ ಲಕ್ಷಾಂತರ ಭಕ್ತರು ರಾಮಲಲ್ಲಾ ದರ್ಶನ, ಆರ್ಥಿಕ ಕೇಂದ್ರ ಬಿಂದುವಾದ ಆಯೋಧ್ಯೆ!

Video Top Stories