Asianet Suvarna News Asianet Suvarna News

Today Horoscope: ಇಂದು ಪ್ರದೋಷ ಪೂಜೆ ಮಾಡಿ..ಇದರಿಂದ ದೊರೆಯುವ ಫಲಗಳೇನು ಗೊತ್ತಾ ?

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

ಶ್ರೀ ಶೋಭಕೃನ್ನಾಮ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ಮಂಗಳವಾರ,ತ್ರಯೋದಶಿ ತಿಥಿ, ಆರಿದ್ರಾ ನಕ್ಷತ್ರ.

ಈ ದಿನ ಮಂಗಳವಾರ ಆಗಿರುವುದರಿಂದ ಪ್ರದೋಷ ಪೂಜೆ ಮಾಡಬಹುದು. ಇದರಿಂದ ಶತ್ರುಗಳ ಬಾಧೆ ದೂರವಾಗಲಿದೆ. ಶಿವನಿಗೆ 32 ದೀಪಗಳನ್ನು ಹಚ್ಚಿ, ಮೌನವ್ರತ ಮಾಡುವುದು ಒಳ್ಳೆಯದು. ಅಲ್ಲದೇ ಶಿವನಿಗೆ ಇಷ್ಟ ಎನಿಸುವ ರುದ್ರಪಾರಾಯಣ ಮಾಡಬೇಕು. ಕೋಪದ ನಿವಾರಣೆಗೆ ಇದು ತುಂಬಾ ಸೂಕ್ತವಾದದ್ದು ಆಗಿದೆ. ಈ ದಿನ ಕರ್ಕಟಕ ರಾಶಿಯವರಿಗೆ ನಷ್ಟಫಲವಿದೆ. ದಾಂಪತ್ಯದಲ್ಲಿ ಮನಸ್ತಾಪ ಬರಲಿದೆ. ಲಾಭವೂ ಇದೆ. ಇಂದು ಪ್ರದೋಷ ಪೂಜೆಯನ್ನು ಮಾಡಿ.   

ಇದನ್ನೂ ವೀಕ್ಷಿಸಿ:  ನರೇಂದ್ರ ಮೋದಿ ಬಂದ ಮೇಲೆ ಹಿಂದೂಗಳ ಸ್ವಾಭಿಮಾನ ಜಾಗೃತವಾಗಿದೆ: ಅವಿಮುಕ್ತೇಶ್ವರಾನಂದ ಮಹಾರಾಜ್