Asianet Suvarna News Asianet Suvarna News

ಆ ಒಂದು ವದಂತಿಯೇ ರೇಖಾ ಹತ್ಯೆಗೆ ಕಾರಣವಾಯ್ತಾ..?

 ಪಾಲಿಕೆ ಮಾಜಿ ಸದಸ್ಯೆ ರೇಖಾ ಕದಿರೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ ಮಾಲಾ ಹಾಗೂ ಆಕೆಯ ಪುತ್ರ ಆರುಳ್‌ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಹತ್ಯೆಗೆ ಬೇರೆ ಬೇರೆ ಕಾರಣಗಳು ಹೊರ ಬಿದ್ದಿದೆ. 

ಬೆಂಗಳೂರು (ಜೂ. 29): ಪಾಲಿಕೆ ಮಾಜಿ ಸದಸ್ಯೆ ರೇಖಾ ಕದಿರೇಶ್  ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ ಮಾಲಾ ಹಾಗೂ ಆಕೆಯ ಪುತ್ರ ಆರುಳ್‌ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಹತ್ಯೆಗೆ ಬೇರೆ ಬೇರೆ ಕಾರಣಗಳು ಹೊರ ಬಿದ್ದಿದೆ.

ರೇಖಾ ಹತ್ಯೆಗೆ 3 ತಿಂಗಳ ಹಿಂದೆಯೇ ನಡೆದಿತ್ತು ಸ್ಕೆಚ್, ಆರೋಪಿಗಳ ಪ್ಲ್ಯಾನ್ ಹೀಗಿತ್ತು

ಬೇರೆ ಕೇಸ್‌ನಲ್ಲಿ ಆರುಳ್ ಜೈಲು ಸೇರಿದ್ದ. ಆಗ ಮಾಲಾ, ರೇಖಾ ಬಳಿ ಪುತ್ರನ ಬಿಡುಗಡೆಗೆ ನೆರವು ಕೋರಿದ್ದಳು. ಆದರೆ ರೇಖಾ ನಿರಾಕರಿಸಿದ್ದರು. ಈ ವಿಚಾರ ತಿಳಿದ ಆರುಳ್, ರೇಖಾಳ ಹತ್ಯೆಗೆ ಜೈಲಿನಲ್ಲೇ ಸ್ಕೆಚ್ ಹಾಕಿದ್ದ. ಜೈಲಿನಿಂದ ಹೊರ ಬಂದ ಬಳಿಕ ಪೀಟರ್‌ಗೆ ಈ ವಿಚಾರ ಹೇಳಿ ಹತ್ಯೆಗೆ ಪ್ರಚೋದಿಸಿದ್ದ ಎನ್ನಲಾಗಿದೆ. 

Video Top Stories