Asianet Suvarna News Asianet Suvarna News

ಪ್ರತ್ಯೇಕ ಪ್ರಕರಣ: ಹೆತ್ತ ಮಕ್ಕಳಿಂದಲೇ ತಂದೆಯ ಹತ್ಯೆ..ಬಳಿಕ ಆರೋಪಿಗಳು ಪೊಲೀಸರಿಗೆ ಶರಣು

ರಾಯಚೂರಿನಲ್ಲಿ ಮಗನೇ ತಂದೆಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ನಡೆದಿದೆ.
 

ಚಿತ್ರದುರ್ಗ/ರಾಯಚೂರು: ಹೆತ್ತ ಮಕ್ಕಳಿಂದಲೇ ತಂದೆಯ ಹತ್ಯೆ ನಡೆದಿರುವ ಘಟನೆ ರಾಯಚೂರು(Raichur)ಮತ್ತು ಚಿತ್ರದುರ್ಗದಲ್ಲಿ( Chitradurga) ನಡೆದಿದೆ. ರಾಯಚೂರು ಜಿಲ್ಲೆ ಲಿಂಗಸೂಗೂರು ತಾ. ದೇವರಭೂಪೂರು ಗ್ರಾಮದಲ್ಲಿ ತಂದೆಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ(Murder) ಮಾಡಿದ್ದಾನೆ. ಗಾಂಜಾ, ಮದ್ಯ ಸೇವಿಸಿ ತಾಯಿಗೆ ನಿತ್ಯ ಕಿರುಕುಳವನ್ನು ತಂದೆ ನೀಡುತ್ತಿದ್ದ. ತಂದೆಯ ಕಿರುಕುಳಕ್ಕೆ ಬೇಸತ್ತು, ಕುಟುಂಬಸ್ಥರ ಎದುರೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬಂಡಿ ತಿಮ್ಮಣ್ಣ (55) ಕೊಲೆಯಾದ ತಂದೆ. ಶೀಲವಂತ (32) ಕೊಲೆಗೈದ ಮಗ. ತಂದೆಯನ್ನು ಕೊಂದು ತಾನೇ ಪೊಲೀಸರಿಗೆ ಕರೆ ಮಾಡಿ‌ ಮಾಹಿತಿ ನೀಡಿದ್ದಾನೆ. 112ಕ್ಕೆ ಕರೆ ಮಾಡಿ ಆರೋಪಿ ಮಗ ಶೀಲವಂತ ಮಾಹಿತಿ ನೀಡಿದ್ದಾನೆ. ಮಾಹಿತಿ ‌ಬಂದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಲಿಂಗಸೂಗೂರು ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ. ಈ ಪ್ರಕರಣ ಸಂಬಂಧ ಲಿಂಗಸೂಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ವೀಕ್ಷಿಸಿ:  ಉಗ್ರರಿಗೆ ಸಾವಿನ ಭಯ ಹುಟ್ಟಿಸಿದ ‘ಟೆಡ್ಡಿಬೇರ್’..! ಇಸ್ರೇಲ್‌ಗೆ ಆಪತ್ತು ಬಂದಾಗೆಲ್ಲ ರಕ್ಷಕನಾಗೋ ಡಿ9ಆರ್ !

Video Top Stories