14 ವರ್ಷದ ಬಾಲಕನ ಬರ್ಬರ ಹತ್ಯೆ: ಸ್ನೇಹಿತೆಯ ಬಗ್ಗೆ ಮಾತನ್ನಾಡಿದಕ್ಕೆ ಕೊಲೆ..!

ಮುನಿಸಿಕೊಂಡು ಹೋದವನು ವಾಪಸ್ ಬರಲಿಲ್ಲ..!
ರಾತ್ರಿ ಹೋದ ಮಗ ಬೆಳಗಾಗುವಷ್ಟರಲ್ಲಿ ಹೆಣವಾಗಿದ್ದ..!
ಕೊಲೆ ಮಾಡಿ ಏನೂ ಗೊತ್ತಿಲ್ಲದಂತೆ ನಾಟಕವಾಡಿದ್ರು..!

First Published Oct 31, 2023, 3:20 PM IST | Last Updated Oct 31, 2023, 3:20 PM IST

ಆ ಕೊಲೆ ಪ್ರಕರಣ ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿರುವ ನಗರವನ್ನೇ ಬೆಚ್ಚಿ ಬೀಳಿಸಿತ್ತು. ಹಿಂದೂ ಮುಸ್ಲಿಂ ಅಂತರ್ ಧರ್ಮ ವಿವಾಹವಾಗಿದ್ದ(Inter religion) ದಂಪತಿಯ 14 ವರ್ಷದ ಪುತ್ರನನ್ನು ತಲೆ ಮೇಲೆ ಕಲ್ಲು ಎತ್ತಿ ಕೊಲೆ(Murder) ಮಾಡಿದ್ರು ಹಂತಕರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರಿಗೂ ಒಂದೇ ಒಂದು ಕ್ಲೂ ಸಿಕ್ಕಿರಲಿಲ್ಲ. ಹೆತ್ತವರ ಮೇಲೆ ಮುನಿಸಿಕೊಂಡು ಮನೆ ಬಿಟ್ಟು ಹೋದ ಸಾಕೀಬ್ ಕೊಲೆಯಾಗಿ ಹೋಗಿದ್ದ.ಒಂದು ವೇಳೆ ಸಾಕೀಬ್ ತಾಯಿಯ ಎರಡನೇ ಕಾಲ್ ರಿಸೀವ್ ಮಾಡಿ ಬಿಟ್ಟಿದ್ದಿದ್ರೆ ಆತ ಇವತ್ತು ಜೀವಂತವಾಗಿರುತ್ತಿದ್ದ. 14 ವರ್ಷದ ಸಾಕೀಬ್ ತನ್ನ ಹೆತ್ತವರ ಮೇಲೆ ಸಿಟ್ಟು ಮಾಡಿಕೊಂಡು ತನ್ನ ಗೆಳೆಯರು ಇದ್ದ ಪಾರ್ಕ್ ಬಳಿ ಬಂದಿದ್ದ.ತನ್ನ ಸ್ನೇಹಿತರ ಜೊತೆ ಹರಟೆ ಹೊಡ್ಕೊಂಡು ಕೂತಿದ್ದ. ಆದ್ರೆ ಇದೇ ವೇಳೆಯಲ್ಲಿ ತನ್ನ ಸ್ನೇಹಿತನ ಮೊಬೈಲ್‌ನಲ್ಲಿದ್ದ(Mobile) ಗ್ಯಾಲರಿ ಓಪನ್ ಮಾಡಿದ ಸಾಕೀಬ್ ಗ್ಯಾಲರಿಯಲ್ಲಿದ್ದ ಸ್ನೇಹಿತನ ಗೆಳತಿಯ ಫೋಟೋಗಳಿಗೆ ಕೆಟ್ಟದ್ದಾಗಿ ಕಮೆಂಟ್ ಮಾಡಿದ್ದ. ಫೋಟೋಗಳ ಬಗ್ಗೆ ಅಶ್ಲೀಲವಾಗಿ ಮಾತನ್ನಾಡಿದ್ದ. ಯಾವಾಗ ತನ್ನ ಗೆಳತಿ ಬಗ್ಗೆ ಸಾಕೀಬ್ ಕೆಟ್ಟದಾಗಿ ಮಾತನ್ನಾಡಿದ್ನೋ ಆ ಸ್ನೇಹಿತ ಕೈನಲ್ಲಿದ್ದ ಕಲ್ಲನ್ನ ತೆಗೆದು ಆತನ ತಲೆಗೆ ಬಲವಾಗಿ ಹೊಡೆದೇ ಬಿಟ್ಟ. ಸಾಕೀಬ್ ಅಲ್ಲೇ ಕುಸಿದು ಬಿದ್ದ.. ಇನ್ನೂ ಸ್ನೇಹಿತ ಸಾಕೀಬ್ ಕಥೆಯನ್ನ ಮುಗಿಸುತ್ತಿದ್ರೆ ಅಲ್ಲೇ ಇದ್ದ ಇನ್ನಿಬ್ಬರು ಸ್ನೇಹಿತರು ಹಂತಕನಿಗೆ ಸಾಥ್ ಕೊಟ್ಟಿದ್ರು. ಈ ಮೊಬೈಲ್ನಿಂದ ಜೀವ ಹೋದ ಕಥೆಗಳನ್ನ ನಾವು ಕೇಳ್ತಾನೇ ಇರ್ತೀವಿ.. ಅದರಲ್ಲಿ ಸಾಕೀಬ್ನದ್ದು ಲೇಟೆಸ್ಟ್ ಎಕ್ಸಾಂಪಲ್ ಅಷ್ಟೇ ಆದ್ರೆ. ಸಾಕೀಬ್ ಕೆಟ್ಟದಾಗಿ ಕಮೆಂಟ್ ಮಾಡಿದ ಅನ್ನೋ ಒಂದೇ ಕಾರಣಕ್ಕೆ ಸ್ನೇಹಿತರೇ ಕೊಲೆ ಮಾಡಿದ್ದು ನಿಜಕ್ಕೂ ಶಾಕಿಂಗ್.

ಇದನ್ನೂ ವೀಕ್ಷಿಸಿ:  ಯಾರಿದು ಜೆಹುವಾಹ್ಸ್ ವಿಟ್ನೆಸ್..? ಏನಿವರ ಇತಿಹಾಸ..? ಶರಣಾಗುವ ಮುನ್ನ ಹೇಳಿದ್ದೇನು ಮಾರ್ಟಿನ್..?

Video Top Stories